Bank | ನಕಲಿ ದಾಖಲೆ ಸೃಷ್ಠಿಸಿ 3.15 ಕೋಟಿ ಪಂಗನಾಮ
ವಿಜಯನಗರ : ಪ್ರತಿಷ್ಠಿತ ವಿಡಿಸಿಸಿ ಬ್ಯಾಂಕ್ನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಂತರ ರೂಪಾಯಿ ವಂಚನೆಗೈದಿರುವ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
2022 ಮೇ 1 ರಂದೇ ಈ ಬಗ್ಗೆ ಗಾಂಧಿಚೌಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೋಲಿಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಇನ್ನೂ ಒಟ್ಟು 8 ಜನ ಸಾಲಗಾರರು ಹಾಗೂ 11 ಜನ ಜಾಮೀನುದಾರರು ಬ್ಯಾಂಕ್ನ ಸದಸ್ಯತ್ವ ಹೊಂದಿ ಖಾತೆ ಹೊಂದಿರುತ್ತಾರೆ.
ಅದರಂತೆ ಇನ್ನೂ 3 ಜನರೊಂದಿಗೆ ಕೂಡಿ ಬ್ಯಾಂಕ್ನಿಂದ ಸಾಲ ಪಡೆಯಲು ಸುಳ್ಳು ಸ್ಪಷ್ಟನೆ ನೀಡಿ ಮತ್ತು ಖೊಟ್ಟಿ ದಾಖಲಾತಿಗಳನ್ನು ನೀಡಿ ಮತ್ತು ಖೊಟ್ಟಿ ಮೊಹರು, ಸಹಿ ಮಾಡಿ ದಾಖಲಾತಿಗಳನ್ನು ನೈಜವೆಂದು ನಂಬಿಸಿ ಮೋಸ ಮಾಡಿದ್ದಾರೆ.
ಎಲ್ಲ ಖೊಟ್ಟಿ ದಾಖಲೆಗಳನ್ನು ವಿಡಿಸಿಸಿ ಮಹಿಳಾ ಶಾಖೆ ಹಾಗೂ ಕೇಂದ್ರ ಕಚೇರಿಗೆ ನೀಡಿ ಸಾಲ ಪಡೆದು ವಂಚನೆಗೈದಿದ್ದಾರೆ. ಈ ಕುರಿತು ಗಾಂಧಿಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಹಾಗೂ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ್ ಈಗಾಗಲೇ ಬ್ಯಾಂಕ್ ನ ಇಬ್ಬರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದರು.
ಇನ್ನೂ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಎಚ್ ಡಿ ಆನಂದಕುಮಾರ ಪ್ರತಿಕ್ರಿಯೆ ನೀಡಿ ಬ್ಯಾಂಕಿನಲ್ಲಿ ಕೊಟ್ಟಿ ದಾಖಲೆ ಸೃಷ್ಟಿಸಿ ಸಾಲ ಪಡೆದ ಕುರಿತು ದೂರು ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ ಎನ್ನುತ್ತಿದ್ದಾರೆ.