ಶಾಸಕ ಪ್ರೀತಂಗೌಡ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ Saaksha Tv
ಹಾಸನ : ತಡರಾತ್ರಿ ಜಿಲ್ಲೆಯ ರಿಂಗ್ ರಸ್ತೆಯ ಉದ್ದೂರು ಗ್ರಾಮದಲ್ಲಿ ಶಾಸಕ ಪ್ರೀತಂಗೌಡರವರ ಬೆಂಬಲಿಗರು ಹಾಗೂ ಗ್ರಾಮಸ್ಥರು ನಡುವೆ ಮಾರಾಮಾರಿ ನಡೆದಿದೆ. ಐದುಕ್ಕೂ ಹೆಚ್ಚು ಮಂದಿಗೆ ಗಾಯಾಳುಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಹಾಸನದ ಡೈರಿ ವೃತ್ತದಿಂದ, ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿಯಾಗಿದ್ದು, ಈ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ಗ್ರಾಮದ ಸುರೇಶ್, ಆನಂದ, ಕೃಷ್ಣ, ಕುಮಾರಿ, ಲೋಲಾಕ್ಷಿ ಪರಿಹಾರ ಕೇಳಲು ಹೋದಾಗ ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ರಿಂಗ್ ರಸ್ತೆಗೆ ಭೂಮಿ ನೀಡಿದ್ದು ನಮಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು, ಆಗ ನ್ಯಾಯಾಲಯ ಕಳೆದ ಆಗಸ್ಟ್ 16 ರಂದು ಕಾಮಗಾರಿಗೆ ತಡೆ ಆಜ್ಞೆ ನೀಡಿತ್ತು. ನ್ಯಾಯಾಲಯದ ಆದೇಶದ ವಿರುದ್ಧವಾಗಿ ತಡರಾತ್ರಿ ಕಾಮಗಾರಿ ನಡೆಯುತ್ತಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ.
ನೀವು ನ್ಯಾಯಾಲಯದಲ್ಲಿ ಹಾಕಿರುವ ಕೇಸ್ ವಾಪಸ್ ಪಡೆಯಿರಿ. ಇಲ್ಲವಾದರೆ ನಿಮಗೆ ಯಾವುದೇ ರೀತಿಯ ಪರಿಹಾರ ಕೊಡುವುದಿಲ್ಲ. ನೀವು ಒಬ್ಬರೇ ಓಡಾಡಲ್ಲ ಎಲ್ಲರೂ ಓಡಾಡುತ್ತಾರೆ. ಎಂದು ಶಾಸಕ ಪ್ರೀತಂಗೌಡ ಹಾಗೂ ಬೆಂಬಲಿಗರು ಪ್ರತಿನಿತ್ಯ ಗ್ರಾಮಸ್ಥರಿಗೆ ಧಮ್ಕಿ ಹಾಕುತ್ತಿದ್ದಾರೆ. ಎಂದು ರೈತರು ಆರೋಪ ಮಾಡಿ, ಪೆನ್ ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ನೀಡಿದ್ದಾರೆ.