ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನಿಮ್ಮ ದಮಕಿ ಇಲ್ಲಿ ನಡೆಯಲ್ಲ, ಜಾತಕ ಜಾಲಾಡಬೇಕಾಗುತ್ತೆ: ಯತ್ನಾಳ್ ವಿರುದ್ಧ ಎಂ.ಬಿ. ಪಾಟೀಲ್ ಗುಡುಗು

Your arrogance is not acceptable here, you will have to check your horoscope: M.B. Patil thunders against Yatnal

Shwetha by Shwetha
October 30, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಎಂ.ಬಿ. ಪಾಟೀಲ್ ನಡುವಿನ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಯತ್ನಾಳ್ ಅವರ ಆರೋಪಗಳಿಗೆ ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, “ನಿಮ್ಮಂತೆ ನಾನು ನಿರುದ್ಯೋಗಿಯಲ್ಲ, ನನ್ನ ಬಳಿ ನಿಮ್ಮ ದಮಕಿ ನಡೆಯುವುದಿಲ್ಲ, ನನ್ನ ವಿರುದ್ಧ ನಾಲಿಗೆ ಹರಿಬಿಟ್ಟರೆ ನಿಮ್ಮ ಜಾತಕವನ್ನೇ ಜಾಲಾಡಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜಕೀಯ ಅವಕಾಶವಾದಿತನ, ಭೂ ಹಗರಣದ ಆರೋಪ ಮತ್ತು ವೈಯಕ್ತಿಕ ಟೀಕೆಗಳಿಗೆ ಒಂದೊಂದಾಗಿ ಉತ್ತರಿಸಿ, ನೇರ ಸವಾಲುಗಳನ್ನು ಹಾಕಿದರು.

Related posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

November 10, 2025
ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ:  ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ: ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

November 10, 2025

ಬಾಯಿಗೂ ಮಿದುಳಿಗೂ ಸಂಪರ್ಕವಿಲ್ಲದ ನಾಯಕ

“ಯತ್ನಾಳ ಗೌಡ್ರೇ, ನೀವು ಯಾರಿಗಾದರೂ ದಮಕಿ ಹಾಕಿ ಬಾಯಿಗೆ ಬಂದಂತೆ ಮಾತನಾಡಿರಬಹುದು, ಆದರೆ ನನ್ನ ಬಳಿ ಅದೆಲ್ಲ ನಡೆಯುವುದಿಲ್ಲ. ನಾನು ಯಾರಿಗೂ ಅಂಜುವವನಲ್ಲ. ಯತ್ನಾಳ್ ಅವರ ಬಾಯಿಗೂ ಮಿದುಳಿಗೂ ಸಂಪರ್ಕವಿಲ್ಲ. ಹಾಗಾಗಿಯೇ ನನ್ನ ವಿರುದ್ಧ ಅನಗತ್ಯವಾಗಿ ನಾಲಿಗೆ ಹರಿಬಿಟ್ಟಿದ್ದಾರೆ. ಹೀಗೆಯೇ ಮುಂದುವರಿದರೆ ಅವರ ಸಂಪೂರ್ಣ ಜಾತಕವನ್ನು ಜನರ ಮುಂದಿಡಬೇಕಾಗುತ್ತದೆ,” ಎಂದು ಎಂ.ಬಿ. ಪಾಟೀಲ್ ಗುಡುಗಿದರು.

ವೋಟಿಗಾಗಿ ವೇಷ ಬದಲಿಸುವ ಯತ್ನಾಳ್

ಯತ್ನಾಳ್ ಅವರ ಹಿಂದುತ್ವವಾದಿ ನಿಲುವನ್ನು ಪ್ರಶ್ನಿಸಿದ ಪಾಟೀಲ್, “ಉಚ್ಛಾಟಿತ ಹಿಂದೂ ಹುಲಿ ಎಂದು ಹೇಳಿಕೊಳ್ಳುವ ಯತ್ನಾಳ್, ಈ ಹಿಂದೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸಿದ್ದರು. ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ, ಟೊಪ್ಪಿ ಕೂಡ ಹಾಕಿದ್ದರು. ಅಂದು ಮುಸ್ಲಿಮರ ವೋಟಿಗಾಗಿ ಎಲ್ಲಾ ವೇಷಭೂಷಣಗಳನ್ನು ಹಾಕಿ ಮುಗಿಸಿದ್ದಾರೆ. ಈಗ ಹಿಂದೂಗಳ ವೋಟುಗಳಿಗಾಗಿ, ಯಾರನ್ನೋ ಮೆಚ್ಚಿಸಲು ಮುಸ್ಲಿಮರನ್ನು ಬೈಯುತ್ತಿದ್ದಾರೆ. ಇದು ಅವರ ಎರಡು ನಾಲಿಗೆಯ ನೀತಿಗೆ ಸಾಕ್ಷಿ,” ಎಂದು ಆರೋಪಿಸಿದರು.

ಪಂಚಪೀಠಗಳಿಗೂ ಬೈದ ವ್ಯಕ್ತಿ

ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಸಚಿವರು, “ನಾನು ಜೀವನದಲ್ಲಿ ಎಂದಿಗೂ ಪಂಚಪೀಠಗಳಿಗೆ ಅಗೌರವ ತೋರಿಲ್ಲ. ಅವುಗಳ ಮೇಲೆ ನನಗೆ ಅಪಾರ ಭಕ್ತಿ, ಶ್ರದ್ಧೆ ಇದೆ. ಆದರೆ, ಯತ್ನಾಳ್ ಅವರು ಪಂಚಪೀಠಗಳಿಗೆ, ಜಂಗಮರಿಗೆ, ಹಾನಗಲ್ ಕುಮಾರಶ್ರೀಗಳಿಗೆ ಮತ್ತು ಶಿವಯೋಗ ಮಂದಿರಕ್ಕೂ ಬೈದು ಅವಮಾನಿಸಿದ್ದಾರೆ. ಈಗ ಲಿಂಗಾಯತ-ಲಿಂಗಾಯತರ ನಡುವೆ ಜಗಳ ಹಚ್ಚಿ, ಬಿಜೆಪಿ ಮತ್ತು ಆರೆಸ್ಸೆಸ್‌ನವರು ಮಜಾ ನೋಡುತ್ತಿದ್ದಾರೆ. ಇಂತಹ ಕುತಂತ್ರಗಳನ್ನು ನಾನು ಬಹಳ ನೋಡಿದ್ದೇನೆ,” ಎಂದರು.

ಭೂ ಹಗರಣದ ಆರೋಪಕ್ಕೆ ತಿರುಗೇಟು

ತಮ್ಮ ಮೇಲಿನ ಭೂ ಹಗರಣದ ಆರೋಪಕ್ಕೆ ಸವಾಲು ಹಾಕಿದ ಎಂ.ಬಿ. ಪಾಟೀಲ್, “ನನ್ನ ಹಿಂದೆ ಭೂ ಹಗರಣ ಮಾಡುವವರು ಇದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ನಾನು ಇದುವರೆಗೂ ಒಂದೇ ಒಂದು ಜಮೀನು ವ್ಯವಹಾರದಲ್ಲಿ ಭಾಗಿಯಾಗಿಲ್ಲ, ‘ಜಿ’ ಕೆಟಗರಿ ನಿವೇಶನವನ್ನೂ ಪಡೆದಿಲ್ಲ. ನಿಮ್ಮ ಆರೋಪ ನಿಜವೇ ಆಗಿದ್ದರೆ, ಆ ವ್ಯಕ್ತಿಗಳ ಹೆಸರು, ಸಾಕ್ಷಿ ಸಮೇತ ನೀಡಿ. ನಾನು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ,” ಎಂದು ಸವಾಲೆಸೆದರು.

“ತಿಡಗುಂದಿ ಬಳಿ ನನ್ನ ಜಮೀನಿದೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಅಲ್ಲಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗಾಗಿ ಭೂಸ್ವಾಧೀನ ಮಾಡಲಾಗುತ್ತಿದೆಯೇ ಹೊರತು, ನನ್ನ ಯಾವುದೇ ಆಸ್ತಿ ಅಲ್ಲಿಲ್ಲ. ಬೇಕಿದ್ದರೆ ಮಖಣಾಪುರದಲ್ಲಿ ನಾನು ಖರೀದಿಸಿರುವ 135 ಎಕರೆ ಜಮೀನಿದೆ, ಅದನ್ನು ಯತ್ನಾಳ್‌ಗೆ ದಾನ ಮಾಡುತ್ತೇನೆ, ಬಂದು ತೆಗೆದುಕೊಳ್ಳಲಿ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ,” ಎಂದು ಎಚ್ಚರಿಸಿದರು.

