ಬೆಂಗಳೂರು: ಎರಡನೇ ವಿಮಾನ ನಿಲ್ದಾಣ (Second Airport) ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ (MB Patil) ಹೇಳಿದ್ದಾರೆ.
ವಿಧಾನಸೌಧದಲ್ಲಿ (Vidhana Soudha) ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಆಂತರಿಕ ಚರ್ಚೆ ಸಲುವಾಗಿ ಇಂದು ನಾನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಜೊತೆ ಸಭೆ ನಡೆಸಿದೆವು. ನಮ್ಮ ಬೆಂಗಳೂರು, ಕರ್ನಾಟಕಕ್ಕೆ ಒಳ್ಳೆಯದಾಗಬೇಕು. ಆರ್ಥಿಕ ಸ್ಥಿತಿ, ವ್ಯವಹಾರಕ್ಕೆ ಉಪಯೋಗ ಆಗಬೇಕು, ಆದರೆ, ಯಾವ ಸ್ಥಳ ಎಂಬುವುದು ಮಾತ್ರ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.
ಒಂದು ವಾರದ ನಂತರ ಮತ್ತೊಂದು ಸಭೆ ಮಾಡುತ್ತೇವೆ. ಸಭೆ ನಡೆದ ಬಳಿಕ ನಿರ್ಧಾರ ಆಗಲಿದೆ.ಅಳೆದು ತೂಗಿ ಈ ನಿರ್ಧಾರ ಮಾಡುತ್ತೇವೆ. ಯಾರದ್ದು ಪರ್ಸನಲ್ ಇಲ್ಲ, ಇದೇ ಜಾಗ ಅಂತ ಇಲ್ಲ ಎಂದಿದ್ದಾರೆ.
ದಾಬಾಸ್ ಪೇಟೆ, ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿಎರಡು ಜಾಗ, ಹಾರೋಹಳ್ಳಿ ಹಾಗೂ ಬಿಡದಿ ಜಾಗ ಗುರುತಿಸಿದ್ದೇವೆ ಎಂದಿದ್ದಾರೆ.