ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರವಾದ ತಕ್ಷಣ ಪರಿಶಿಷ್ಟ ಜಾತಿ (SC) ಸ್ಥಾನಮಾನ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮತಾಂತರದ ಬಳಿಕ ಜಾತಿ ಪ್ರಮಾಣಪತ್ರ ರದ್ದಾಗದೇ ಇದ್ದರೂ, ಅದರಡಿ ಸಿಗುವ ಕಾನೂನು ರಕ್ಷಣೆ ಮತ್ತು ಸೌಲಭ್ಯಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದಲ್ಲಿ ಪಾದ್ರಿ ಆನಂದ್ ದಶಕಕ್ಕೂ ಹೆಚ್ಚು ಕಾಲ ಕ್ರಿಶ್ಚಿಯನ್ ಧರ್ಮದಲ್ಲೇ ಉಳಿದಿದ್ದು, ಹಿಂದಿನ ಧರ್ಮಕ್ಕೆ ಮರಳಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ.
ಆದರೆ, ಅವರು ಮರು ಹಿಂದಿನ ಧರ್ಮಕ್ಕೆ ಸೇರ್ಪಡೆಯಾಗಿರುವುದನ್ನು ಸಾಬೀತುಪಡಿಸಿದರೆ, ತಮ್ಮ ಹಿಂದಿನ SC ಸ್ಥಾನಮಾನವನ್ನು ಮತ್ತೆ ಪಡೆಯಲು ಸಾಧ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ತೀರ್ಪು ಧರ್ಮಾಂತರ ಮತ್ತು ಮೀಸಲಾತಿ ಸಂಬಂಧಿತ ವಿಷಯಗಳಲ್ಲಿ ಪ್ರಮುಖ ಮಾರ್ಗಸೂಚಿಯಾಗಲಿದೆ.







