ಕೊರೋನಾ ಸೋಂಕು ಧೃಡಪಟ್ಟರೆ ಏನು ಮಾಡಬೇಕು? ಇಲ್ಲಿದೆ ಆರೋಗ್ಯ ತಜ್ಞರ ಮಾಹಿತಿ
ಭಾರತದಲ್ಲಿ, ಕೊರೋನವೈರಸ್ ಸೋಂಕಿನ ಎರಡನೇ ಅಲೆಯು ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅನೇಕ ಸಂದರ್ಭಗಳಲ್ಲಿ, ರೋಗಿಗಳ ಸಂಖ್ಯೆಗಳಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾತಿ ಕಷ್ಟಕರವಾಗಿದೆ.
ಆದರೆ ಕೊರೋನಾ ಸೋಂಕಿಗೆ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಯ ಸಮಯವು ಅತ್ಯಂತ ಮುಖ್ಯವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರು ಒಪಿಡಿ ರೋಗಿಗಳಂತೆ ಚಿಕಿತ್ಸೆ ನೀಡಬಹುದು ಮತ್ತು ಅವರು ಮನೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಬಹುದು.
ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
ಕೊರೋನವೈರಸ್ ಸೋಂಕಿಗೆ ಒಳಗಾದ ನಂತರ ಸೋಂಕಿತರು ಯಾವಾಗ ಮನೆಯಲ್ಲಿ ಉಳಿಯಬಹುದು?
ಮನೆಯಲ್ಲಿ ಕಾಳಜಿ ವಹಿಸುವುದು ಹೇಗೆ?
ಕೆಲವು ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಭೇಟಿ ನೀಡುವುದು ಯಾವಾಗ?
ಏನು ಮಾಡಬೇಕು ?
ಕೊರೋನಾ ಸೋಂಕಿತರು ಲಘುವಾದ ರೋಗಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದು.
ಇದಕ್ಕಾಗಿ ಬಾತ್ ರೂಂ ಹೊಂದಿರುವ ಪ್ರತ್ಯೇಕ ಕೋಣೆಯಲ್ಲಿ ಕ್ವಾರಂಟೈನ್ ಆಗಬೇಕು.
ಸ್ವಲ್ಪ ಜ್ವರ ಇದ್ದರೆ ಪ್ಯಾರೆಸಿಟಮಾಲ್ ಅನ್ನು ತೆಗೆದುಕೊಳ್ಳಬಹುದು.
ಜ್ವರ ಮತ್ತು ಆಮ್ಲಜನಕದ ಮಟ್ಟವನ್ನು ದಿನಕ್ಕೆ ಕನಿಷ್ಠ 10-15 ಬಾರಿ ಪರಿಶೀಲಿಸಿ. ಅದಕ್ಕಾಗಿ ಮೊಬೈಲ್ನಲ್ಲಿ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಬಹುದು.
ಆಮ್ಲಜನಕದ ಮಟ್ಟವು 94-100ರ ನಡುವೆ ಇದ್ದರೆ ಚಿಂತಿಸಬೇಕಾಗಿಲ್ಲ. ಅದು 94 ಕ್ಕಿಂತ ಕಡಿಮೆಯಾದರೆ ವೈದ್ಯರನ್ನು ಸಂಪರ್ಕಿಸಬೇಕು.
ಈ ಸಮಯದಲ್ಲಿ ಹೆಚ್ಚು ದ್ರವ ಆಹಾರವನ್ನು ಸೇವಿಸುವುದು ಉತ್ತಮ. ಇದರಿಂದಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭ. ಜೊತೆಗೆ ಕನಿಷ್ಠ 8-10 ಗ್ಲಾಸ್ ನೀರನ್ನು ಕುಡಿಯಿರಿ.
ಏನು ಮಾಡಬಾರದು
ಲಘ ರೋಗಲಕ್ಷಣಗಳನ್ನು ಹೊಂದಿದ್ದರೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸ್ಟೀರಾಯ್ಡ್ಗಳು ಅಥವಾ ರೆಮ್ಡೆಸಿವಿರ್ ತೆಗೆದುಕೊಳ್ಳಬಾರದು
ರೋಗಲಕ್ಷಣಗಳು ತೀವ್ರವಾಗಿದ್ದರೆ ಕಾಲಕಾಲಕ್ಕೆ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು.
ವೈರಲ್ ಅಧಿಕವಾಗಿದ್ದರೆ, ಕನಿಷ್ಠ 5-7 ದಿನಗಳವರೆಗೆ ಜ್ವರ ಬರುತ್ತದೆ ಮತ್ತು ಆಮ್ಲಜನಕದ ಮಟ್ಟವು ಇದನ್ನು ತೋರಿಸುತ್ತದೆ. ಆದ್ದರಿಂದ, ಜ್ವರ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುತ್ತಲೇ ಇರಬೇಕು.
ಆಮ್ಲಜನಕದ ಮಟ್ಟವು ನಿರಂತರವಾಗಿ ಕಡಿಮೆಯಾಗುತ್ತಿದ್ದರೆ, ತಕ್ಷಣ ಆಸ್ಪತ್ರೆಗೆ ಹೋಗಬೇಕು.
ಇದಕ್ಕಾಗಿ, ಮೊದಲು, ಹಾಸಿಗೆಗಳ ಲಭ್ಯತೆಗೆ ಸಂಬಂಧಿಸಿದಂತೆ ಹತ್ತಿರದ ಆಸ್ಪತ್ರೆಯೊಂದಿಗೆ ವಿಚಾರಿಸಬೇಕು.
ಯಾವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು ಅಥವಾ ಆಮ್ಲಜನಕ ಹಾಸಿಗೆಗಳಿವೆ ಎಂದು ತಿಳಿಯಬೇಕು.
ಆಮ್ಲಜನಕ ಸಿಲಿಂಡರ್ಗಾಗಿ, ನೀವು ಸರ್ಕಾರಿ ಸಂಸ್ಥೆಗಳನ್ನು ಸಂಪರ್ಕಿಸಬೇಕಾಗುತ್ತದೆ. ಸರಿಯಾದ ಸಮಯದಲ್ಲಿ ರೋಗಿ ಆಮ್ಲಜನಕ ಪೂರೈಕೆಯನ್ನು ಪಡೆಯುವುದು ಮುಖ್ಯ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬಾರದು.
ಗೂಗಲ್ ನಲ್ಲಿ ಸರ್ಚ್ ಮಾಡಿ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ. ಬದಲಾಗಿ, ನಿಮ್ಮ ಕುಟುಂಬ ವೈದ್ಯರೊಂದಿಗೆ ಮಾತನಾಡಿ.
ರೋಗಲಕ್ಷಣಗಳು ಉಲ್ಬಣಗೊಂಡರೆ, ರೋಗಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ( ಮನೆಯಲ್ಲಿ ಆಮ್ಲಜನಕ ಸಿಲಿಂಡರ್ ವ್ಯವಸ್ಥೆಯನ್ನು ಹೊಂದಿದ್ದರೂ ಸಹ)
ನಿರ್ಣಾಯಕ ಆರೈಕೆಯ ಪ್ರತಿ ಕ್ಷಣವೂ ಅಮೂಲ್ಯವಾದ ಜೀವಗಳನ್ನು ಉಳಿಸಲು ಮುಖ್ಯವಾಗಿರುತ್ತದೆ.
ರೋಗಲಕ್ಷಣಗಳು ತೀವ್ರವಾಗಿದ್ದರೆ ಮನೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಬೇಡಿ.
7 ದಿನಗಳಿಗಿಂತ ಹೆಚ್ಚು ಕಾಲ ಜ್ವರ, ಕಡಿಮೆ ಆಮ್ಲಜನಕದ ಮಟ್ಟ, ಅತಿಸಾರ, ಉಸಿರಾಟದ ತೊಂದರೆ ಮತ್ತು ಎದೆ ನೋವು ಇದ್ದರೆ ಇವು ತಕ್ಷಣ ಆಸ್ಪತ್ರೆಗೆ ದಾಖಲಾಗುವ ಅಗತ್ಯವೆಂದು ಸೂಚಿಸುವ ಕೆಲವು ಲಕ್ಷಣಗಳಾಗಿವೆ.
ಮಾಹಿತಿ – ಡಾ. ಬಿಪಿನ್ ಜಿಬ್ಕೇಟ್ ಕ್ರಿಟಿಕಲ್ ಕೇರ್ ಮೆಡಿಸಿನ್ನಲ್ಲಿ ಸಲಹೆಗಾರರು ಮತ್ತು ಮುಂಬೈನ ಮಿರಾರೋಡ್ನ ವೋಕ್ಹಾರ್ಡ್ ಆಸ್ಪತ್ರೆಯ ಐಸಿಯು ನಿರ್ದೇಶಕರು
#covidpositive
ಬೇಳೆಕಾಳು ಬೇಯಿಸಿದ ನೀರನ್ನು ಸೇವಿಸುವುದರ ಆರೋಗ್ಯ ಪ್ರಯೋಜನಗಳು#Saakshatv #healthtips #lentilwater https://t.co/ijmWsfs9yV
— Saaksha TV (@SaakshaTv) April 21, 2021
ಈರುಳ್ಳಿ ಉತ್ತಪ್ಪಂ#Saakshatv #cookingrecipe #onionuttappam https://t.co/xZGNnVMyRc
— Saaksha TV (@SaakshaTv) April 21, 2021
ಕಳೆದ ವರ್ಷದಂತೆ ದೇಶದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ ಘೋಷಿಸಬೇಕಾಗಿದೆ – ಏಕೆ ಗೊತ್ತಾ ?#lockdown #coronavirus https://t.co/pEgGhsaq0P
— Saaksha TV (@SaakshaTv) April 25, 2021
ನಿಮ್ಮೊಂದಿಗೆ ನಾವಿದ್ದೇವೆ, ಶೀಘ್ರವಾಗಿ ಚೇತರಿಸಿಕೊಳ್ಳಿ – ಭಾರತಕ್ಕೆ ಆಸ್ಟ್ರೇಲಿಯಾ, ಪಾಕ್, ಫ್ರಾನ್ಸ್ ಸೇರಿದಂತೆ ವಿಶ್ವ ನಾಯಕರ ಹಾರೈಕೆ#getwellsoonindia #wearewithyou https://t.co/h982fC1bBp
— Saaksha TV (@SaakshaTv) April 25, 2021