ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಷ್ಟಮಿ ಭಾರತದಾದ್ಯಂತ ಆಚರಿಸಲಾಗುವ ಒಂದು ಪ್ರಮುಖ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಬ್ಬವನ್ನು ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಅಥವಾ ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ.
ಶ್ರೀ ಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾಗಿದೆ.
ಈ ಬಾರಿ ಕೃಷ್ಣ ಪಕ್ಷದ ಅಷ್ಟಮಿಯನ್ನು ಆಗಸ್ಟ್ 11, 2020 ರಂದು ಆಚರಿಸಲಾಗುವುದು.
ಕೃಷ್ಣ ಜನ್ಮಾಷ್ಟಮಿ ಪೂಜಾ ಮುಹೂರ್ತ
ಪೂಜಾ ಸಮಯ: ಆಗಸ್ಟ್ 12, 2020 ರಂದು ಬೆಳಿಗ್ಗೆ 12:05 ರಿಂದ 12:48 ರವರೆಗೆ
(ಅವಧಿ – 00 ಗಂಟೆ 43 ನಿಮಿಷಗಳು)
ಮೊಸರು ಕುಡಿಕೆ 2020 ಆಗಸ್ಟ್ 12 ರ ಬುಧವಾರ
ಅಷ್ಟಮಿ ತಿಥಿಯು ಆಗಸ್ಟ್ 11, 2020 ರಂದು ಬೆಳಿಗ್ಗೆ 09:06 ಪ್ರಾರಂಭವಾಗಿ ಆಗಸ್ಟ್ 12, 2020 ರಂದು ಬೆಳಿಗ್ಗೆ 11:16.
ಇಸ್ಕಾನ್ ಜನ್ಮಾಷ್ಟಮಿ ಪೂಜಾ ಮುಹೂರ್ತ ಕೊನೆಗೊಳ್ಳುತ್ತದೆ:
ಕೃಷ್ಣ ಜನ್ಮಾಷ್ಟಮಿಯನ್ನು ಏಕೆ ಆಚರಿಸಲಾಗುತ್ತದೆ?
ದಂತಕಥೆಗಳ ಪ್ರಕಾರ, ಮಥುರಾದ ರಾಜ ಕಂಸನನ್ನು ಕೊಲ್ಲಲು ಶ್ರೀಕೃಷ್ಣ, ಕಂಸನ ಸಹೋದರಿ ದೇವಕಿಯ ಗರ್ಭದಲ್ಲಿ ಜನ್ಮ ತಾಳುತ್ತಾನೆ. ಕಂಸನ ಸಹೋದರಿಯ ವಿವಾಹ ಆತನ ಸ್ನೇಹಿತ ವಾಸುದೇವನ ಜೊತೆ ನೆರವೇರುತ್ತದೆ. ಆಗ ಅವರಿಗೆ ಜನಿಸುವ ಎಂಟನೇ ಮಗ ಕಂಸನನ್ನು ಕೊಲ್ಲುತ್ತಾನೆ ಎಂದು ಆಶರೀರವಾಣಿ ನುಡಿಯುತ್ತದೆ.
ಭವಿಷ್ಯವಾಣಿಯ ನಂತರ, ಕಂಸ ತನ್ನ ಸಹೋದರಿ ದೇವಕಿ ಮತ್ತು ವಾಸುದೇವನನ್ನು ಸೆರೆಹಿಡಿದು ಅವರ ಎಲ್ಲ ಏಳು ಗಂಡು ಮಕ್ಕಳನ್ನು ಕೊಲ್ಲುತ್ತಾನೆ. ದಂಪತಿಗಳಿಗೆ ಎಂಟನೇ ಮಗು, ಕೃಷ್ಣ ಜನಿಸಿದಾಗ, ವಾಸುದೇವ ಮಗುವನ್ನು ಕಂಸನಿಂದ ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ವೃಂದಾವನದಲ್ಲಿನ ನಂದಾ ಮತ್ತು ಯಶೋಧೆಗೆ ತನ್ನ ಮಗುವನ್ನು ಒಪ್ಪಿಸುತ್ತಾನೆ. ಅಲ್ಲಿಂದ ವಾಸುದೇವ ಹೆಣ್ಣು ಮಗುವಿನೊಂದಿಗೆ ಮಥುರಾಕ್ಕೆ ಮರಳಿ, ಆ ಮಗುವನ್ನು ಕಂಸನಿಗೆ ಒಪ್ಪಿಸುತ್ತಾನೆ. ಆದಾಗ್ಯೂ, ರಾಜನು ಆ ಮಗುವನ್ನು ಕೊಲ್ಲಲು ಪ್ರಯತ್ನಿಸಿದಾಗ, ಅವಳು ದುರ್ಗಾ ದೇವಿಯಾಗಿ ರೂಪ ತಾಳಿ, ಅವನಿಗೆ ವಿನಾಶದ ಬಗ್ಗೆ ಎಚ್ಚರಿಕೆ ನೀಡುತ್ತಾಳೆ. ವರ್ಷಗಳ ನಂತರ, ವೃಂದಾವನದಲ್ಲಿ ಬೆಳೆದ ಶ್ರೀಕೃಷ್ಣನು ಮಥುರಾಕ್ಕೆ ಭೇಟಿ ನೀಡಿ ಕಂಸನನ್ನು ಕೊಂದು ಅವನ ಆಳ್ವಿಕೆಯನ್ನು ಕೊನೆಗೊಳಿಸುತ್ತಾನೆ.
ಕೃಷ್ಣ ಜನ್ಮಾಷ್ಟಮಿ ಆಚರಣೆ
ಆ ದಿನ ಭಕ್ತರು ದಿನವಿಡೀ ಉಪವಾಸವಿದ್ದು, ವೇದ ಸಮಯ ಪಾಲನೆಯ ಪ್ರಕಾರ ಮಧ್ಯರಾತ್ರಿಯ ನಿಶ್ಚಿತ ಕಾಲ ಸಮಯದಲ್ಲಿ ಕೃಷ್ಣ ಪೂಜೆಯನ್ನು ಮಾಡುತ್ತಾರೆ.
ಭಕ್ತರು ಬಾಲ ಕೃಷ್ಣ ನ ವಿಗ್ರಹವನ್ನು ಪಂಚಾಮೃತದಿಂದ ತೊಳೆದು, ಹೊಸ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಿ, ದೇವರಿಗೆ ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ ತೊಟ್ಟಿಲನ್ನು ತೂಗುತ್ತಾರೆ.
ಭಗವಾನ್ ಕೃಷ್ಣನು ಬೆಣ್ಣೆ, ಮೊಸರು ಮತ್ತು ಹಾಲನ್ನು ಪ್ರೀತಿಸುತ್ತಿದ್ದ ಎಂದು ಜನರು ಮರುದಿನ ಮೊಸರು ಕುಡಿಕೆ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಮೊಸರು ಕುಡಿಕೆ ಆಚರಣೆಯು ಇರುವುದಿಲ್ಲ.