ಬಿಗಿಭದ್ರತೆಯ ನಡವೆ ಜ್ಞಾನವ್ಯಾಪಿ ಮಸೀದಿ ವೀಡಿಯೋ ಸಮೀಕ್ಷೆ….
ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೀಡಿಯೋಗ್ರಾಫಿಕ್ ಸಮೀಕ್ಷೆ ಇಂದು ಭಾರಿ ಬಿಗಿ ಭದ್ರತೆಯ ನಡುವೆ ಪುನರಾರಂಭವಾಗಿದೆ. ನ್ಯಾಯಾಲಯದಿಂದ ನೇಮಕಗೊಂಡ ಆಯುಕ್ತರ ನೇತೃತ್ವದಲ್ಲಿ 35 ಜನರ ತಂಡ ಮಸೀದಿ ಸಂಕೀರ್ಣದಲ್ಲಿ ಕಾರ್ಯಾಚರಣೆ ನಡೆಸಿತು.
ವಾರಣಾಸಿ ಪೊಲೀಸ್ ಕಮಿಷನರ್ ಎ.ಸತೀಶ್ ಗಣೇಶ್ ಮಾತನಾಡಿ, ಸರ್ವೆ ಶಾಂತಿಯುತವಾಗಿ ಸಾಗಿದ್ದು, ನ್ಯಾಯಾಲಯದ ಆದೇಶದಂತೆ ನಾಳೆಯೂ ಕಾಮಗಾರಿ ಮುಂದುವರಿಯಲಿದೆ ಎಂದು ತಿಳಿಸಿದರು. ಮಸೀದಿಯ ಸುತ್ತಮುತ್ತಾ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮತ್ತು ಮಸೀದಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳನ್ನು ಮುಚ್ಚಲಾಯಿತು.
ಇದಕ್ಕೂ ಮುನ್ನ ಈ ಪ್ರಕ್ರಿಯೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ವಾರಣಾಸಿ ನ್ಯಾಯಾಲಯದ ಆದೇಶದಂತೆ ವಿಡಿಯೋಗ್ರಾಫಿಕ್ ಸಮೀಕ್ಷೆ ನಡೆಸಲಾಗುತ್ತಿದೆ. ಮೇ 17ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವಿವರವಾದ ವರದಿಯನ್ನು ತನ್ನ ಮುಂದೆ ಸಲ್ಲಿಸುವಂತೆ ವಾರಣಾಸಿ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಸೂಚಿಸಿದೆ.