ವಿರಾಟ್ ನಡೆಗೆ ಕಪಿಲ್ ದೇವ್ ಬೇಸರ Virat Kohli saaksha tv
ನವದೆಹಲಿ : ಐಸಿಸಿ ಟಿ-20 ವಿಶ್ವಕಪ್ ಬಳಿಕ ಟಿ-20 ಭಾರತ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿರುವ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಬೇಸರ ಹೊರಹಾಕಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ ಕಪಿಲ್ ದೇವ್, ಇತ್ತೀಚಿಗೆ ಕೆಲ ಕ್ರಿಕೆಟಿಗರು ಏನು ಮಾಡಬೇಕು, ಏನು ಮಾಡಬಾರದು ಎಂಬ ನಿರ್ಧಾರ ತಾವೇ ಕೈಗೊಳ್ಳುತ್ತಿದ್ದಾರೆ.
ನನಗೆ ಇದು ವಿಚಿತ್ರವೆನಿಸುತ್ತದೆ. ವಿರಾಟ್ ಕೊಹ್ಲಿ ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಾನು ಯೋಚನೆ ಮಾಡಿರಲಿಲ್ಲ. ಇದು ನನಗೆ ವಿಚಿತ್ರವೆನಿಸುತ್ತದೆ.
ಇಂತಹ ನಿರ್ಧಾರಗಳ ಬಗ್ಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಮುಂದೆ ಹೇಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ವಿರಾಟ್ ಅದ್ಭುತ ಕ್ರಿಕೆಟಿಗ ಎಂದ ಕಪಿಲ್ ದೇವ್, ಬರುವ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.