ಯುವಕನನ್ನು ಮನೆಯಿಂದ ಎಳೆದೊಯ್ದು ಹತ್ಯೆ ಮಾಡಿದ ಹಂತಕರು
ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದಲ್ಲಿ ನಡೆದಿದೆ.
ನಾಗೇಶ್ ಪಾಟೀಲ್ (30) ಕೊಲೆಯಾದ ದುರ್ದೈವಿ. ಹಳೆ ವೈಶಮ್ಯದ ಹಿನ್ನಲೇ ಕೃತ್ಯ ಎಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ನಡೆದಿದ್ದೇನು? ಹೊಸ ವರ್ಷ ಯುಗಾದಿ ಹಬ್ಬವಾದ ನಿನ್ನೆ ಯುವಕ ನಾಗೇಶ್ ಪಾಟೀಲ್ ಮನೆಗೆ ಬಂದು ಹಂತಕರು ದಾಂಧಲೆ ಮಾಡಿದ್ದಾರೆ. ನಂತರ ಆತನನ್ನು ದುಷ್ಕರ್ಮಿಗಳ ತಂಡ ಎಳೆದೊಯ್ದು ಹತ್ಯೆ ಮಾಡಿದೆ. ನಂತರ ಮನೆ ಬಳಿ ಶವ ಬಿಸಾಕಿ ಪರಾರಿ ಆಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.