ಪ್ರೀತಿಯಲ್ಲಿ ದುರಂತ ಅಂತ್ಯ ಕಂಡವರು.. ಪ್ರಮುಖ ಸುದ್ದಿಗಳು..!
ನಿನ್ನ ಪ್ರೀತಿ ಒಪ್ಪಿದ್ದೇವೆ ತಂಗ್ಯವ್ವ… ಮನೆಗೆ ಬಾ ಎಂದ ಅಣ್ಣ ಕೊಟ್ಟ ಗಿಫ್ಟ್ ಏನ್ ಗೊತ್ತಾ..!
ಉತ್ತರಪ್ರದೇಶ: ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ 23 ವರ್ದ ಚಾಂದಿನಿ ಕಶ್ಯಪ್ ಎಂಬಾಕೆ ಹಾಗೂ 25 ವರ್ಷದ ದಲಿತ ಯುವಕ ಅರ್ಜುನ್ ಕುಮಾರ್ ಎಂಬಾತರು ಸುಮಾರು 8 ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಯುವಕ ದಲಿತ ಎಂಬ ಕಾರಣಕ್ಕೆ ಯುವತಿಯ ಮನೆಯರು ಪ್ರೀತಿಯನ್ನ ಒಪ್ಪಿರಲಿಲ್ಲ. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಲಾಕ್ಡೌನ್ ಸಮಯದಲ್ಲಿ ಮದುವೆಯಾಗಿದ್ದರು.
ಆದ್ರೆ ಇತ್ತೀಚೆಗೆ ಮನೆಯರು ಯುವತಿಯ ಜೊತೆಗೆ ಮಾತನಾಡುವ ನಾಟಕ ಮಾಡಿ ಮನೆಗೆ ಬಾ ಎಂದು ಕರೆಸಿಕೊಂಡಿದ್ದಾರೆ. ಆನಂತರ ಆಕೆಗೆ ಚಿತ್ರಹಿಂಸೆ ಕೊಡಲಾರಂಭಿಸಿದ್ದಾರೆ. ಈ ಬಗ್ಗೆ ಯುವತಿ ತನ್ನ ಗಂಡನಿಗೆ ಫೋನ್ ಮೂಲಕ ತಿಳಿಸಿದ್ದಾಳೆ. ಇದಾದ ಬಳಿಕ ಪತ್ನಿಯ ಜೊತೆಗೆ ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆ ಆಕೆಯ ಪತಿ ಅರ್ಜುನ್ ಪೊಲೀಸರಿಗೆ ದೂರು ನೀಡಿದ ಬಳಿಕ ಪತ್ನಿ ಕೊಲೆಯಾಗಿರುವ ಆಘಾತಕಾರಿ ವಿಚಾರ ಗೊತ್ತಾಗಿದೆ. ಆಕೆಯ ಅಣ್ಣನೇ ಇನ್ನಿತರರ ಜೊತೆ ಸೇರಿ ಕೊಲೆ ಮಾಡಿ ತಮ್ಮ ಹೊಲದಲ್ಲಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾನಂತೆ.
ಆಕೆ ಅಪ್ರಾಪ್ತೆ.. ಈತ ವಿವಾಹಿತ : ಹುಚ್ಚು ಪ್ರೀತಿ ಕಂಡದ್ದೇ ದುರಂತ ಅಂತ್ಯ..!
ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ವಿವಾಹಿತನ ಜೊತೆಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಅಪ್ರಾಪ್ತೆ ಹಾಗೂ ವಿವಾಹಿತ ವ್ಯಕ್ತಿ ತಮ್ಮ ಲವ್ ಗೆ ಸಪೋರ್ಟ್ ಸಿಗದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಾಲೇರದೊಡ್ಡಿಯ (17) ಮಹಾದೇವಿ ಹಾಗೂ ಯರಜಂತಿ ಗ್ರಾಮದ (28)ನರಸಪ್ಪ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ನರಸಪ್ಪಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಹೀಗಾಗಿ ಬಾಲಕಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಇಬ್ಬರು ಊರು ಬಿಟ್ಟು ಓಡಿ ಹೋಗಿದ್ದರು. ಬಳಿಕ ಅಪ್ರಾಪ್ತೆಯಾಗಿದ್ದರಿಂದ ಮೇಜರ್ ಆಗೋವರೆಗೆ ಬಾಲಮಂದಿರದಲ್ಲಿರಿಸಿ, ಆನಂತ್ರ ವಿವಾಹವಾಗಲು ಬಾಲಮಂದಿರದ ಅಧಿಕಾರಿಗಳು ತಿಳಿಸಿದ್ದರಂತೆ. ಆದರೆ ಅಷ್ಟರೊಳಗೇ ಈ ಇಬ್ಬರು ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಪೈದೊಡ್ಡಿ ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿದ್ದಾರೆ. ಬಾಲಕಿ ಸಾವನಪ್ಪಿದ್ದಾಳೆ. ನರಸಪ್ಪ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ.
ನಾನು 10 ಮಹಿಳೆಯರಿಗೆ ಸೇರಿದವನು : ಪತ್ನಿಗೆ ಶಾಕ್ ಕೊಟ್ಟ ಪತಿರಾಯ ಮಾಡಿದ್ದೇನು ಗೊತ್ತಾ..!
ಮುಂಬೈ: ಮಹಾರಾಷ್ಟ್ರದಲ್ಲಿ ಪತಿಯೋರ್ವ ಪತ್ನಿಗೆ ತಲಾಖ್ ನೀಡಿ ಪತ್ನಿಗೆ ಆಘಾತಕಾರಿ ವಿಚಾರವೊಂದನ್ನೂ ಹೇಳಿದ್ದಾನೆ. ಈತ ತಲಾಖ್ ನೀಡಿರೋದು 10 ಜನ ಮಹಿಳೆಯರಿಗಾಗಿ. ಹೌದು 10 ಮಹಿಳೆಯರ ಜೊತೆಗೆ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಈ ಕಿರಾತಕ ಪತ್ನಿಗೆ ತಲಾಖ್ ನೀಡಿದ್ದಾರೆ.
ಮೊಹ್ಶಿನ್ ಎಂಬಾಕೆ ಈತನ ಜೊತೆಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇನ್ನೂ ಈತನಿಗೆ ಮದುವೆಗೂ ಮುಂಚೆಯೂ ಅನೇಕರ ಜೊತೆಗೆ ಅಕ್ರಮ ಸಂಬಂಧವಿತ್ತಂತೆ. ಆದ್ರೆ ಮದುವೆಯಾದ ಮೇಲೂ ಈತ ತನ್ನ ಚಾಳಿ ಮುಂದುವರೆಸಿದ್ದಾನೆ. ಇದೇ ವಿಚಾರವಾಗಿ ಇವರಿಬ್ಬರ ನಡುವೆ ಕಿತ್ತಾಟ ನಡೆದಿದ್ದು, ತಾರಕ್ಕೇರಿದೆ. ಈ ವೇಳೆ ನಾನು ನಿನ್ನಬ್ಬನಿಗೆ ಸೀಮಿತವಾಗಿಲ್ಲ ಇನ್ನೂ 10 ಜನರಿಗೆ ಸೇರಿದವನು ಎಂದು ಮೂರು ಬಾರಿ ತಲಾಖ್ ಹೇಳಿ ಹೊರಟು ಹೋಗಿದ್ದಾನೆ.
8 ವರ್ಷಗಳ ಡೇಟಿಂಗ್ ನಂತರವೂ ವಿವಾಹಕ್ಕೆ ಒಪ್ಪದ ಗೆಳೆಯ – ನ್ಯಾಯಾಲಯದ ಕದ ತಟ್ಟಿದ ಮಹಿಳೆ
ಜಾಂಬಿಯಾ: ಜಾಂಬಿಯಾದ ಮಹಿಳೆಯೊಬ್ಬಳು ತನ್ನ ಗೆಳೆಯನ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದು, 8 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಳು. 8 ವರ್ಷ ಒಟ್ಟಿಗೆ ಕಳೆದ ನಂತರವೂ, ಗೆರ್ಟ್ರೂಡ್ ನ್ಗೋಮಾ ಎಂಬ ಮಹಿಳೆ ತನ್ನ ಸಂಗಾತಿ ಹರ್ಬರ್ಟ್ ಸಲಾಲಿಕಿ ವಿವಾಹದ ಬಗ್ಗೆ ಯೋಚಿಸದ ಕಾರಣ ನಿರಾಶೆಗೊಂಡಳು ಮತ್ತು ಅವಳು ಆತನನ್ನು ಮದುವೆಯಾಗುವಂತೆ ಕೇಳಿಕೊಂಡಳು.
ಆದರೆ ಆತ ಇದಕ್ಕೆ ನಿರಾಕರಿಸಿದಾಗ ಕೋಪಗೊಂಡ ಆಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದಳು. ಅವನು ತನ್ನ ಮದುವೆಯನ್ನು ಪ್ರಸ್ತಾಪಿಸದೆ ಸುಮಾರು ಒಂದು ದಶಕದಿಂದ ತನ್ನ ಸಮಯವನ್ನು ವ್ಯರ್ಥ ಮಾಡಿದನೆಂದು ಆರೋಪಿಸಿದಳು.
ತನ್ನ ಮಗುವಿನ ತಂದೆಯಾದ ಸಲಾಲಿಕಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ಆದರೆ ಈಗ ಆತ ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾನೆ ಎಂದು ಎನ್ಗೋಮಾ ಹೇಳಿದಳು. ಅಷ್ಟೇ ಅಲ್ಲ, ಹರ್ಬರ್ಟ್ ತನ್ನನ್ನು ಮೋಸ ಮಾಡುತ್ತಿದ್ದಾನೆ ಎಂದು ಅವಳು ಅನುಮಾನಿಸಿದಳು.
ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ : ತೆಲುಗು ನಟನಿಗೆ ಕಿಚ್ಚ ವಾರ್ನಿಂಗ್
ಅವನು ಎಂದಿಗೂ ಮದುವೆಯ ವಿಷಯದಲ್ಲಿ ಗಂಭೀರವಾಗಿರಲಿಲ್ಲ. ಮುಂದಿನ ದಾರಿ ಮತ್ತು ನಮ್ಮ ಭವಿಷ್ಯವನ್ನು ತಿಳಿಯಲು ನಾನು ಅರ್ಹಳಾಗಿದ್ದು, ಅದಕ್ಕಾಗಿಯೇ ನಾನು ಆತನನ್ನು ನ್ಯಾಯಾಲಯಕ್ಕೆ ಎಳೆದೆ ಎಂದು ಆಕೆ ಕೀನ್ಯಾದ ಸುದ್ದಿ ಸಂಸ್ಥೆಗೆ ತಿಳಿಸಿದಳು.
ಸಲಾಲಿಕಿ ವರದಕ್ಷಿಣೆಯನ್ನು ಸಹ ಪಡೆದಿದ್ದಾನೆ, ಆದರೆ ಇದೀಗ ಆತ ಮದುವೆಯಾಗಲು ಆರ್ಥಿಕವಾಗಿ ಸದೃಢನಾಗಿಲ್ಲ ಎಂದು ಹೇಳುತ್ತಿರುವುದಾಗಿ ಆಕೆ ಆರೋಪಿಸಿದಳು.
ಏತನ್ಮಧ್ಯೆ, ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ, ಎನ್ಗೋಮಾ ತನಗೆ ಅಗತ್ಯವಾದ ಗಮನವನ್ನು ನೀಡುತ್ತಿಲ್ಲ ಎಂದು ಹರ್ಬರ್ಟ್ ಆರೋಪಿಸಿದ್ದಾನೆ.
ಆದರೆ, ಪ್ರಕರಣದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು, ಈ ಪ್ರಕರಣದಲ್ಲಿ ನ್ಯಾಯಾಲಯವು ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ನೀವು ಕಾನೂನುಬದ್ಧವಾಗಿ ಮದುವೆಯಾಗಿಲ್ಲ. ನಿಮ್ಮ ಭಿನ್ನಾಭಿಪ್ರಾಯಗಳನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಲು ಪ್ರಯತ್ನಿಸುವಂತೆ ಸೂಚಿಸಿದರು.
ಸಿಬಿಐ ವಶದಲ್ಲಿದ್ದ 103 ಕೆ.ಜಿ. ಚಿನ್ನ ನಾಪತ್ತೆ : ಹಾಗಾದ್ರೆ ಕದ್ದವರು ಯಾರು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








