ಭಾರತದಲ್ಲಿ ಆಶ್ರಯ ಕೋರಿ 736 ಅಫ್ಗಾನ್ ಪ್ರಜೆಗಳಿಂದ ಅರ್ಜಿ ಸಲ್ಲಿಕೆ
ಅಫ್ಗಾನ್ ನಲ್ಲಿ ಮೃಗಗಳ ಸಾಮ್ರಾನ್ಯ ಸ್ಥಾಪನೆಯಾಗಿದ್ದು, ಅಧಿಕಾರವು ಅನಾಗರಿಕ ನರರೂಪಿ ರಾಕ್ಷಸ ತಾಲಿಬಾನ್ ಉಗ್ರರ ಕೈವಶಶವಾಗಿದೆ.
ಈ ನಡುವೆ ಅಲ್ಲಿನ ಜನರು ನೆಮ್ಮದಿಯಿಲ್ಲದ ಬದುಕು ನಡೆಸುತ್ತಿದ್ದಾರೆ.
ದೇಶ ಬಿಟ್ಟು ಬೇರೆಡೆ ಪರಾರಿಯಾದ್ರೆ ಸಾಕಪ್ಪಾ ಅನ್ನೋ ಚಿಂತೆಯಲ್ಲಿದ್ದಾರೆ.
ಅಷ್ಟೇ ಅಲ್ಲ ಆಗಸ್ಟ್ 31 ರೊಳಗಡೆ ಸಾಕಷ್ಟು ಅಫ್ಗನ್ ಪ್ರಜೆಗಳು ಬೇರೆ ಬೇರೆ ದೇಶಗಳಿಗೆ ಪರಾರಿಯಾಗಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಎಷ್ಟು ತೀವ್ರವಾಗಿದೆ ಅನ್ನೋ ವಿಚಾರ ಎಲ್ರಿಗೂ ಗೊತ್ತೇ ಇದೆ.
ಭಾರತಕ್ಕೆ ಆಶ್ರಯ ಕೇಳಿ ಸಾಕಷ್ಟು ಅರ್ಜಿಗಳು ಬಂದಿದ್ದವು.
ಅದ್ರಂತೆ ಆಗಸ್ಟ್ 1 ರಿಂದ ಸೆಪ್ಟೆಂಬರ್ 11ರ ವರೆಗೆ ಒಟ್ಟು 736 ಅಫ್ಗಾನಿಸ್ತಾನದ ಪ್ರಜೆಗಳು ಭಾರತದಲ್ಲಿ ಆಶ್ರಯ ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ನಿರಾಶ್ರಿತರ ಹೈಕಮಿಷನರ್ ಕಚೇರಿ ಮಾಹಿತಿ ನೀಡಿದೆ.
ಹೌದು ಭಾರತದಲ್ಲಿ ಆಶ್ರಯಕ್ಕಾಗಿ ಹಾಗೂ ನೆರವು ಕೇಳಿ ಅರ್ಜಿಸಲ್ಲಿಸುವ ಅಫ್ಗನ್ನರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.
ಅಫ್ಗನ್ ಪ್ರಜೆಗಳಿಗೆ, ವೀಸಾ ಪೂರೈಕೆ ಮತ್ತು ಇರುವ ವೀಸಾ ಅವಧಿಯ ವಿಸ್ತರಣೆಗೆ ನೆರವಾಗುವುದು ಸೇರಿದಂತೆ ಹಲವು ಪರಿಹಾರ ಕಾರ್ಯಗಳ ಕುರಿತು ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುಎನ್ಎಚ್ಸಿಆರ್ ತಿಳಿಸಿದೆ.








