ADVERTISEMENT
Thursday, January 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕುರ್ಚಿ ಕದನಕ್ಕೆ ದೆಹಲಿಯಲ್ಲಿ ಬ್ರೇಕ್ ಸಂಕ್ರಾಂತಿಗೆ ಬಾಂಬ್ ಸಿಡಿಸುತ್ತಾರಾ ಕನಕಪುರ ಬಂಡೆ.!

Will there be a political revolution in the state during Sankranti?

Shwetha by Shwetha
December 29, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬೀಸುತ್ತಿದ್ದ ನಾಯಕತ್ವ ಬದಲಾವಣೆಯ ಬಿರುಗಾಳಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಭವನದವರೆಗೂ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರ ತಾರಕಕ್ಕೇರಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ನಡೆದ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಮಾತುಕತೆಗೆ ಅವಕಾಶ ಸಿಗದಿರುವುದು ಮತ್ತು ಡಿಕೆಶಿ ಪಾಳಯದಲ್ಲಿ ಕೇಳಿಬರುತ್ತಿರುವ ಸಂಕ್ರಾಂತಿ ಕ್ರಾಂತಿಯ ಮಾತುಗಳು ಕುತೂಹಲದ ಕೇಂದ್ರಬಿಂದುವಾಗಿವೆ.

ರಾಹುಲ್ ಮೌನ ಸಿದ್ದರಾಮಯ್ಯಗೆ ಮುಜುಗರವೋ ಅಥವಾ ತಂತ್ರವೋ

Related posts

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

January 22, 2026
ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

January 22, 2026

ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಚಾರ ಜೋರಾಗಿರುವಾಗಲೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ದೌಡಾಯಿಸಿದ್ದರು. ಆದರೆ ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರೊಂದಿಗೆ ಆಪ್ತವಾಗಿ ಮಾತನಾಡುವ ಅಥವಾ ಪ್ರತ್ಯೇಕ ಭೇಟಿಯ ಭಾಗ್ಯ ಸಿಗಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿದ್ದ ಸಿಡಬ್ಲ್ಯೂಸಿ ಸಭೆಯಲ್ಲಿ ಸಿದ್ದರಾಮಯ್ಯ ಹಾಜರಿದ್ದರಾದರೂ ರಾಹುಲ್ ಗಾಂಧಿ ರಾಜ್ಯ ನಾಯಕತ್ವದ ಬಗ್ಗೆ ಚಕಾರ ಎತ್ತಿಲ್ಲ. ಬದಲಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ಸಿದ್ದರಾಮಯ್ಯ ರಾಜ್ಯದ ವಿದ್ಯಮಾನಗಳನ್ನು ವಿವರಿಸಿ ಗೊಂದಲ ನಿವಾರಣೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರ ಜೊತೆ ಮಾತನಾಡದೇ ಇರುವುದು ಹೈಕಮಾಂಡ್‌ನ ಅಂತರ ಕಾಯ್ದುಕೊಳ್ಳುವ ತಂತ್ರವೇ ಎಂಬ ಪ್ರಶ್ನೆ ಮೂಡಿದೆ.

ಸಿದ್ದು ಮೇಲುಗೈ ಮತ್ತು ಜಾಲಿ ಮೂಡ್

ಸಿಡಬ್ಲ್ಯೂಸಿ ಸಭೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಅಥವಾ ಸಿಎಂ ಕುರ್ಚಿ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸಭೆಯು ಪ್ರಮುಖವಾಗಿ ಮತ ಯಂತ್ರಗಳ ತಿರುಚುವಿಕೆ ಆರೋಪ ಮತ್ತು ಸಂಸತ್ತಿನ ಮಸೂದೆಗಳ ಮೇಲಿನ ಹೋರಾಟದ ಬಗ್ಗೆ ಸೀಮಿತವಾಗಿತ್ತು. ತನ್ನ ಕುರ್ಚಿಯ ಬಗ್ಗೆ ಹೈಕಮಾಂಡ್ ಸಭೆಯಲ್ಲಿ ಚರ್ಚೆಯಾಗದೇ ಇರುವುದು ಸಿದ್ದರಾಮಯ್ಯನವರಿಗೆ ದೊಡ್ಡ ರಿಲೀಫ್ ನೀಡಿದೆ. ನಾನೇ ಐದು ವರ್ಷ ಸಿಎಂ ಎಂದು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯನವರಿಗೆ ಈ ಸಭೆಯ ಮೌನ ಪರೋಕ್ಷವಾಗಿ ಬಲ ನೀಡಿದಂತಿದ್ದು ಅವರು ದೆಹಲಿಯಲ್ಲಿ ಜಾಲಿ ಮೂಡ್ ನಲ್ಲಿ ಕಂಡುಬಂದರು. ಈ ಮೂಲಕ ಸದ್ಯಕ್ಕೆ ಕುರ್ಚಿ ಕಂಟಕವಿಲ್ಲ ಎಂಬ ಸಂದೇಶವನ್ನು ತಮ್ಮ ಆಪ್ತ ವಲಯಕ್ಕೆ ರವಾನಿಸಿದ್ದಾರೆ.

ದೆಹಲಿ ಯಾತ್ರೆ ಮತ್ತು ಡಿಕೆಶಿ ಪಾಳಯದ ನಿರಾಸೆ

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದೆಹಲಿ ಯಾತ್ರೆ ನಿರೀಕ್ಷಿತ ಫಲ ನೀಡಿದಂತಿಲ್ಲ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕನಕಪುರದ ಬಂಡೆಗೆ ಹೈಕಮಾಂಡ್ ಅಂಗಳದಲ್ಲಿ ಸ್ಪಷ್ಟ ಭರವಸೆ ಸಿಕ್ಕಿಲ್ಲ. ರಾಹುಲ್ ಗಾಂಧಿ ಭೇಟಿಗೆ ಡಿಕೆಶಿ ಪ್ರಯತ್ನಿಸಿದರೂ ಅವಕಾಶ ಸಿಗದೇ ಇರುವುದು ಅವರ ಪಾಳಯದಲ್ಲಿ ನಿರಾಸೆ ಮೂಡಿಸಿದೆ. ವರುಣಾಧಿಪತಿ ಸಿದ್ದರಾಮಯ್ಯನವರ ರಾಜಕೀಯ ತಂತ್ರದ ಮುಂದೆ ಕನಕಾಧಿಪತಿ ಡಿಕೆಶಿ ಅವರ ಪ್ಲಾನ್ ಇಂದ್ರಪ್ರಸ್ಥದಲ್ಲಿ ವರ್ಕ್ ಔಟ್ ಆಗುತ್ತಿಲ್ಲವೇ ಎಂಬ ಅನುಮಾನ ಹುಟ್ಟುಹಾಕಿದೆ.

ಸಂಕ್ರಾಂತಿಗೆ ಕ್ರಾಂತಿ ಎನ್ನುತ್ತಿರುವ ಡಿಕೆಶಿ ಟೀಂ

ವರ್ಷಾಂತ್ಯದಲ್ಲಿ ದೆಹಲಿ ಮಟ್ಟದಲ್ಲಿ ಆದ ಹಿನ್ನಡೆಯ ನಡುವೆಯೂ ಡಿಕೆಶಿ ಆಪ್ತ ವಲಯದಲ್ಲಿ ಹೊಸದೊಂದು ಗುಸುಗುಸು ಆರಂಭವಾಗಿದೆ. ಸಂಕ್ರಾಂತಿ ಹಬ್ಬದ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಅಥವಾ ಕ್ರಾಂತಿ ಆಗಲಿದೆ ಎಂದು ಡಿಕೆಶಿ ಟೀಂ ಹೇಳಿಕೊಳ್ಳುತ್ತಿದೆ. ಹೈಕಮಾಂಡ್ ಈಗ ಮೌನವಾಗಿದ್ದರೂ ಉತ್ತರಾಯಣ ಪುಣ್ಯಕಾಲದಲ್ಲಿ ಸಿಹಿ ಸುದ್ದಿ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಡಿಕೆಶಿ ಬಣವಿದೆ.

ಅವರೆಬೇಳೆ ಮೇಳದಲ್ಲಿ ಡಿಕೆಶಿಗೆ ಇಕ್ಕಟ್ಟಿನ ಪ್ರಶ್ನೆ

ರಾಜಕೀಯ ಪವರ್ ಫೈಟ್ ನಡುವೆಯೇ ಬೆಂಗಳೂರಿನ ಅವರೆಬೇಳೆ ಮೇಳಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರಿಗೆ ಮಹಿಳೆಯೊಬ್ಬರು ನೇರವಾಗಿಯೇ ಇಕ್ಕಟ್ಟಿನ ಪ್ರಶ್ನೆ ಕೇಳಿದ್ದಾರೆ. ಡಿಕೆ ಸಾರ್ ಯಾವಾಗ ಸಿಎಂ ಆಗ್ತೀರಿ ಎಂದು ಮಹಿಳೆ ಕೇಳಿದ ಪ್ರಶ್ನೆಗೆ ಡಿಕೆಶಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಮುಗುಳ್ನಕ್ಕು ಅಲ್ಲಿಂದ ನಿರ್ಗಮಿಸಿದರು. ಜನರ ಮನಸ್ಸಿನಲ್ಲಿಯೂ ಅಧಿಕಾರ ಹಂಚಿಕೆಯ ಪ್ರಶ್ನೆ ಕೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ದೆಹಲಿಯಲ್ಲಿ ಹೈಕಮಾಂಡ್ ಮೌನ ಮತ್ತು ರಾಜ್ಯದಲ್ಲಿ ನಾಯಕರ ಜಟಾಪಟಿ ನೋಡಿದರೆ ಕಾಂಗ್ರೆಸ್ ಒಳಮನೆಯಲ್ಲಿ ಯುದ್ಧ ವಿರಾಮವಿಲ್ಲ ಎಂಬುದು ಸ್ಪಷ್ಟ. ಸಿದ್ದರಾಮಯ್ಯ ಅವರ ಸದ್ಯದ ಮೇಲುಗೈ ಶಾಶ್ವತವೋ ಅಥವಾ ಸಂಕ್ರಾಂತಿಗೆ ಡಿಕೆಶಿ ಹೇಳುವಂತೆ ಕ್ರಾಂತಿ ನಡೆಯಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

ShareTweetSendShare
Join us on:

Related Posts

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

by Shwetha
January 22, 2026
0

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ‘ಏರ್ ಫೋರ್ಸ್ ಒನ್’ ವಿಮಾನವು ಕೂದಲೆಳೆಯ ಅಂತರದಲ್ಲಿ ಭಾರೀ ದುರಂತದಿಂದ ಪಾರಾಗಿದೆ. ಟ್ರಂಪ್ ಅವರು ವಿಶ್ವ ಆರ್ಥಿಕ ವೇದಿಕೆ (World...

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

by Shwetha
January 22, 2026
0

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಆಡಳಿತದಲ್ಲಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಳೆದ ಎರಡೂವರೆ ವರ್ಷಗಳಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯದ ವಿರುದ್ಧ ದ್ವೇಷದ...

ನಾನು ಸಾಫ್ಟ್ ಇರಬಹುದು, ಆದ್ರೆ ವೀಕ್ ಅಲ್ಲ: ಟೀಕೆಗಳಿಗೆ ಜಗ್ಗುವ ಮಗ ನಾನಲ್ಲ ಎಂದು ಅಬ್ಬರಿಸಿದ ಗೃಹ ಸಚಿವ

ನಾನು ಸಾಫ್ಟ್ ಇರಬಹುದು, ಆದ್ರೆ ವೀಕ್ ಅಲ್ಲ: ಟೀಕೆಗಳಿಗೆ ಜಗ್ಗುವ ಮಗ ನಾನಲ್ಲ ಎಂದು ಅಬ್ಬರಿಸಿದ ಗೃಹ ಸಚಿವ

by Shwetha
January 22, 2026
0

ಕೋಲಾರ: ನಾನು ಮೃದು ಸ್ವಭಾವದವನು, ಆದರೂ ನನಗೆ ಗೃಹ ಇಲಾಖೆಯಂತಹ ಜವಾಬ್ದಾರಿಯುತ ಖಾತೆಯನ್ನೇ ನೀಡುತ್ತಾರೆ. ವಿರೋಧ ಪಕ್ಷಗಳು ನನ್ನನ್ನು ಅಸಮರ್ಥ ಎಂದು ಕರೆದರೆ ಅದಕ್ಕೆ ತಲೆಬಾಗುವ ಜಾಯಮಾನ...

ರಾಜಣ್ಣ ಮತ್ತೆ ಸಚಿವರಾಗೋದು ಪಕ್ಕಾನಾ? ಸಿಹಿ ಸುದ್ದಿ ಸುಳಿವು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ: ಪುತ್ರ ರಾಜೇಂದ್ರ ಹೇಳಿದ್ದೇನು?

ರಾಜಣ್ಣ ಮತ್ತೆ ಸಚಿವರಾಗೋದು ಪಕ್ಕಾನಾ? ಸಿಹಿ ಸುದ್ದಿ ಸುಳಿವು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ: ಪುತ್ರ ರಾಜೇಂದ್ರ ಹೇಳಿದ್ದೇನು?

by Shwetha
January 22, 2026
0

ಮೈಸೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿರುವುದು ತೀವ್ರ...

ತಾಳ್ಮೆಗೂ ಇದೆ ಮಿತಿ! ದೆಹಲಿ ನಾಯಕರ ಮೌನದ ವಿರುದ್ಧ ಸಿಡಿದೆದ್ದ ಡಿಕೆಶಿ ಪಡೆ

ತಾಳ್ಮೆಗೂ ಇದೆ ಮಿತಿ! ದೆಹಲಿ ನಾಯಕರ ಮೌನದ ವಿರುದ್ಧ ಸಿಡಿದೆದ್ದ ಡಿಕೆಶಿ ಪಡೆ

by Shwetha
January 22, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರದ ಚುಕ್ಕಾಣಿ ಯಾರ ಕೈಯಲ್ಲಿರಬೇಕು ಎಂಬ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram