ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಭಾದ್ರಪದ ಮಾಸದ ಹುಣ್ಣಿಮೆ. ಈ ದಿನ ರಾಹು ಜಯಂತಿ. ಈ ದಿನ ತುಂಬಾ ವಿಶೇಷವಾದ ದಿನ. ಈ ರೀತಿಯಾಗಿ ಆಚರಣೆ ಮಾಡಿದರೆ ರಾಹು ದೋಷದಿಂದ ಮುಕ್ತಿ…

Shwetha by Shwetha
September 20, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology bhadrapada maasada hunnime
Share on FacebookShare on TwitterShare on WhatsappShare on Telegram

ಭಾದ್ರಪದ ಮಾಸದ ಹುಣ್ಣಿಮೆ. ಈ ದಿನ ರಾಹು ಜಯಂತಿ. ಈ ದಿನ ತುಂಬಾ ವಿಶೇಷವಾದ ದಿನ. ಈ ರೀತಿಯಾಗಿ ಆಚರಣೆ ಮಾಡಿದರೆ ರಾಹು ದೋಷದಿಂದ ಮುಕ್ತಿ…

ಈ ರಾಹು ಜಯಂತಿಯನ್ನು ಹೇಗೆ ಆಚರಣೆ ಮಾಡಬೇಕು ?ಯಾವ
ರೀತಿ ಆಚರಣೆ ