ಫೋನ್ ಬಳಕೆದಾರರೇ ಎಚ್ಚರ | ಯಾಮಾರಿದ್ರೆ ಹಣಕ್ಕೆ ಕನ್ನ
ಬೆಂಗಳೂರು : ಫೋನ್ ಬಳಕೆದಾರರೇ ಎಚ್ಚರ.. ಆಂಡ್ರಾಯ್ಡ್ ಫೋನ್ ಗಳಲ್ಲಿ ಬ್ಯಾಂಕ್ ವಿವರಗಳನ್ನು ಕದಿಯಬಲ್ಲ ಅಪಾಯಕಾರಿ ವೈರಸ್ ಕಾಣಿಸಿಕೊಂಡಿದೆಯಂತೆ.
ಈ ಬಗ್ಗೆ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಪಡೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಎಚ್ಚರಿಕೆ ನೀಡಿದೆ.
ನಮ್ಮ ಆಂಡ್ರಾಯ್ಡ್ ಫೋನ್ ಗಳಲ್ಲಿ ಬ್ಯಾಂಕ್ ವಿವರಗಳನ್ನು ಕದಿಯಬಲ್ಲ ಅಪಾಯಕಾರಿ ಡ್ರೈನಿಕ್ ವೈರಸ್ ಕಾಣಿಸಿಕೊಂಡಿದ್ದು, ಇದು ಆದಾಯ ತೆರಿಗೆ ಹಿಂದಿರುಗಿಸುವ ಸೋಗಿನಲ್ಲಿ 27 ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಹಾಕುವ ಅಪಾಯವಿದೆ.
ಹೀಗಾಗಿ ಆಂಡ್ರಾಯ್ ಸ್ಮಾರ್ಟ್ ಫೋನ್ ಬಳಕೆದಾರರು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಸೂಚನೆ ನೀಡಿದೆ.
ಆಂಡ್ರಾಯ್ಡ್ ಫೋನ್ ಗಳನ್ನು ಗುರಿಯಾಗಿಸಿಕೊಂಡು ಹ್ಯಾಕರ್ ಗಳು ಈ ಡ್ರೈನಿಕ್ ಎಂಬ ವೈರಸ್ ಅನ್ನು ರೂಪಿಸಿದ್ದಾರೆ ಎಂದು ವರದಿಯಾಗಿದೆ.








