ADVERTISEMENT
Sunday, March 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸದ್ಯಕ್ಕೆ ಹಳೆ ಪಿಂಚಣಿ (OPS)ಜಾರಿ ಅಸಾಧ್ಯ, ನಾವು ಈಗಾಗಲೇ ಸುಸ್ತಾಗಿದ್ದೇವೆ : ಖಡಕ್ ಸಂದೇಶ ರವಾನಿಸಿದ ಡಿಕೆಶಿ

Shwetha by Shwetha
March 1, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು:ರಾಜ್ಯದ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹಳೆ ಪಿಂಚಣಿ ಯೋಜನೆ (OPS) ಮರುಜಾರಿಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹಾಗೂ ಅಷ್ಟೇ ನಿರಾಶಾದಾಯಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಪಿಂಚಣಿ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಿಂಚಣಿ ಬಗ್ಗೆ ಈಗ ಚರ್ಚೆಯೇ ಬೇಡ

Related posts

ಶಾಸಕರ ಡಿನ್ನರ್ ಮೀಟಿಂಗ್: ಡಿ.ಕೆ. ಸುರೇಶ್ ‘ನನಗೆ ಮಾಹಿತಿ ಇಲ್ಲ’

ಶಾಸಕರ ಡಿನ್ನರ್ ಮೀಟಿಂಗ್: ಡಿ.ಕೆ. ಸುರೇಶ್ ‘ನನಗೆ ಮಾಹಿತಿ ಇಲ್ಲ’

March 1, 2026
ನೇಮಕಾತಿ ಕಿಚ್ಚು: ಪೊಲೀಸರ ಮೇಲೆಯೇ ಹಲ್ಲೆ ಆರೋಪ; ವಿದ್ಯಾರ್ಥಿ ನಾಯಕ ಕಾಂತಕುಮಾರ್‌ಗೆ ಸಂಕಷ್ಟ

ನೇಮಕಾತಿ ಕಿಚ್ಚು: ಪೊಲೀಸರ ಮೇಲೆಯೇ ಹಲ್ಲೆ ಆರೋಪ; ವಿದ್ಯಾರ್ಥಿ ನಾಯಕ ಕಾಂತಕುಮಾರ್‌ಗೆ ಸಂಕಷ್ಟ

March 1, 2026

ಶಿಕ್ಷಕರ ಸಮುದಾಯದ ಪ್ರಮುಖ ಬೇಡಿಕೆಯಾದ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವ ವಿಚಾರವಾಗಿ ಮಾತನಾಡಿದ ಡಿಸಿಎಂ, ಸರ್ಕಾರವು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಒತ್ತಡದಲ್ಲಿದೆ ಎಂಬ ಸುಳಿವು ನೀಡಿದರು. ಈಗಾಗಲೇ ನಾವು ಸುಸ್ತಾಗಿದ್ದೇವೆ. ಹೀಗಿರುವಾಗ ಹೊಸ ಪಿಂಚಣಿ ಅಥವಾ ಹಳೆ ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ. ಆ ವಿಚಾರವನ್ನು ಈಗ ಪ್ರಸ್ತಾಪಿಸುವುದು ಸೂಕ್ತವಲ್ಲ ಎಂದು ನೇರವಾಗಿಯೇ ಹೇಳುವ ಮೂಲಕ, ಒಪಿಎಸ್ ಜಾರಿಯ ನಿರೀಕ್ಷೆಯಲ್ಲಿದ್ದ ನೌಕರರಿಗೆ ಶಾಕ್ ನೀಡಿದರು.

ಶಿಕ್ಷಕರಿಗೆ ಸಿಹಿಸುದ್ದಿ: 56 ಸಾವಿರ ಹುದ್ದೆಗಳ ನೇಮಕಕ್ಕೆ ಸಿದ್ಧತೆ

ಪಿಂಚಣಿ ವಿಚಾರದಲ್ಲಿ ನಿರಾಸೆ ಮೂಡಿಸಿದರೂ, ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಡಿಕೆಶಿ ಸಿಹಿಸುದ್ದಿ ನೀಡಿದರು. ರಾಜ್ಯದಲ್ಲಿ ಖಾಲಿ ಇರುವ ಸುಮಾರು ಒಂದು ಲಕ್ಷ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ 56 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ಸಚಿವ ಸಂಪುಟದಲ್ಲಿ ಬರೋಬ್ಬರಿ 5 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ. ಆದರೆ ಒಳ ಮೀಸಲಾತಿಯ ಗೊಂದಲಗಳು, ಸಾಧಕ-ಬಾಧಕಗಳು ಹಾಗೂ ನ್ಯಾಯಾಲಯದ ತೀರ್ಪುಗಳ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಸಮಾಲೋಚನೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಯಿಂದ ವಿನಾಯಿತಿ ಇಲ್ಲ

ಶಿಕ್ಷಕರನ್ನು ಬೋಧಕೇತರ ಕೆಲಸಗಳಿಂದ, ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಮುಕ್ತಗೊಳಿಸಬೇಕು ಎಂಬ ಶಿಕ್ಷಕರ ಸಂಘದ 26 ಬೇಡಿಕೆಗಳ ಪೈಕಿ ಒಂದನ್ನು ಡಿಕೆಶಿ ಕಡಾಖಂಡಿತವಾಗಿ ತಳ್ಳಿಹಾಕಿದರು. ಈ ಕೆಲಸವನ್ನು ಬೇರೆಯವರಿಗೆ ವಹಿಸಿದರೆ ಅದರ ದುರುಪಯೋಗವಾಗುವ ಸಾಧ್ಯತೆಗಳಿವೆ. ಶಿಕ್ಷಕರ ಮೇಲೆ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ನಂಬಿಕೆ ಇದೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಶಿಕ್ಷಕರೇ ನಿರ್ವಹಿಸಬೇಕು ಎಂದು ಒತ್ತಿ ಹೇಳಿದರು.

ಶಿಕ್ಷಕರ ಸಂಘಕ್ಕೆ ಬೆಂಗಳೂರಿನಲ್ಲಿ ಜಾಗ

ಶಿಕ್ಷಕರ ಸಂಘದ ಮತ್ತೊಂದು ಪ್ರಮುಖ ಬೇಡಿಕೆಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಒದಗಿಸುವುದು ನಮ್ಮ ವ್ಯಾಪ್ತಿಯಲ್ಲಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿವೇಶನ ಒದಗಿಸುವ ಭರವಸೆ ನೀಡಿದರು.

ಗ್ರಾಮೀಣ ಶಿಕ್ಷಣಕ್ಕೆ ಸಿಎಸ್‌ಆರ್ ಹಣದ ಬಲ

ಗ್ರಾಮೀಣ ಭಾಗದ ಶಾಲಾ ಮಕ್ಕಳು ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಸರ್ಕಾರ ಬದ್ಧವಾಗಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿ (CSR) ಅಡಿ ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುತ್ತಿದ್ದು, ಈ ಹಣ ಗ್ರಾಮೀಣ ಭಾಗದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಕ್ಕೆ ಬಳಕೆಯಾಗಬೇಕು. ಹಳ್ಳಿಗಳಲ್ಲಿನ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಮತ್ತು ಸ್ಥಳೀಯವಾಗಿ 90 ಸಾವಿರ ಶಿಕ್ಷಕರನ್ನು ನೇಮಿಸಿಕೊಂಡು ಅಲ್ಲಿಯೇ ಶಾಲೆಗಳನ್ನು ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ರಾಜಕೀಯದಲ್ಲಿ ಶಿಕ್ಷಕರೇ ನಿರ್ಣಾಯಕ

ರಾಜಕಾರಣದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದ ಡಿಕೆಶಿ, ಶಿಕ್ಷಕರು ಮನಸ್ಸು ಮಾಡಿದರೆ ಚುನಾವಣೆಯಲ್ಲಿ ಯಾರನ್ನಾದರೂ ಸೋಲಿಸಬಹುದು ಅಥವಾ ಗೆಲ್ಲಿಸಬಹುದು. ಶಿಕ್ಷಕರ ಬದುಕು ಮತ್ತು ತ್ಯಾಗವನ್ನು ನಾವು ಹತ್ತಿರದಿಂದ ಕಂಡಿದ್ದೇವೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಶಿಕ್ಷಕರ ಪರವಾಗಿದ್ದು, ಬಂಗಾರಪ್ಪನವರ ಕಾಲದ ಗ್ರಾಮೀಣ ಕೃಪಾಂಕ ಮತ್ತು ರಾಜೀವ್ ಗಾಂಧಿಯವರ ಕಪ್ಪುಹಲಗೆ ಯೋಜನೆಗಳನ್ನು ಸ್ಮರಿಸಿದರು.

ಅಂತ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಡಿಕೆಶಿ, ಹೆಚ್ಚು ಕೆಲಸ ಮಾಡಿದರೆ ತಪ್ಪುಗಳಾಗುತ್ತವೆ, ಕೆಲಸವೇ ಮಾಡದಿದ್ದರೆ ತಪ್ಪುಗಳೇ ಆಗುವುದಿಲ್ಲ. ಆದ್ದರಿಂದ ಧೈರ್ಯವಾಗಿ ಕೆಲಸ ಮಾಡಿ. ನಾನೇನು ಮಾತನಾಡಿದರೂ ಕಷ್ಟವಾಗುತ್ತದೆ, ಮಾಧ್ಯಮದವರು ನನ್ನ ಹೇಳಿಕೆಗಳನ್ನೇ ತಿರುಚುತ್ತಾರೆ ಎಂದು ನಗೆ ಬೀರಿದರು.

ShareTweetSendShare
Join us on:

Related Posts

ಶಾಸಕರ ಡಿನ್ನರ್ ಮೀಟಿಂಗ್: ಡಿ.ಕೆ. ಸುರೇಶ್ ‘ನನಗೆ ಮಾಹಿತಿ ಇಲ್ಲ’

ಶಾಸಕರ ಡಿನ್ನರ್ ಮೀಟಿಂಗ್: ಡಿ.ಕೆ. ಸುರೇಶ್ ‘ನನಗೆ ಮಾಹಿತಿ ಇಲ್ಲ’

by Shwetha
March 1, 2026
0

ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾದ ಶಾಸಕರ ಡಿನ್ನರ್ ಮೀಟಿಂಗ್ ಕುರಿತಂತೆ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣದ...

ನೇಮಕಾತಿ ಕಿಚ್ಚು: ಪೊಲೀಸರ ಮೇಲೆಯೇ ಹಲ್ಲೆ ಆರೋಪ; ವಿದ್ಯಾರ್ಥಿ ನಾಯಕ ಕಾಂತಕುಮಾರ್‌ಗೆ ಸಂಕಷ್ಟ

ನೇಮಕಾತಿ ಕಿಚ್ಚು: ಪೊಲೀಸರ ಮೇಲೆಯೇ ಹಲ್ಲೆ ಆರೋಪ; ವಿದ್ಯಾರ್ಥಿ ನಾಯಕ ಕಾಂತಕುಮಾರ್‌ಗೆ ಸಂಕಷ್ಟ

by Shwetha
March 1, 2026
0

ಧಾರವಾಡ: ರಾಜ್ಯ ಸರ್ಕಾರಿ ವಲಯದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾಕಾಶಿ ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಹೋರಾಟದ...

ಗ್ಯಾರಂಟಿ ಹೊರೆ ಎನ್ನಲು ಆಗಲ್ಲ, ಮಾತು ಕೊಟ್ಟ ಮೇಲೆ ತಪ್ಪೋ ಹಾಗಿಲ್ಲ: ಮಾತು ತಪ್ಪಿದರೆ ಜನ ಕ್ಷಮಿಸಲ್ಲ; ಸಿಎಂ ಸಿದ್ದರಾಮಯ್ಯಗೆ ಡಿಕೆ ಸುರೇಶ್ ಖಡಕ್ ಸಂದೇಶ

ಗ್ಯಾರಂಟಿ ಹೊರೆ ಎನ್ನಲು ಆಗಲ್ಲ, ಮಾತು ಕೊಟ್ಟ ಮೇಲೆ ತಪ್ಪೋ ಹಾಗಿಲ್ಲ: ಮಾತು ತಪ್ಪಿದರೆ ಜನ ಕ್ಷಮಿಸಲ್ಲ; ಸಿಎಂ ಸಿದ್ದರಾಮಯ್ಯಗೆ ಡಿಕೆ ಸುರೇಶ್ ಖಡಕ್ ಸಂದೇಶ

by Shwetha
March 1, 2026
0

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಯ ಚರ್ಚೆಗಳ ನಡುವೆಯೇ, ಮಾಜಿ ಸಂಸದ ಡಿಕೆ ಸುರೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಯ ಬಗ್ಗೆ ಅಸಮಾಧಾನ...

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ರಹಸ್ಯ ಸಮೀಕ್ಷೆ: ಕಾಂಗ್ರೆಸ್ ಸರ್ಕಾರದ 78 ಹಾಲಿ ಶಾಸಕರಿಗೆ ಸೋಲು ಕಟ್ಟಿಟ್ಟ ಬುತ್ತಿ?

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ರಹಸ್ಯ ಸಮೀಕ್ಷೆ: ಕಾಂಗ್ರೆಸ್ ಸರ್ಕಾರದ 78 ಹಾಲಿ ಶಾಸಕರಿಗೆ ಸೋಲು ಕಟ್ಟಿಟ್ಟ ಬುತ್ತಿ?

by Shwetha
March 1, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಂಗಳದಲ್ಲಿ ಚುನಾವಣೆಗಳು ಬಂದು ಹೋಗುವುದು ಸಹಜ. ಆದರೆ 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಬರೋಬ್ಬರಿ ನಾಲ್ಕು ವರ್ಷಗಳಿರುವಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಹಸ್ಯ...

ದರ್ಶನ ವಿರುದ್ಧ ನಕಲಿ ಸಾಕ್ಷ್ಯ ಸೃಷ್ಟಿ ಆರೋಪ: ಎಸಿಪಿ ಚಂದನ್ ಕುಮಾರ್ ವಿರುದ್ಧ ಸಮರ ಸಾರಿದ ಕನ್ನಡ ಒಕ್ಕೂಟ!

ದರ್ಶನ ವಿರುದ್ಧ ನಕಲಿ ಸಾಕ್ಷ್ಯ ಸೃಷ್ಟಿ ಆರೋಪ: ಎಸಿಪಿ ಚಂದನ್ ಕುಮಾರ್ ವಿರುದ್ಧ ಸಮರ ಸಾರಿದ ಕನ್ನಡ ಒಕ್ಕೂಟ!

by Shwetha
March 1, 2026
0

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ತೂಗುದೀಪ ಅವರ ಕೇಸ್ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ತನಿಖೆಯ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಈಗ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram