ಮಾಸ್ಕ್ ಧರಿಸಿ ಎಂದಿದ್ದಕ್ಕೆ ಆವಾಜ್ ಹಾಕಿದ ಯುವಕರು Saaksha Tv
ದೇವನಹಳ್ಳಿ: ಮಾಸ್ಕ್ ಹಾಕದೆ ತ್ರಿಬಲ್ ರೈಡಿಂಗ್ ನಲ್ಲಿ ಬಂದ ಯುವಕರಿಗೆ, ಮಾಸ್ಕ್ ಧರಿಸಿ ಎಂದಿದ್ದಕ್ಕೆ ಹಾಕಿಕೊಳ್ಳಲ್ಲಾ ಏನ್ ಮಾಡತೀಯ ಅಂತ ಆವಾಜ ಹಾಕಿದ್ದಾರೆ. ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿ ನಡೆದಿದೆ.
ರಾಜ್ಯದಲ್ಲಿ ಕೊರೊನಾ ಮೂರನೇ ಅಲೇ ಏರಿಕೆಯಾಗುತ್ತಿರುವುದರಿಂದ ರಾಜ್ಯ ಸರಕಾರ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಹಾಗೇ ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸುವ ನಿಯಮ ಜಾರಿಗೊಳಿಸಿದೆ. ಆದರೆ ಈ ಯುವಕರು ನಿಯಮವನ್ನು ಮುರಿದಿದ್ದಾರೆ. ಬೈಕ್ ಮೇಲೆ ಬಂದ ಯುವಕರನ್ನು, ನಿಲ್ಲಿಸಿದ ದೇವನಹಳ್ಳಿ ಪಟ್ಟಣದ ಪುರಸಭೆಯ ಮುಖ್ಯ ಅಧಿಕಾರಿ ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಯುವಕರು ಹಾಕಿಕೊಳ್ಳಲ್ಲಾ ಏನ್ ಮಾಡತೀಯ ಅಂತ ಆವಾಜ ಹಾಕಿದ್ದಾರೆ. ಇದರಿಂದ ಕೋಪಗೊಂಡ ಅಧಿಕಾರಿ ಕಪಾಳಮೋಕ್ಷ ಮಾಡಿದ್ದು ನಂತರ ಪೊಲೀಸರು ಯುವಕನ ಬೈಕ್ ಸೀಜ್ ಮಾಡಿದ್ದಾರೆ.