ADVERTISEMENT
Monday, March 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಟ್ರಂಪ್ ಒಬ್ಬ ಸರ್ವಾಧಿಕಾರಿ ಮೋದಿಯನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ : ಸ್ವಾಭಿಮಾನಿ ಭಾರತವನ್ನು ಅಮೆರಿಕಕ್ಕೆ ಗುಲಾಮರನ್ನಾಗಿ ಮಾಡಬೇಡಿ ; ಪ್ರಧಾನಿಗೆ ಖರ್ಗೆ ಎಚ್ಚರಿಕೆ

Shwetha by Shwetha
March 9, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಚಿತ್ತಾಪುರದಲ್ಲಿ ನಡೆದ ಬೃಹತ್ ಜನಸಮಾವೇಶದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ ಅವರು, ಪ್ರಧಾನಿ ಮೋದಿಯವರು ಅಮೆರಿಕದ ಮುಂದೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂರಲು ಹೇಳಿದರೆ ಕೂರುವ ಏಳಲು ಹೇಳಿದರೆ ಏಳುವ ಗುಲಾಮಗಿರಿ

Related posts

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

March 9, 2026
ನಿಮ್ಮ ಕೆಲಸ ನೀವು ನೋಡಿಕೊಳ್ಳಿ: ಅಮೆರಿಕದ ದರ್ಪಕ್ಕೆ ಕಮಲ್ ಹಾಸನ್ ಖಡಕ್ ತಿರುಗೇಟು

ನಿಮ್ಮ ಕೆಲಸ ನೀವು ನೋಡಿಕೊಳ್ಳಿ: ಅಮೆರಿಕದ ದರ್ಪಕ್ಕೆ ಕಮಲ್ ಹಾಸನ್ ಖಡಕ್ ತಿರುಗೇಟು

March 9, 2026

ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದ ಖರ್ಗೆ, ಪ್ರಧಾನಿ ಮೋದಿ ಅವರು ಟ್ರಂಪ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕೂರಲು ಹೇಳಿದರೆ ಕೂರುವ, ಏಳಲು ಹೇಳಿದರೆ ಏಳುವ ಗುಲಾಮಗಿರಿ ಸ್ಥಿತಿಗೆ ಭಾರತದ ಪ್ರಧಾನಿ ತಲುಪಿರುವುದು ದೇಶಕ್ಕೆ ಶೋಭೆ ತರುವುದಿಲ್ಲ. ಕೇವಲ ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಾ ಅಧಿಕಾರಕ್ಕೆ ಬಂದವರು ಇಂದು ಇಡೀ ದೇಶವನ್ನೇ ಅಮೆರಿಕದ ಪಾದದಡಿ ಅಡವಿಡುತ್ತಿದ್ದಾರೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

ದೇಶ ಕಟ್ಟಿದ್ದು ಕಾಂಗ್ರೆಸ್ ಹಾಳು ಮಾಡುತ್ತಿರುವುದು ಬಿಜೆಪಿ

ನರೇಂದ್ರ ಮೋದಿ ಅವರ ದಿನಚರಿ ಕೇವಲ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಿದೆ ಎಂದು ಖರ್ಗೆ ವ್ಯಂಗ್ಯವಾಡಿದರು. ದೇಶಾದ್ಯಂತ ಸುತ್ತಾಡಿ ಭಾಷಣ ಮಾಡುವ ಅವರಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆಯಿಲ್ಲ. ಸ್ವಾತಂತ್ರ್ಯಾನಂತರ ದೇಶದಲ್ಲಿ ಬೃಹತ್ ಕಾರ್ಖಾನೆಗಳು, ರಸ್ತೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಮೂಲಸೌಕರ್ಯಗಳನ್ನು ನಿರ್ಮಿಸಿದ್ದು ಕಾಂಗ್ರೆಸ್ ಸರ್ಕಾರ. ನಾವು ದೇಶವನ್ನು ಕಟ್ಟುವ ನಿರಂತರ ಕಾಯಕದಲ್ಲಿ ತೊಡಗಿದ್ದರೆ, ಬಿಜೆಪಿ ಮತ್ತು ಮೋದಿ ಅವರು ದೇಶವನ್ನು ಒಡೆಯುವ ಹಾಗೂ ಹಾಳುಮಾಡುವ ವಿನಾಶಕಾರಿ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಖರ್ಗೆ ಹರಿಹಾಯ್ದರು.

ಇರಾನ್ ನೌಕೆ ಧ್ವಂಸ ಮತ್ತು ಮೋದಿಯವರ ಮೌನ

ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದ ಖರ್ಗೆ, ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆಯನ್ನು ಅಮೆರಿಕ ಧ್ವಂಸಗೊಳಿಸಿದರೂ ಪ್ರಧಾನಿ ಮೋದಿ ತುಟಿ ಬಿಚ್ಚದಿರುವುದನ್ನು ತೀವ್ರವಾಗಿ ಖಂಡಿಸಿದರು. ಕೇವಲ ಮಂತ್ರಗಳನ್ನು ಪಠಿಸುವುದರಿಂದ ಅಥವಾ ಆಕರ್ಷಕ ಮಾತುಗಳಿಂದ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ದೇಶಕ್ಕೆ ನಿಜವಾದ ಶಕ್ತಿ ತುಂಬಬೇಕಾದರೆ ಯುವಜನತೆಗೆ ಉದ್ಯೋಗ ಒದಗಿಸಬೇಕು. ಯುದ್ಧ ಅಥವಾ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದರೆ ಶ್ರೀಮಂತರು ತಮ್ಮ ಸಂಪತ್ತನ್ನು ಬಳಸಿಕೊಂಡು ಬೇರೆ ದೇಶಗಳಿಗೋ, ದ್ವೀಪಗಳಿಗೋ ಪಲಾಯನ ಮಾಡಬಹುದು. ಆದರೆ ನಮ್ಮ ನೆಲದ ಬಡವರ ಗತಿಯೇನು ಎಂದು ಅವರು ಕಳವಳ ವ್ಯಕ್ತಪಡಿಸಿದರು. ನೆರೆಹೊರೆಯಲ್ಲಿ ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದರೂ ಮೋದಿ ಮೌನ ವಹಿಸಿರುವುದು ಅವರ ದೌರ್ಬಲ್ಯವನ್ನು ತೋರಿಸುತ್ತದೆ ಎಂದರು.

ಅಮೆರಿಕದ ಸೊಕ್ಕು ಮತ್ತು ರಷ್ಯಾ ತೈಲ ಖರೀದಿಗೆ ಅಡ್ಡಿ

ಅಮೆರಿಕದ ಪ್ರಸ್ತುತ ನಡೆಯನ್ನು ಸೊಕ್ಕಿನ ವರ್ತನೆ ಎಂದು ಬಣ್ಣಿಸಿದ ಖರ್ಗೆ, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇತರ ದೇಶಗಳ ನಾಯಕರ ಹತ್ಯೆಗಳನ್ನು ಉಲ್ಲೇಖಿಸಿದರು. ಖಮೇನಿ ಹತ್ಯೆ ಹಾಗೂ ನೆರೆಯ ದೇಶದ ಅಧ್ಯಕ್ಷರನ್ನು ಎಳೆದೊಯ್ದ ಘಟನೆಗಳನ್ನು ಪ್ರಸ್ತಾಪಿಸಿದ ಅವರು, ಬೇರೊಂದು ದೇಶದೊಳಗೆ ನುಗ್ಗಿ ಅಲ್ಲಿನ ಮುಖ್ಯಸ್ಥರನ್ನು ಹತ್ಯೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಹೀಗೆಯೇ ಎಲ್ಲರನ್ನು ಕೊಲ್ಲುತ್ತಾ ಹೋದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತ ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು ನಾವು ಯಾರೊಂದಿಗೆ ವ್ಯಾಪಾರ ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಅಮೆರಿಕ ನಮಗೆ ಗಡುವು ವಿಧಿಸುವುದು ಮತ್ತು ಟ್ರಂಪ್ ಅಪ್ಪಣೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ವಿದೇಶಾಂಗ ನೀತಿಯ ವೈಫಲ್ಯವಾಗಿದೆ. ಮೋದಿಯವರು ದೇಶವನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ನಾವು ಮಹಾತ್ಮ ಗಾಂಧೀಜಿ ತೋರಿದ ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕೇ ವಿನಃ ಅಮೆರಿಕದ ಅಹಂಕಾರಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು.

ಕಲಬುರಗಿ ವಿಮಾನ ನಿಲ್ದಾಣ ಸ್ಥಗಿತ ಕೇವಲ ಸೇಡಿನ ರಾಜಕಾರಣ

ಸ್ಥಳೀಯ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖರ್ಗೆ ಕಟುವಾಗಿ ಟೀಕಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ನಿರ್ಮಿಸಲಾದ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟವನ್ನು ಕೇಂದ್ರ ಸರ್ಕಾರ ದಿಢೀರ್ ಸ್ಥಗಿತಗೊಳಿಸಿರುವುದು ಕೇವಲ ಸೇಡಿನ ರಾಜಕಾರಣವಾಗಿದೆ. ನಾನು ಈ ಭಾಗದಲ್ಲಿ ಹೆಚ್ಚು ಸಂಚರಿಸುತ್ತೇನೆ ಎಂಬ ಏಕೈಕ ಕಾರಣಕ್ಕೆ ಈ ರೀತಿ ಜನವಿರೋಧಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನ್ ಕೀ ಬಾತ್ ಮೂಲಕ ಕೇವಲ ತಮ್ಮ ಮನಸ್ಸಿನ ಮಾತನ್ನು ಹೇಳುವ ಬದಲು ಪ್ರಧಾನಿ ಮೋದಿಯವರು ಜನಸಾಮಾನ್ಯರ ಸಂಕಷ್ಟಗಳನ್ನು ಆಲಿಸಲಿ. ಬ್ರಿಟಿಷರನ್ನೇ ಒದ್ದು ಓಡಿಸಿದ ಸ್ವಾಭಿಮಾನಿ ಇತಿಹಾಸ ನಮ್ಮದು, ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಜನರನ್ನು ಜಾಗೃತಗೊಳಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ShareTweetSendShare
Join us on:

Related Posts

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

ಸಾಹಸ ಸಿಂಹನ ಕೋಟಿಗೊಬ್ಬ ಚಿತ್ರಕ್ಕೆ 25ರ ಐತಿಹಾಸಿಕ ಸಂಭ್ರಮ ದಾದಾ ನೆನಪಿನಲ್ಲಿ ಭಾವುಕವಾಯಿತು ಕನ್ನಡ ಚಿತ್ರರಂಗ

by Shwetha
March 9, 2026
0

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲಾಗಿ ಉಳಿದಿರುವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯದ ಅಪ್ರತಿಮ ಚಲನಚಿತ್ರ ಕೋಟಿಗೊಬ್ಬ ಬಿಡುಗಡೆಯಾಗಿ ಬರೋಬ್ಬರಿ 25 ವಸಂತಗಳು ಪೂರೈಸಿವೆ. ಈ...

ನಿಮ್ಮ ಕೆಲಸ ನೀವು ನೋಡಿಕೊಳ್ಳಿ: ಅಮೆರಿಕದ ದರ್ಪಕ್ಕೆ ಕಮಲ್ ಹಾಸನ್ ಖಡಕ್ ತಿರುಗೇಟು

ನಿಮ್ಮ ಕೆಲಸ ನೀವು ನೋಡಿಕೊಳ್ಳಿ: ಅಮೆರಿಕದ ದರ್ಪಕ್ಕೆ ಕಮಲ್ ಹಾಸನ್ ಖಡಕ್ ತಿರುಗೇಟು

by Shwetha
March 9, 2026
0

ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ವಿಚಾರದಲ್ಲಿ ಭಾರತಕ್ಕೆ ತಾವು ಅನುಮತಿ ನೀಡಿದ್ದಾಗಿ ಅಮೆರಿಕದ ಆಡಳಿತ ನೀಡಿದ್ದ ಹೇಳಿಕೆ ಇದೀಗ ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು...

ರಾಷ್ಟ್ರಪತಿಗಳ ಅಸಮಾಧಾನ ಪ್ರಧಾನಿ ಮೋದಿ ಗರಂ ಶಿಷ್ಟಾಚಾರ ಮರೆತ ಬಂಗಾಳ ಸರ್ಕಾರಕ್ಕೆ ಸಂಕಷ್ಟ

ರಾಷ್ಟ್ರಪತಿಗಳ ಅಸಮಾಧಾನ ಪ್ರಧಾನಿ ಮೋದಿ ಗರಂ ಶಿಷ್ಟಾಚಾರ ಮರೆತ ಬಂಗಾಳ ಸರ್ಕಾರಕ್ಕೆ ಸಂಕಷ್ಟ

by Shwetha
March 9, 2026
0

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಯ ವೇಳೆ ನಡೆದಿದೆ ಎನ್ನಲಾದ ತೀವ್ರ ಮಟ್ಟದ ಶಿಷ್ಟಾಚಾರ ಉಲ್ಲಂಘನೆ ಹಾಗೂ ಅವಹೇಳನಕಾರಿ ಘಟನೆಗಳು ಇದೀಗ ರಾಷ್ಟ್ರಮಟ್ಟದಲ್ಲಿ ಭಾರೀ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 9, 2026
0

ದಿನ ಭವಿಷ್ಯ: 09-03-2026 ಮೇಷ ರಾಶಿ ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಲಿವೆ. ನಿಮ್ಮ ದಕ್ಷತೆಯಿಂದ ಉನ್ನತ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಸ್ಥಿತಿ...

ಟಿ20 ವಿಶ್ವಕಪ್ ಫೈನಲ್‌ : ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದು ಮಕಾಡೆ ಮಲಗಿದ ಕಿವೀಸ್ ; ಮೂರನೇ ಬಾರಿ ವಿಶ್ವಕಪ್ ಗೆದ್ದ ಸೂರ್ಯ ಪಡೆ

ಟಿ20 ವಿಶ್ವಕಪ್ ಫೈನಲ್‌ : ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದು ಮಕಾಡೆ ಮಲಗಿದ ಕಿವೀಸ್ ; ಮೂರನೇ ಬಾರಿ ವಿಶ್ವಕಪ್ ಗೆದ್ದ ಸೂರ್ಯ ಪಡೆ

by Shwetha
March 8, 2026
0

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಅದ್ಭುತ ಕ್ಷಣವಿದು. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ತನ್ನ ತವರಿನ ನೆಲದಲ್ಲಿ ಟಿ20 ವಿಶ್ವಕಪ್ ಜಯಿಸಿ ವಿಶ್ವದಾಖಲೆ ನಿರ್ಮಿಸಿದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram