ವಿಧಾನ ಮಂಡಲ ಅಧಿವೇಶನ | ಕಾಂಗ್ರೆಸ್ ಗದ್ದಲ.. ಕಲಾಪ ಮುಂದೂಡಿಕೆ
ಬೆಂಗಳೂರು : ಇಂದಿನಿಂದ ಆರಂಭವಾಗಿರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರ ಗದ್ದಲ ಹಿನ್ನೆಲ ಸದನವನ್ನ ಮುಂದೂಡಿಕೆ ಮಾಡಲಾಗಿದೆ. ಸ್ಪೀಕರ್ ಕಾಗೇರಿ ಅವರು ಸದನವನ್ನ 5 ನಿಮಿಷಗಳ ಮುಂದೂಡಿಕೆ ಮಾಡಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಆಡಳಿತರೂಢ ಪಕ್ಷದ ವಿರುದ್ಧ ಮುಗಿಬಿದ್ದಿವು. ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಅಲ್ಲದೆ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು. ಬೇರೆ ಸಿದ್ದಾಂತ ಇಟ್ಟುಕೊಂಡು ಈ ಬಗ್ಗೆ ಬೇಡ ಎಂದು ಒಂದು ದೇಶ ಒಂದು ಚುನಾವಣೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಇದೊಂದು ಆರ್ ಎಸ್ ಎಸ್ ಅಜೆಂಡಾ ಅಂತ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು ಒಂದು ದೇಶ ಒಂದು ಚುನಾವಣೆ ಪ್ರತಿಯನ್ನೇ ಹರಿದು ಹಾಕಿ ವಿರೋಧ ವ್ಯಕ್ತ ಪಡಿಸಿದರು.
ಈ ಹಂತದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಪಕ್ಷಗಳ ನಡೆ ನಾಚಿಕೆಗೇಡಿತನದ್ದು.
ಒಂದು ದೇಶ ಒಂದು ಚುನಾವಣೆ ಸವಾಲಿನದ್ದು. ಈ ವಿಚಾರದಲ್ಲಿ ಚರ್ಚೆ ಮಾಡಿ. ವಿರೋಧ ಪಕ್ಷಗಳಿಗೆ ಯಾವುದರ ಮೇಲೆ ನಂಬಿಕೆ ಇಲ್ಲ ಅಂತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ಮತ್ತಷ್ಟು ಕೆರಳಿದ ಕಾಂಗ್ರೆಸ್ ನಾಯಕರು ಸರ್ಕಾರ, ಸ್ಪೀಕರ್ ವಿರುದ್ಧ ಧಿಕ್ಕಾರಿ ಕೂಗಿ ಪ್ರತಿಗಳನ್ನ ಹರಿದು ಹಾಕಿದರು. ಇದರಿಂದ ಸ್ಪೀಕರ್ ಅವರು 15 ನಿಮಿಷಗಳ ಕಾಲ ಕಲಾಪವನ್ನ ಮುಂದೂಡಿಕೆ ಮಾಡಿದ್ದಾರೆ.