ಅನುಭವ ಮಂಟಪವನ್ನೇ ಸೃಷ್ಟಿಸುತ್ತೇನೆ: ನೇರ ಸವಾಲು

ತಮ್ಮ ವಿರುದ್ಧ ಯತ್ನಾಳ್ ಸಮಾವೇಶ ನಡೆಸುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ನೀವು ಬಿಜೆಪಿ, ಆರೆಸ್ಸೆಸ್‌ನವರನ್ನು ಸೇರಿಸಿ ಸಮಾವೇಶ ಮಾಡಬಹುದು. ಆದರೆ ನನ್ನ ಹಿಂದೆ ಬಸವಣ್ಣನ ಅನುಯಾಯಿಗಳ ದೊಡ್ಡ ಶಕ್ತಿಯೇ ಇದೆ. ನೀವು ಮಾಡುವುದಕ್ಕಿಂತ ಎರಡು ಪಟ್ಟು ದೊಡ್ಡ ಸಮಾವೇಶ ಮಾಡುವ ಶಕ್ತಿಯನ್ನು ಬಸವಣ್ಣ ನನಗೆ ಕೊಟ್ಟಿದ್ದಾನೆ. ಬಸವ ದಳ, ಬಸವ ಸೇನೆ, ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಿದ್ದರಾಮಯ್ಯನವರ ಅಹಿಂದ ವರ್ಗದವರನ್ನು ಸೇರಿಸಿ ಹೊಸ ಅನುಭವ ಮಂಟಪವನ್ನೇ ಸೃಷ್ಟಿ ಮಾಡುತ್ತೇನೆ. ಅಂತಿಮವಾಗಿ ನಾನೋ, ನೀವೋ ಎಂಬುದನ್ನು ನೋಡೇ ಬಿಡೋಣ,” ಎಂದು ಯತ್ನಾಳ್‌ಗೆ ಬಹಿರಂಗ ಸವಾಲು ಹಾಕಿದರು.

ShareTweetSendShare
Join us on:

Related Posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

by Shwetha
November 10, 2025
0

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರುತ್ತಿದ್ದಂತೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಜನ್ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ...

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ:  ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ: ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

by Shwetha
November 10, 2025
0

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ರಾಜಧಾನಿ, ಉದ್ಯಾನ ನಗರಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು, ತನ್ನ ಮತ್ತೊಂದು ಗುರುತಾದ ಸಂಚಾರ ದಟ್ಟಣೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ. ನಗರದ ಟ್ರಾಫಿಕ್ ಎಂಬುದು...

ಕಬ್ಬು ‘ರಾ’ ಸಮರ: ಕರ್ನಾಟಕದಲ್ಲಷ್ಟೇ ಹೋರಾಟವೇಕೆ? ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ – ಕೇಂದ್ರದ ನೇರ ಆರೋಪ

ಕಬ್ಬು ‘ರಾ’ ಸಮರ: ಕರ್ನಾಟಕದಲ್ಲಷ್ಟೇ ಹೋರಾಟವೇಕೆ? ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ – ಕೇಂದ್ರದ ನೇರ ಆರೋಪ

by Shwetha
November 10, 2025
0

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ನೇರ ಕಾರಣ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ...

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

by Shwetha
November 10, 2025
0

ವಿಜಯನಗರ (ಕೂಡ್ಲಿಗಿ): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿಸಿದೆ....

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಿಎಂ ಅಂಗಳಕ್ಕೆ; ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿದ ರಾಮಲಿಂಗಾರೆಡ್ಡಿ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಿಎಂ ಅಂಗಳಕ್ಕೆ; ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿದ ರಾಮಲಿಂಗಾರೆಡ್ಡಿ

by Shwetha
November 10, 2025
0

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬಹುನಿರೀಕ್ಷಿತ ವೇತನ ಪರಿಷ್ಕರಣೆ ವಿಚಾರವು ನನ್ನ ಕೈಯಲ್ಲಿಲ್ಲ, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram