ಮನೆಗಳಿಗೆ ನುಗ್ಗಿದ ಮಳೆ ನೀರು – ರಾತ್ರಿ ಪೂರ ಮನೆ ಹೊರಗೆ ಕಾಲ ಪಕಳೆದ ಕುಟುಂಬಗಳು
ವಿಜಯನಗರ : ನಿನ್ನೆ ವಿಜಯನಗರ ಸೇರಿ ಸುತ್ತಮುತ್ತ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ ಜನರ ನಿದ್ದೆಗೆಡಿಸಿದೆ.. ಹೂವಿನ ಹಡಗಲಿಯ ಕೆಇಬಿ ಕಾಲೋನಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.. ಕೆಇಬಿ ನೌಕರರ ಮನೆಗಳಿಗೆ ಮಳೆ ನೀರು ನುಗ್ಗಿದ್ದ ಪರಿಣಾಮ ರಾತ್ರಿಯಿಡೀ ನಿದ್ದೆ ಮಾಡದೇ ಕುಟುಂಬಸ್ಥರು ಮನೆಯಾಚೆಯೇ ಜಾಗರಣೆ ಮಾಡುವಂತಾಗಿದೆ..
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಕೆಇಬಿ ನೌಕರರು ಹೈರಾಣಾಗಿದ್ದಾರೆ. ಮೊಣಕಾಲಿನವರೆಗೆ ಮಳೆ ನೀರು ನಿಂತಿದ್ದು, ನೀರು ಹೊರಹಾಕಲು ಕುಟುಂಸ್ಥರು ಹರಸಾಹಸ ಪಟ್ಟಿದ್ದಾರೆ.. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನೀರು ಹೊರಗಡೆ ಹಾಕಿದ್ದಾರೆ. ಹಳ್ಳದ ನೀರು ಕೂಡ ಮಳೆ ನೀರಿನ ಜತೆ ಸೇರಿ ಮನೆಗೆ ನುಗ್ಗಿದ ಪರಿಣಾಮ ಈ ಅವಾಂತರ ಸೃಷ್ಟಿಯಾಗಿತ್ತು.. ಇದ್ರಿಂದಾಗಿ ರಾತ್ರಿ ಪೂರ ಮಕ್ಕಳು, ವೃದ್ಧರು ಸೇರಿ ಕುಟುಂಬಸ್ಥರು ತೊಂದರೆ ಅನುಭವಿಸುವಂತಾಯ್ತು.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 43,733 ಕೇಸ್ ಪತ್ತೆ
ಡಿಕೆಶಿ ಅವರೇ ಮುಂದಿನ ಸಿಎಂ – ಮಹಮ್ಮದ್ ಹ್ಯಾರಿಸ್ ನಲಪಾಡ್