ಏನಿದು ಸಿಮ್ ಸ್ವಾಪ್ ವಂಚನೆ ? ಸೈಬರ್ ಕ್ರಿಮಿನಲ್ ಗಳು ನಮ್ಮನ್ನು ಟಾರ್ಗೆಟ್ ಮಾಡುವ ಬಗೆ ಹೇಗೆ?
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ನೆಟ್ ಬ್ಯಾಂಕಿಂಗ್ ಗಿಂತ ಹೆಚ್ಚು ಸಾಮಾನ್ಯವಾಗಿದೆ. ಮೊಬೈಲ್ ಬ್ಯಾಂಕಿಂಗ್ ತುಂಬಾ ಸುಲಭ ಮತ್ತು ಇದರ ಮೂಲಕ ಗ್ರಾಹಕರು ತಮಗೆ ಬೇಕಾದಾಗೆಲ್ಲಾ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್ ಗಳು ಇದರ ಲಾಭ ಪಡೆಯುತ್ತಿದ್ದಾರೆ. ಮೊಬೈಲ್ ಬ್ಯಾಂಕಿಂಗ್ಗೆ ಸಂಬಂಧಿಸಿದ ದೊಡ್ಡ ವಂಚನೆಯು ವರದಿಯಾಗಿದ್ದು, ಇದನ್ನು ಸಿಮ್ ಸ್ವಾಪ್ ವಂಚನೆ ಎಂದು ಕರೆಯಲಾಗಿದೆ.
ಸಿಮ್ ಸ್ವಾಪ್ ವಂಚನೆ ಎಂದರೇನು?
ಸಿಮ್ ಸ್ವಾಪ್ ವಂಚನೆ ಎಂದರೆ ಸಿಮ್ ಕಾರ್ಡ್ ಬದಲಿಸುವುದು ಅಥವಾ ಅದೇ ಸಂಖ್ಯೆಯಿಂದ ಇನ್ನೊಂದು ಸಿಮ್ ಪಡೆಯುವುದು. ಸಿಮ್ ವಿನಿಮಯದಲ್ಲಿ, ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಹೊಸ ಸಿಮ್ ನೋಂದಾಯಿಸಲಾಗುತ್ತದೆ. ಇದರ ನಂತರ, ನಿಮ್ಮ ಸಿಮ್ ಕಾರ್ಡ್ ಆಫ್ ಆಗುತ್ತದೆ ಮತ್ತು ನಿಮ್ಮ ಮೊಬೈಲ್ನಿಂದ ನೆಟ್ವರ್ಕ್ ಕಣ್ಮರೆಯಾಗುತ್ತದೆ. ಈ ಸಂದರ್ಭದಲ್ಲಿ ಸೈಬರ್ ಕ್ರಿಮಿನಲ್ ಗಳು ನಿಮ್ಮ ಮೊಬೈಲ್ ಸಂಖ್ಯೆಯಿಂದ ಸಿಮ್ ಅನ್ನು ಸಕ್ರಿಯಗೊಳಿಸುತ್ತಾರೆ ಮತ್ತು ಇದರ ಲಾಭವನ್ನು ಪಡೆದು, ಅವರು ನಿಮ್ಮ ಸಂಖ್ಯೆಗೆ OTP ಕೇಳುತ್ತಾರೆ. ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆದುಕೊಳ್ಳುತ್ತಾರೆ.
ಸೈಬರ್ ಕ್ರಿಮಿನಲ್ ಗಳು ನಮ್ಮನ್ನು ಟಾರ್ಗೆಟ್ ಮಾಡುವ ಬಗೆ ಹೇಗೆ?
ಸೈಬರ್ ಕ್ರಿಮಿನಲ್ ಗಳು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಫಿಶಿಂಗ್ ಅಥವಾ ಮಾಲ್ವೇರ್ ಮೂಲಕ ಪಡೆಯುತ್ತಾರೆ. ಇದರ ನಂತರ, ಅವರು ಮೊಬೈಲ್ ಕಳೆದುಕೊಂಡ ನೆಪದಲ್ಲಿ ಸರಿಯಾದ ಗ್ರಾಹಕರ ಗುರುತಿನೊಂದಿಗೆ ಮೊಬೈಲ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸುತ್ತಾರೆ. ಗ್ರಾಹಕರ ಪರಿಶೀಲನೆಯ ನಂತರ, ಮೊಬೈಲ್ ಸೇವಾ ಪೂರೈಕೆದಾರರು ಗ್ರಾಹಕರು ಹೊಂದಿರುವ ಹಳೆಯ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತಾರೆ ಮತ್ತು ಅಪರಾಧಿಗೆ ಹೊಸ ಸಿಮ್ ಕಾರ್ಡ್ ನೀಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರ ಫೋನ್ಗಳಲ್ಲಿ ನೆಟ್ವರ್ಕ್ ಲಭ್ಯವಿರುವುದಿಲ್ಲ.ಅಷ್ಟೇ ಅಲ್ಲ ಗ್ರಾಹಕರು ತಮ್ಮ ಫೋನ್ನಲ್ಲಿ ಯಾವುದೇ ಎಸ್ಎಂಎಸ್, ಅಲರ್ಟ್ಗಳು, ಒಟಿಪಿ, ಯುಆರ್ಎನ್ ಇತ್ಯಾದಿ ಮಾಹಿತಿಯನ್ನು ಸಹ ಪಡೆಯುವುದಿಲ್ಲ.
ಸಿಮ್-ಸ್ವಾಪ್ ತಪ್ಪಿಸಲು ಈ ವಿಷಯಗಳನ್ನು ನೆನಪಿಡಿ
ಜಾಗರೂಕರಾಗಿರಿ ಹಾಗೂ ನಿಮ್ಮ ಮೊಬೈಲ್ ಫೋನ್ನ ನೆಟ್ವರ್ಕ್ ಸ್ಥಿತಿಯ ಬಗ್ಗೆ ತಿಳಿದಿರಲಿ.
ನೀವು ದೀರ್ಘಕಾಲದವರೆಗೆ ಯಾವುದೇ ಕರೆ ಅಥವಾ SMS ಅಧಿಸೂಚನೆಗಳನ್ನು ಪಡೆಯುತ್ತಿಲ್ಲ ಎಂದು ಅನಿಸಿದರೆ ಮೊಬೈಲ್ ಆಪರೇಟರ್ ಬಳಿ ಈ ಬಗ್ಗೆ ವಿಚಾರಿಸಿ.
ನಿಮ್ಮ ಫೋನ್ನಲ್ಲಿ ನಿರಂತರ ಅಜ್ಞಾತ ಕರೆಗಳು ಬರುತ್ತಿದ್ದರೆ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಡಿ. ಅವರಿಗೆ ಉತ್ತರಿಸಬೇಡಿ. ನಿಮಗೆ ತಿಳಿಯದಂತೆ ನಿಮ್ಮ ಫೋನ್ ಅನ್ನು ಆಫ್ ಮಾಡಿಸಲು ಇದು ಒಂದು ಟ್ರಿಕ್ ಆಗಿರಬಹುದು.
ಆಗಾಗ್ಗೆ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಗಳು, ಆನ್ಲೈನ್ ಬ್ಯಾಂಕಿಂಗ್ ವಹಿವಾಟು ಹಿಸ್ಟರಿ ನಿಯಮಿತವಾಗಿ ಪರಿಶೀಲಿಸುತ್ತೀರಿ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಔಷಧಿಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು https://t.co/chd6BMKwnT
— Saaksha TV (@SaakshaTv) October 1, 2021
ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಬೆರೆಸಿ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/XV44aGRSew
— Saaksha TV (@SaakshaTv) October 1, 2021
ಕೇರಳದ ಆಪಂ https://t.co/9HR2oNWTCo
— Saaksha TV (@SaakshaTv) September 30, 2021
ಯಾವ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಪಪ್ಪಾಯಿ ಹಣ್ಣು ಸೇವನೆ ಒಳ್ಳೆಯದಲ್ಲ https://t.co/IQb8FvzrDr
— Saaksha TV (@SaakshaTv) September 30, 2021
#SIMSwapFraud