ಮೈಸೂರು : ವಿಶ್ವನಾಥ್ ಗೆ ನನ್ನ ಮೇಲೆ ನಂಜು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಶ್ವನಾಥ್ ಗೆ ನನ್ನ ಮೇಲೆ ನಂಜು. ಪ್ರತಿ ಬಾರಿ ನನ್ನ ಹೆಸರನ್ನೆ ಹೇಳುತ್ತಾರೆ. ಅವರಿಗೆ ಅಧಿಕಾರಿ ಸಿಗದಿದ್ದಾಗ ನನ್ನ ಹೆಸರು ನೆನಪಾಗುತ್ತೆ. ವಿಶ್ವನಾಥ್ ದಡ್ಡನೋ..ಪೆದ್ದನೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ನಲ್ಲಿದ್ದೇನೆ. ಅವನು ಬಿಜೆಪಿಯಲ್ಲಿದ್ದಾನೆ. ನಾನು ಹೇಗೆ ಅವನಿಗೆ ಟಿಕೆಟ್ ತಪ್ಪಿಸಲಿ ಎನ್ನುವ ಮೂಲಕ ವಿಶ್ವನಾಥ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.