ಅಯ್ಯಯ್ಯೋ ನನ್ನ ಕ್ಷಮಿಸ್ಬಿಡಿ, ನಾನು ಪಾಪ ಮಾಡ್ಬಿಟ್ಟೆ : ವಿಜಯರಂಗ ಕಣ್ಣೀರು
ಬೆಂಗಳೂರು : ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಭಾರಿ ಟೀಕೆಗೆ ಒಳಗಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ಕ್ಷಮೆ ಕೇಳಿದ್ದಾರೆ. ಕಣ್ಣೀರು ಹಾಕುತ್ತಾ ವಿಜಯ್ ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವ್ಹಾ… ಹೊಸ ಸಾಧನೆಯತ್ತ ಕಿಚ್ಚನ ‘ಫ್ಯಾಂಟಮ್’… ಈ ಸಾಧನೆಯಲ್ಲೇ ಭಾರತದ 2ನೇ ಸಿನಿಮಾ…!
ವಿಜಯ್ ರಂಗರಾಜು ಹೇಳಿದ್ದೇನು ಅಂತ ನೋಡೊದಾದ್ರೆ…
ಕರ್ನಾಟಕ ಜನರು, ಕರ್ನಾಟಕ ಮಕ್ಕಳಿಗೆ ನಮಸ್ಕಾರ. ವಿಜಯ್ ರಂಗರಾಜು ಮಾತನಾಡುತ್ತಿದ್ದೇನೆ. ನಾನು ತುಂಬಾ ದೊಡ್ಡ ತಪ್ಪು ಮಾಡಿದ್ದೀನಿ. ಆ ತಪ್ಪುಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಅದಕ್ಕಾಗಿ ನಾನು ಮಾಸ್ಕ್ ಹಾಕಿಕೊಂಡಿದ್ದೇನೆ. ನಿಮಗೆ ನನ್ನ ಮುಖ ತೋರಿಸಬಾರದೆಂದು ಅಲ್ಲ. ಕೊರೊನಾದಿಂದಾಗಿ ನಾನು ಕಷ್ಟಪಡುತ್ತಿದ್ದೇನೆ. ನಾನು ದೊಡ್ಡ ಪಾಪ ಮಾಡಿದ್ದೇನೆ. ನಾನು ಇಂಡಸ್ಟ್ರೀಗೆ ಬಂದು ತುಂಬಾ ದಿನಗಳಾಗಿವೆ. ಫೈಟರ್ ಆಗಿ ನಾನು ಇಂಡಸ್ಟ್ರೀಗೆ ಬಂದೆ. ದೊಡ್ಡ ಆರ್ಟಿಸ್ಟ್ ಏನಲ್ಲ. ಕೆಲ ವ್ಯಾಪಾರಗಳನ್ನು ಮಾಡಿ ಎಲ್ಲ ಕಳೆದುಕೊಂಡಿದ್ದೇನೆ. ಮತ್ತೆ ನಾನು ಲಂಡನ್ ಗೆ ಹೋಗಿ, ಅಲ್ಲಿ ಕಸಗುಡಿಸಿದ್ದೀನಿ, ಟಾಯ್ಲೆಟ್ ಕ್ಲೀನ್ ಮಾಡ್ದೆ, ಆದ್ರೂ ನನ್ನ ಕಷ್ಟ ತೀರಲಿಲ್ಲ. ಆ ದಿನ ನಾನು ವಿಷ್ಣುವರ್ಧನ್ ಅವರನ್ನ ಹಿಡ್ಕೊಲಿಲ್ಲ. ಅಂತಃ ದೊಡ್ಡ ವ್ಯಕ್ತಿಯನ್ನ ನಾನು ಹಿಡ್ಕೊಂಡಿದ್ರೆ ಅಲ್ಲಿದ್ದ ಯುನಿಟ್ ಅವ್ರು ನನ್ನ ಸುಮ್ನೆ ಬಿಡ್ತೀದ್ರಾ..? ಅಲ್ಲೇ ನನ್ನ ಸಾಯ್ಸಿಬಿಡ್ತಿದ್ರು.
ನಾನು ಯಾವುದೋ ಕೋಪದಲ್ಲಿ, ಏನೋ ಫ್ಲೋನಲ್ಲಿ ಅವ್ರ ಬಗ್ಗೆ ಆ ರೀತಿ ಹೇಳ್ಬಿಟ್ಟೆ. ನಾನು ನಿಮ್ಮ ಪಾದಗಳನ್ನ ಹಿಡಿದು ಬೇಡಿಕೊಳ್ಳುತ್ತೇನೆ ದಯವಿಟ್ಟ ನನ್ನ ಬಿಟ್ಟು ಬಿಡಿ.. ಅಂತಾ ಕಣ್ಣೀರು ಹಾಕುತ್ತಾ ವಿಜಯ್ ರಂಗ ಕ್ಷಮೆ ಕೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








