ADVERTISEMENT
Tuesday, August 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

admin by admin
August 11, 2026
in Cinema, Newsbeat, ಮನರಂಜನೆ
slum-dog-movie-glimpse-tabu-gauri-hegde-vijay-sethupathi-puri-jagannadh

slum-dog-movie-glimpse-tabu-gauri-hegde-vijay-sethupathi-puri-jagannadh

Share on FacebookShare on TwitterShare on WhatsappShare on Telegram

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ ‘ಗೌರಿ ಹೆಗ್ಡೆ’ ಪಾತ್ರದಲ್ಲಿ ಟಬು!

ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ವಿಜಯ್ ಸೇತುಪತಿ ಪ್ರಥಮ ಬಾರಿಗೆ ಒಂದಾಗುತ್ತಿರುವ ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾವು ಭರ್ಜರಿ ಆಕ್ಷನ್ ಮತ್ತು ನಿಗೂಢತೆಯ ಮಿಶ್ರಣವನ್ನು ನೀಡುವ ಭರವಸೆ ಮೂಡಿಸಿದೆ. ಇತ್ತೀಚೆಗಷ್ಟೇ ಗೌರಿ ಹೆಗ್ಡೆ ಪಾತ್ರದಲ್ಲಿ ಟಬು ಅವರ ಫಸ್ಟ್ ಲುಕ್ ಅನಾವರಣಗೊಳಿಸಿದ್ದ ಚಿತ್ರತಂಡ, ಈಗ ಅವರ ಶಕ್ತಿಶಾಲಿ ಪಾತ್ರದ ಪರಿಚಯ ನೀಡುವ ಒಂದು ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.

Related posts

varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

August 11, 2026
asthalakshmi-mantra-money-remedy-friday-astrology-tips

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.

August 11, 2026

ನಗರದ ಕೊಳಚೆ ಪ್ರದೇಶಗಳ (ಸ್ಲಮ್) ಹಿನ್ನೆಲೆಯಲ್ಲಿ ಸಾಗುವ ಈ ಗ್ಲಿಂಪ್ಸ್, ಮೊದಲಿಗೆ ಸಿನಿಮಾದ ಕಚ್ಚಾ ಮತ್ತು ನೈಜ ಜಗತ್ತನ್ನು ಪರಿಚಯಿಸುತ್ತದೆ. ತದನಂತರ ಟಬು ಅವರ ಎಂಟ್ರಿಯನ್ನು ಅತ್ಯಂತ ಆಕರ್ಷಕವಾಗಿ ತೋರಿಸಲಾಗಿದೆ. ಕಾರಿನಲ್ಲಿ ಆಗಮಿಸುವ ಅವರು, ಸಿಗರೇಟ್ ಒಂದನ್ನು ಹಚ್ಚಿಕೊಂಡು ತಕ್ಷಣವೇ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಸ್ಥಳೀಯ ಗೂಂಡಾಗೆ ನೀಡುವ ಖಡಕ್ ಎಚ್ಚರಿಕೆ ಮತ್ತು ಆನಂತರ ನೀಡುವ ಒಂದು ಕಪಾಳಮೋಕ್ಷ, ಗೌರಿ ಹೆಗ್ಡೆ ಅಧಿಕಾರವನ್ನು ಕೇಳಿ ಪಡೆಯುವವಳಲ್ಲ, ಬದಲಾಗಿ ಅಧಿಕಾರವನ್ನು ತಾನೇ ಚಲಾಯಿಸುವ ಮಹಿಳೆ ಎಂಬುದನ್ನು ತೋರಿಸುತ್ತದೆ.

ಈ ಪಾತ್ರವನ್ನು ಕೇವಲ ಒಬ್ಬ ಶಕ್ತಿಶಾಲಿ ಅಧಿಕಾರಿಯಾಗಿ ಮಾತ್ರವಲ್ಲದೆ, ಸಂಪೂರ್ಣವಾಗಿ ಭಯವಿಲ್ಲದ ಮತ್ತು ಯಾವುದೇ ರಾಜಿ ಮಾಡಿಕೊಳ್ಳದ ವ್ಯಕ್ತಿಯಾಗಿ ತೋರಿಸಲಾಗಿದೆ. ಗೌರಿ ಹೆಗ್ಡೆ ಬೀದಿಗಳ ಮಧ್ಯದಲ್ಲೇ ಗೂಂಡಾಗಳನ್ನು ಎದುರಿಸುತ್ತಾಳೆ; ಅವರೊಂದಿಗೆ ಕಾದಾಡುತ್ತಾ ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಾಳೆ. ಸುತ್ತಲೂ ಪೊಲೀಸರು ಮತ್ತು ಜನರ ಗುಂಪೇ ಇದ್ದರೂ, ಅವಳು ಧೃತಿಗೆಡದೆ ತಮ್ಮ ಅಧಿಕಾರಕ್ಕೆ ಸವಾಲು ಹಾಕುವವರನ್ನು ಆಕ್ರಮಣಕಾರಿಯಾಗಿ ಹತೋಟಿಗೆ ತರುತ್ತಾಳೆ.

ಗ್ಲಿಂಪ್ಸ್ ಉದ್ದಕ್ಕೂ ಮೂಡಿಬರುವ ಪದಗಳಾದ- ‘ಒನ್ ಫಿಯರ್‌ಲೆಸ್ ವುಮನ್’ (ಒಬ್ಬ ಭಯವಿಲ್ಲದ ಮಹಿಳೆ), ‘ಪವರ್‌ಫುಲ್ ಆಫೀಸರ್’ (ಶಕ್ತಿಶಾಲಿ ಅಧಿಕಾರಿ), ‘ರೂತ್‌ಲೆಸ್’ (ಕ್ರೂರಿ), ‘ಮರ್ಸಿಲೆಸ್’ (ದಯೆಯಿಲ್ಲದವಳು) ಮತ್ತು ‘ಡೆವಿಲ್ ಇನ್ ದಿ ಡಿಪಾರ್ಟ್‌ಮೆಂಟ್’ (ಇಲಾಖೆಯ ರಾಕ್ಷಸಿ) – ಅವರ ಪಾತ್ರದ ಸ್ವರೂಪದ ಬಗ್ಗೆ ಸ್ಪಷ್ಟ ಸುಳಿವು ನೀಡುತ್ತವೆ.

ಗ್ಲಿಂಪ್ಸ್‌ನ ಕೊನೆಯಲ್ಲಿ ಅವರು ಸಂಪೂರ್ಣ ಅಧಿಕಾರದಿಂದ ತಮ್ಮನ್ನು ಪರಿಚಯಿಸಿಕೊಳ್ಳುವ ಸೀನ್ ಪ್ರಮುಖ ಹೈಲೈಟ್ ಆಗಿದೆ. “ಗೌರಿ ಹೆಗ್ಡೆ, ಡೆಪ್ಯುಟಿ ಕಮಿಷನರ್, ಆದಾಯ ತೆರಿಗೆ ಇಲಾಖೆ” – ಈ ಪರಿಚಯವು ಪೂರಿ ಜಗನ್ನಾಥ್ ಅವರ ಸಿನಿಮಾಗಳ ಶೈಲಿಯ ಪಕ್ಕಾ ಮಾಸ್ ಮತ್ತು ಪಂಚ್‌ನಿಂದ ಕೂಡಿದೆ. ಈ ಗ್ಲಿಂಪ್ಸ್‌ನಲ್ಲಿ ವಿಜಯ್ ಸೇತುಪತಿ ಅವರ ಕೆಲವು ದೃಶ್ಯಗಳೂ ಇವೆ.

ಟಬು ಅವರು ತಮ್ಮ ಸ್ಕ್ರೀನ್ ಪ್ರೆಸೆಂಟ್ ಮೂಲಕ ಈ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದು, ಅತ್ಯಂತ ಗಂಭೀರವಾಗಿ ಮತ್ತು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಗೌರಿ ಹೆಗ್ಡೆ ಪಾತ್ರಕ್ಕೆ ವಿಶಿಷ್ಟವಾದ ಅಧಿಕಾರ ಮತ್ತು ಭಯ ಹುಟ್ಟಿಸುವ ಗಾಂಭೀರ್ಯವನ್ನು ತಂದಿದ್ದು, ಪಾತ್ರದ ಮೇಲಿನ ಕುತೂಹಲವನ್ನು ತಕ್ಷಣವೇ ಹೆಚ್ಚಿಸುತ್ತಾರೆ. ಸ್ಮರಣೀಯ ಪಾತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಅವುಗಳನ್ನು ಪ್ರಭಾವಶಾಲಿಯಾಗಿ ಪರಿಚಯಿಸುವುದರಲ್ಲಿ ಪೂರಿ ಜಗನ್ನಾಥ್ ಅವರಿಗೆ ಯಾವಾಗಲೂ ವಿಶೇಷ ಕೌಶಲವಿದ್ದು, ಗೌರಿ ಹೆಗ್ಡೆ ಪಾತ್ರವು ಮತ್ತೊಂದು ಕುತೂಹಲಕಾರಿ ಸೇರ್ಪಡೆಯಂತೆ ಕಾಣುತ್ತಿದೆ.

ಚಿತ್ರದಲ್ಲಿ ಸಂಯುಕ್ತಾ ನಾಯಕಿಯಾಗಿದ್ದು, ದುನಿಯಾ ವಿಜಯ್ ನೆಗಟಿವ್ ಪಾತ್ರದಲ್ಲಿದ್ದಾರೆ. ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಪ್ರಮುಖ ತಾರಾಗಣದ ಭಾಗವಾಗಿದ್ದಾರೆ. ಸ್ಯಾಮ್ ಕೆ. ನಾಯ್ಡು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ಸಂತೋಷ್ ನೂಜಿಲ್ಲ ಸಂಕಲನದ (ಎಡಿಟಿಂಗ್) ಹೊಣೆ ಹೊತ್ತಿದ್ದಾರೆ. ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಚಿತ್ರವನ್ನು ಪೂರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರು, ಜೆಬಿ ಮೋಷನ್ ಪಿಕ್ಚರ್ಸ್‌ನ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲಾ ಅವರ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ.

ಶೀರ್ಷಿಕೆ ಘೋಷಣೆ, ಫಸ್ಟ್ ಲುಕ್ ಪೋಸ್ಟರ್, ಟೀಸರ್ ಮತ್ತು ಈಗ ಬಿಡುಗಡೆಯಾಗಿರುವ ಈ ಅದ್ಭುತ ಗ್ಲಿಂಪ್ಸ್ ಮೂಲಕ ಚಿತ್ರವು ನಿರಂತರವಾಗಿ ನಿರೀಕ್ಷೆಯನ್ನು ಹೆಚ್ಚಿಸುತ್ತಿದ್ದು, ಪಾತ್ರಗಳು ಮತ್ತು ಅವುಗಳ ಜಗತ್ತಿನ ಸುತ್ತಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ

Tags: #SlumDog #VijaySethupathi #PuriJagannadh #Tabu #GauriHegde #SlumDogGlimpse #DuniyaVijay #PanIndiaMovie #PuriConnects #IndianCinema #saakshatv
ShareTweetSendShare
Join us on:

Related Posts

varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

by admin
August 11, 2026
0

ಅಷ್ಟ ಐಶ್ವರ್ಯ ಪಡೆಯಲು ತಾಂತ್ರಿಕ ಪರಿಹಾರ ಅಷ್ಟ ಲಕ್ಷ್ಮಿ ನಾಣ್ಯಗಳು ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭ ದಿನ. ಆ ಶುಕ್ರವಾರ ಬರುವ ಶುಕ್ರ ಹೊರೆಯ ಸಮಯದಲ್ಲಿ ನಾವು...

asthalakshmi-mantra-money-remedy-friday-astrology-tips

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.

by admin
August 11, 2026
0

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ. 28-08-2026 ರಂದು ನಗದು ಅಗತ್ಯವನ್ನು ಪೂರೈಸಲು...

biscoff-swiggy-dineout-dm-a-lonely-cup-campaign-offers

by admin
August 11, 2026
0

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ: ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!  ಬೆಂಗಳೂರು: ಬಿಸಿ ಬಿಸಿ ಟೀ ಅಥವಾ ಕಾಫಿ...

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ:  ಸಂಘಟನೆಗಳ  ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ: ಸಂಘಟನೆಗಳ ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

by Shwetha
August 11, 2026
0

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳು...

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್; ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ಶುರು

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್; ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ಶುರು

by Shwetha
August 11, 2026
0

ಬೆಂಗಳೂರು-ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ರೈಲ್ವೆ ಇಲಾಖೆ ರೈಲು ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳನ್ನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram