“ಶಿವ-ಪ್ರಿಯ” ವಿಷ್ಣುವಾದರೆ, “ವಿಷ್ಣು-ಪ್ರಿಯ” ಶಿವ –
ದೃಷ್ಟಿ ದೋಷವುಳ್ಳವರು ಬೇರೆ ಬೇರೆ ನೋಡುತ್ತಾರೆ:-
ವೈಕುಂಠಪತಿ ನಾರಾಯಣ ಮತ್ತು ಲಕ್ಷ್ಮಿಯ ಮಧ್ಯೆ ಏನೋ ಕಾರಣಕ್ಕೆ ಮಾತಿಗೆ ಮಾತಾಗಿ ಕೋಪಗೊಂಡು ಲಕ್ಷ್ಮಿಗೆ ಕುದುರೆಯಾಗು ಎಂದು ವಿಷ್ಣು ಶಾಪ ಕೊಟ್ಟನು. ( ಇದು ಭಗವಂತನ ಲೀಲಾ ನಾಟಕದ ವೇದಿಕೆಗೆ ಪೂರ್ವ ತಯಾರಿ) ಶಾಪ ಕೊಟ್ಟಿದ್ದು ಏಕೆಂದು ಅವಳು ಕೇಳಲಿಲ್ಲ. ಶಾಪದ ಪ್ರಭಾವದಿಂದ ಯಮುನಾ ಮತ್ತು ತಮಸ ನದಿಗಳ ಸಂಗಮ ಜಾಗದಲ್ಲಿ ಹೆಣ್ಣು ಕುದುರೆಯಾಗಿ ಜನಿಸಿದಳು. ಲಕ್ಷ್ಮಿಗೆ ಪೂರ್ವ ಜನ್ಮದ ಸ್ಮೃತಿ ಇದ್ದು, ತಾನು ಶಾಪದಿಂದ ಕುದುರೆಯಾಗಿ ಇಲ್ಲಿರಬೇಕಾ ಗಿದೆ. ವೈಕುಂಠದಲ್ಲಿ ನಾರಾಯಣ ಹಾಯಾಗಿದ್ದಾನೆ ಎಂಬ ದುಃಖಕ್ಕಿಂತ, ತನ್ನ ಪತಿಯನ್ನು ಬಿಟ್ಟಿರ ಬೇಕಲ್ಲ ಎಂಬ ಹತಾಶೆ ನೋವು ಹೆಚ್ಚಾಗಿ, ತನ್ನ ಪತಿಯನ್ನು ಹೇಗಾದರೂ ಮಾಡಿ ಹತ್ತಿರ ಕರೆಸಿ ಕೊಳ್ಳಬೇಕು ಎಂಬ ಯೋಚನೆ ಬಂದಿತು. “ಶಿವ”ನನ್ನು ಕುರಿತು ಕಠಿಣ ತಪಸ್ಸು ಮಾಡಲು ಕುಳಿತಳು. ಅವಳ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ, ಲಕ್ಷ್ಮಿಯನ್ನು ಕೇಳಿದ ನೀನು ನನ್ನನ್ನು ಕುರಿತು ಏಕೆ ತಪಸ್ಸು ಮಾಡಿದೆ ನಿನಗೆ ಎಂತದೇ ಕಠಿಣ ಸಮಸ್ಯೆ ಬಂದರೂ ಜಗತ್ಪರಿಪಾಲಕನಾದ ಶ್ರೀ ಹರಿ ಚಿಟಿಕೆ ಹೊಡೆಯುವುದರಲ್ಲಿ ಸರಿಪಡಿಸುತ್ತಿದ್ದ. ಹೀಗಿರುವಾಗ ನನ್ನನ್ನು ಆರಾಧಿಸಿದ್ದು ಏಕೆ ಎಂದು ಕೇಳಿದ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಲಕ್ಷ್ಮಿಯು, ಮಹಾದೇವ, ನನ್ನ ಪತಿ ನಾರಾಯಣ ಯಾವಾಗಲೂ ಧ್ಯಾನ ಮಾಡುತ್ತಿ ದ್ದರು ಒಂದು ದಿನ ಕೇಳಿದೆ, ಸ್ವಾಮಿ, ತ್ರಿಪುರಾಂತಕರಾದ ನೀವು ಎಲ್ಲರಿಗೂ ಒಡೆಯ ಎಂದು ನಾನು ನಿಮ್ಮನ್ನು ಮದುವೆ ಯಾಗಿದ್ದು, ಹೀಗಿರುವಾಗ ನೀವು ಯಾರನ್ನು ಧ್ಯಾನಿಸಬೇಕು ಎಂದು ಕೇಳಿದೆ. ಶ್ರೀಹರಿ ನಕ್ಕು, ನಾನು ಶಿವನ ಧ್ಯಾನ ಮಾಡುವೆ “ಪರಮೇಶ್ವರ ನನ್ನ ಪ್ರಾಣ, ನಾನು ಪರಮೇಶ್ವರನ ಪ್ರಾಣ” ನಾವಿಬ್ಬರೂ ಬೇರೆ ಬೇರೆ ಅಲ್ಲ, ಇಬ್ಬರೂ ಒಂದೇ. ನನಗೆ ಶಿವನು ಪ್ರಿಯನಾದರೆ- ಶಿವನಿಗೆ ನಾನು ಪ್ರಿಯ. ಯಾರು ನಮ್ಮಿಬ್ಬರನ್ನು ಬೇರೆ ಬೇರೆ ಯಾಗಿ ನೋಡುತ್ತಾರೋ ಅವರು ದೃಷ್ಟಿ ದೋಷಿಗಳಾಗಿರುತ್ತಾರೆ. ಯಾರೇ ನನ್ನ ಭಕ್ತರಾಗಿರಲಿ ಶಿವನಿಗೆ ಅಗೌರವ ತೋರಿದರೆ ಅವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. ಅವರ ಪೂಜೆ -ಧ್ಯಾನ- ದಾನ – ಪಠಣ- ಬೋಧನೆ ಯಾವುದು ಫಲ ಕೊಡುವುದಿಲ್ಲ. ಇದೇ ಮಾತು ಶಿವನದು ಆಗಿದೆ. ಶಿವ ಭಕ್ತರಾದ ಯಾರೇ ಆದರೂ ವಿಷ್ಣುವಿಗೆ ಅಗೌರವ ತೋರಿ ದರೆ ಅವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. ಹಾಗೆ ಅವರ ಶಿವ ಧ್ಯಾನ- ಶಿವ ಪೂಜೆ- ದಾನ- ಧರ್ಮ ಎಲ್ಲವೂ ವ್ಯರ್ಥ. ಇದು ಶಿವ ಮತ್ತು ವಿಷ್ಣುವಿನ ಒಮ್ಮತ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಹಾಗೆ, ಪುರಾಣಗಳೂ ಇದನ್ನೆ ಹೇಳುತ್ತವೆ. ಆದರೆ ಕ್ಷುಲ್ಲಕ ಮನಸ್ಸಿನ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಮಹಾನ್ ಪಂಡಿತರೆಂದು ತಿಳಿದವರೇ, ಶಿವ ಮತ್ತು ವಿಷ್ಣುವಿನ ನಡುವೆ ಭೇದ ಕಲ್ಪಿಸಿ ಸಮಾಜ ಒಡೆಯುವ ಪಾತಕಿಗಳಾಗುತ್ತಿದ್ದಾರೆ. ಭಗವಂತ ಒಬ್ಬನೇ ಅವನ ರೂಪ ಹಲವು, ಎಂದು ಜ್ಞಾನಿಗಳು, ವಿಚಾರವಂತರು, ಹೇಳುತ್ತಿದ್ದ ರೂ ಒಬ್ಬ ದೇವನನ್ನು ಛಿದ್ರ ಛಿದ್ರ ಮಾಡಿ ನಾನು ಮೇಲು, ತಾನು ಮೇಲು ಎಂದು ಸ್ವಯಂ ಘೋಷಣೆ ಮಾಡಿಕೊಂಡು ಜನರ ಐಕ್ಯತಾ ಭಾವವನ್ನು ಒಡೆಯುತ್ತಿದ್ದಾರೆ ಇದರ ಕರ್ಮ ಫಲ ಅವರಿಗೆ ಕಾದಿರುತ್ತದೆ ಎಂದು ಮಹಾ ತಪಸ್ವಿಗಳು, ತ್ರಿಕಾಲ ಜ್ಞಾನಿಗಳು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ.
ಮೇಲಿನ ಕಥೆಯಂತೆ, ಲಕ್ಷ್ಮಿಯು ಪ್ರಾರ್ಥಿಸಿ, ಮಹಾದೇವ ನೀವು ಹೇಗಾದರೂ ಮಾಡಿ ನಾರಾಯಣನನ್ನು ಕರೆಸುವಂತೆ ಶಿವನಲ್ಲಿ ಬೇಡಿದಳು. ಶಿವನು ತಕ್ಷಣ ತನ್ನ ಗಣಗಳಲ್ಲಿ ಒಬ್ಬನನ್ನು ವೈಕುಂಠಕ್ಕೆ ಕಳಿಸಿ ವಿಷ್ಣುವನ್ನು ಕರೆಸಿದನು. ಮಹಾವಿಷ್ಣು ಶಿವನ ಮಾತನ್ನು ಮನ್ನಣೆ ಮಾಡಿ ಮುಂದಿನ ತನ್ನ ಲೀಲಾ ಕಾರ್ಯ ಆರಂಭಿಸಲು, ತಾನು ಗಂಡು ಕುದುರೆ ಯಾಗಿ ಲಕ್ಷ್ಮಿ ಇದ್ದ ಜಾಗಕ್ಕೆ ಬಂದನು. ಹೆಣ್ಣು ಕುದುರೆಯಾ ಗಿದ್ದ ಲಕ್ಷ್ಮಿಗೆ ಗಂಡು ಕುದುರೆ ನೋಡಿ ತನ್ನ ಪತಿ ಎಂಬುದು ತಿಳಿಯಿತು. ಇಬ್ಬರು ಕೆಲವು ಕಾಲ ಸುಖವಾಗಿದ್ದರು. ಅವರಿಗೆ ಒಂದು ಮಗು ಹುಟ್ಟಿತು. ಲಕ್ಷ್ಮಿಗೆ ಮಗುವನ್ನು ಕಂಡರೆ ಬಹಳ ಪ್ರೀತಿ. ಕ್ಷಣವು ಬಿಟ್ಟಿರಲಿಲ್ಲ. ಆದರೆ ವಿಷ್ಣು ಲೀಲಾ ಕಾರ್ಯದ ನಿಮಿತ್ತ ಜನಿಸಿದ ಮಗುವನ್ನು ವೈಕುಂಠಕ್ಕೆ ಕರೆತರಲು ಒಪ್ಪದ ಅಲ್ಲೇ ಬಿಟ್ಟು, ಲಕ್ಷ್ಮಿ ಯನ್ನು ಕರೆದುಕೊಂಡು ವೈಕುಂಠಕ್ಕೆ ಬಂದನು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
“ಹರಿವರ್ಮ” ಎಂಬ ರಾಜ ನೂರು ವರ್ಷದಿಂದ ಸಂತಾನಕ್ಕಾಗಿ ತಪಸ್ಸು ಮಾಡುತ್ತಿ ದ್ದನು. ನಾರಾಯಣನು, ರಾಜನ ಕನಸಿನಲ್ಲಿ ಬಂದು ಏನು ಬೇಕು? ಎಂದಾಗ, ರಾಜನು, ಹೇ ನಾರಾಯಣ ನಿನ್ನ ಹಾಗೂ ಲಕ್ಷ್ಮಿಯಿಂದ ಜನಿಸಿದ ಸಂತಾನ ನನಗೆ ಕರುಣಿಸು ಎಂದು ಬೇಡಿದ, ಆಯಿತು ಎಂದ ವಿಷ್ಣು ಹಾಗಾದರೆ ನೀನು ಈಗಲೇ ಯಮುನಾ ಮತ್ತು ತಮಸ ನದಿಗಳ ಸಂಗಮದಲ್ಲಿ ನನ್ನ ಹಾಗೂ ಲಕ್ಷ್ಮಿಯ ಸಂತಾನವಾದ ಒಂದು ಮಗು ಇದೆ ಅದನ್ನ ತೆಗೆದುಕೊಂಡು ಬಂದು ಸಾಕು ಎಂದನು. ರಾಜನು ಬೆಳಿಗ್ಗೆ ಎದ್ದು ಕನಸಿನಂತೆ ಯಮುನಾ ಮತ್ತು ತಮಾಸ ನದಿಗಳ ಸಂಗಮ ದತ್ತ ಹೋಗಿ ನೋಡಿದಾಗ ಸುಂದರವಾದ ಶಿಶು ಕಾಣಿಸಿತು. ಸಂತೋಷದಿಂದ ಆ ಮಗುವನ್ನು ಅರಮನೆಗೆ ತಂದು “ಏಕವೀರ” ಎಂದು ನಾಮಕರಣ ಮಾಡಿ ಅಕ್ಕರೆಯಿಂದ ಸಾಕಿದನು. ಈ ಮಗು ಮುಂದೆ ದೊಡ್ಡವನಾಗಿ ರಾಜ್ಯದ ಅರಸನಾಗಿ “ಹಯ್ ಹಯರ” ವಂಶವನ್ನು ನಿರ್ಮಾಣ ಮಾಡಿದನು.
ಜಗಜ್ಜಾಲಪಾಲಂ ಕಚತ್ಕಂಠ ಮಾಲಂ
ಶರಶ್ಚಂದ್ರಬಾಲಂ ಮಹಾದೈತ್ಯ ಕಾಲಂ!
ನಬೋ ನೀಲಕಾಯಂ ದುರಾವಾರ ಮಾಯಂ
ಸುಪದ್ಮ ಸಹಾಯಂ ಭಜೇ ಹಂ ಭಜೇ ಹಂ!!








