ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

Shwetha by Shwetha
March 22, 2026
in ಮನರಂಜನೆ, Cinema, National, Newsbeat, State, ದೇಶ - ವಿದೇಶ, ರಾಜ್ಯ
Share on FacebookShare on TwitterShare on WhatsappShare on Telegram

ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾ ಘರ್ಷಣೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಜಿಎಫ್ 2 ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಶ್ ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ವಾರ ಅಕ್ಷರಶಃ ಹಬ್ಬವಾಗಬೇಕಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಟಾಕ್ಸಿಕ್ ಬಿಡುಗಡೆಯಾಗಿ ಟಿಕೆಟ್ ಕೌಂಟರ್ ಗಳು ರಾಕಿಂಗ್ ಸ್ಟಾರ್ ಆರ್ಭಟಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ ಮಾರ್ಚ್ 19ರ ಬದಲಿಗೆ ಜೂನ್ 4ಕ್ಕೆ ಸಿನಿಮಾ ಮುಂದೂಡಲ್ಪಟ್ಟಿದೆ. ಸದ್ಯದ ಬಾಕ್ಸಾಫೀಸ್ ವರದಿಗಳನ್ನು ನೋಡಿದರೆ ಯಶ್ ತೆಗೆದುಕೊಂಡ ಈ ನಿರ್ಧಾರ ಗಾಂಧಿನಗರದಿಂದ ಹಿಡಿದು ಬಾಲಿವುಡ್ ಅಂಗಳದವರೆಗೂ ಭಾರೀ ಚರ್ಚೆ ಹುಟ್ಟುಹಾಕಿದೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡವೇ ಟಾಕ್ಸಿಕ್ ಮುಂದೂಡಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಬೃಹತ್ ಚಿತ್ರಕ್ಕೆ ಗಲ್ಫ್ ರಾಷ್ಟ್ರಗಳ ಮಾರುಕಟ್ಟೆ ಅತ್ಯಂತ ಪ್ರಮುಖವಾಗಿದೆ. ಯುದ್ಧದ ಆತಂಕದ ನಡುವೆ ಅಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಕಲೆಕ್ಷನ್ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇತ್ತು. ಹಾಗಾಗಿ ಚಿತ್ರತಂಡ ಜೂನ್ 4ರಂದು ಬಿಡುಗಡೆ ಮಾಡಲು ತೀರ್ಮಾನಿಸಿತು. ಆದರೆ ಸಿನಿಮಾ ಮುಂದೂಡಿಕೆಯಾದಾಗ ಧುರಂಧರ್ 2 ಚಿತ್ರಕ್ಕೆ ಯಶ್ ಹೆದರಿದರು ಟಾಕ್ಸಿಕ್ ಚಿತ್ರದ ವಿಎಫ್ಎಕ್ಸ್ ಕೆಲಸಗಳು ಮುಗಿದಿಲ್ಲ ಕೆಲ ದೃಶ್ಯಗಳನ್ನು ಮರುಚಿತ್ರೀಕರಣ ಮಾಡಲಾಗುತ್ತಿದೆ ಎಂಬೆಲ್ಲಾ ಊಹಾಪೋಹಗಳು ಕೇಳಿಬಂದಿದ್ದವು.

Related posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

March 22, 2026
ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

March 22, 2026

ಆದರೆ ಸದ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಿದರೆ ಟಾಕ್ಸಿಕ್ ಬಿಡುಗಡೆಯಾಗದೇ ಇರುವುದೇ ಒಂದು ರೀತಿಯಲ್ಲಿ ಅದೃಷ್ಟ ಎನ್ನುವ ಮಾತುಗಳು ಸಿನಿ ಪಂಡಿತರಿಂದ ಕೇಳಿಬರುತ್ತಿದೆ. ಸದ್ಯ ದೇಶಾದ್ಯಂತ ಧುರಂಧರ್ 2 ಚಿತ್ರದ ಅಬ್ಬರ ಮಿತಿಮೀರಿದೆ. ಚಿತ್ರದಲ್ಲಿ ಲಾಜಿಕ್ ಮಿಸ್ ಆಗಿದ್ದರೂ ಸಣ್ಣ ಪುಟ್ಟ ತಪ್ಪುಗಳಿದ್ದರೂ ಪ್ರೇಕ್ಷಕರು ಅದನ್ನೆಲ್ಲಾ ಬದಿಗಿಟ್ಟು ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಒಂದು ವೇಳೆ ಇದೇ ಸಮಯದಲ್ಲಿ ಟಾಕ್ಸಿಕ್ ಬಿಡುಗಡೆಯಾಗಿದ್ದರೆ ಖಂಡಿತವಾಗಿಯೂ ಬಾಕ್ಸಾಫೀಸ್ ನಲ್ಲಿ ಇಬ್ಬಾಗವಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ರಾಕಿ ಭಾಯ್ ಹವಾ ಜೋರಾಗಿದ್ದರೆ ಉತ್ತರ ಭಾರತದಲ್ಲಿ ಧುರಂಧರ್ 2 ತನ್ನ ಪಾರುಪತ್ಯ ಮೆರೆಯುತ್ತಿತ್ತು. ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿಯೂ ದೊಡ್ಡ ಯುದ್ಧವೇ ನಡೆಯುತ್ತಿತ್ತು. ಇದರಿಂದ ಎರಡು ಚಿತ್ರಗಳ ಕಲೆಕ್ಷನ್ ಮೇಲೂ ನೇರ ಹಾಗೂ ಭಾರೀ ಪೆಟ್ಟು ಬೀಳುತ್ತಿತ್ತು.

ಇದರ ಜೊತೆಗೆ ಧುರಂಧರ್ 2 ಚಿತ್ರದ ಸುತ್ತ ನಡೆಯುತ್ತಿರುವ ಬಲವಾದ ರಾಜಕೀಯ ಚರ್ಚೆಗಳು ಟಾಕ್ಸಿಕ್ ಗೆ ಮುಳುವಾಗುವ ಸಾಧ್ಯತೆಗಳಿದ್ದವು. ಧುರಂಧರ್ 2 ಕೇವಲ ಒಂದು ಸಿನಿಮಾವಾಗಿ ಉಳಿದಿಲ್ಲ ಅದರಲ್ಲಿ ದೇಶಭಿಮಾನದ ಜೊತೆಗೆ ಪ್ರಸ್ತುತ ಸರ್ಕಾರದ ಪರವಾದ ಪ್ರಾಪಗಂಡಾ ಇದೆ ಎನ್ನುವ ಆರೋಪಗಳಿವೆ. ಪಂಚರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ಈ ಚಿತ್ರಕ್ಕೆ ಒಂದು ನಿರ್ದಿಷ್ಟ ವರ್ಗದಿಂದ ಸಿಗುತ್ತಿರುವ ಬೆಂಬಲ ಊಹೆಗೆ ನಿಲುಕದ್ದು. ಇಂತಹ ಸಮಯದಲ್ಲಿ ಟಾಕ್ಸಿಕ್ ಬಿಡುಗಡೆಯಾಗಿದ್ದರೆ ಧುರಂಧರ್ 2 ಚಿತ್ರವನ್ನು ಎತ್ತಿಹಿಡಿಯುವ ಭರದಲ್ಲಿ ಯಶ್ ಚಿತ್ರದ ಮೇಲೆ ನೆಗೆಟಿವ್ ಪ್ರಚಾರ ಮಾಡುವ ದೊಡ್ಡ ಜಾಲವೇ ಸೃಷ್ಟಿಯಾಗುವ ಅಪಾಯವಿತ್ತು. ರಾಜಕೀಯ ಲಾಭಕ್ಕಾಗಿ ಟಾಕ್ಸಿಕ್ ಚಿತ್ರವನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿರಲಿಲ್ಲ.

ಇದೆಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ ಯಶ್ ಹಾಗೂ ಟಾಕ್ಸಿಕ್ ಚಿತ್ರತಂಡ ತೆಗೆದುಕೊಂಡ ನಿರ್ಧಾರ ಅತ್ಯಂತ ಜಾಣ್ಮೆಯ ಹೆಜ್ಜೆ ಎನ್ನಬಹುದು. ಈಗ ಧುರಂಧರ್ 2 ತನ್ನ ಪಾಡಿಗೆ ತಾನು ಕಲೆಕ್ಷನ್ ಮಾಡಿ ಮುಗಿಸಲಿದೆ. ಜೂನ್ 4ರಂದು ಟಾಕ್ಸಿಕ್ ಯಾವುದೇ ಅಡೆತಡೆಗಳಿಲ್ಲದೆ ಕಾಂಪಿಟೇಷನ್ ಇಲ್ಲದೆ ಇಡೀ ವಿಶ್ವದಾದ್ಯಂತ ಸೋಲೋ ಆಗಿ ಅಬ್ಬರಿಸಲಿದೆ. ಕೆಜಿಎಫ್ 2 ನಂತರದ ನಿರೀಕ್ಷೆಗಳನ್ನು ತಲುಪಲು ಟೀಸರ್ ಮೂಲಕವೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿರುವ ಟಾಕ್ಸಿಕ್ ಗೆ ಈ ಸಮಯಾವಕಾಶ ಮತ್ತಷ್ಟು ಪ್ಲಸ್ ಆಗಲಿದೆ. ಬಾಕ್ಸಾಫೀಸ್ ಕ್ಲ್ಯಾಶ್ ತಪ್ಪಿದ್ದರಿಂದ ಚಿತ್ರರಂಗಕ್ಕೂ ಲಾಭ ಪ್ರೇಕ್ಷಕರಿಗೂ ಲಾಭ.

ಒಟ್ಟಿನಲ್ಲಿ ತಾಳ್ಮೆಯಿಂದ ಕಾಯುವ ಮೂಲಕ ರಾಕಿ ಭಾಯ್ ಮತ್ತೊಮ್ಮೆ ತಮ್ಮ ಅದ್ಭುತ ಲೆಕ್ಕಾಚಾರದಲ್ಲಿ ಗೆದ್ದಿದ್ದಾರೆ ಎನ್ನುವುದೇ ಸದ್ಯದ ಫಿಲ್ಮಿ ದುನಿಯಾದ ಹಾಟ್ ಟಾಪಿಕ್.

ShareTweetSendShare
Join us on:

Related Posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

by Shwetha
March 22, 2026
0

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪವಿತ್ರ ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಈಗ ಭಾರಿ...

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

by Shwetha
March 22, 2026
0

ಹೈದರಾಬಾದ್ ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನದ ವಿರುದ್ಧ ಹಿಂದೆಂದೂ ಕಾಣದಂತಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ...

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

by Shwetha
March 22, 2026
0

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹಾಗೂ ನಾಯಕರ ನಡುವಿನ ವಾಗ್ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಡಮ್ಮಿ ಅಭ್ಯರ್ಥಿಯನ್ನು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 22, 2026
0

ದಿನ ಭವಿಷ್ಯ: 22-03-2026 ಮೇಷ ರಾಶಿ: ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ...

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram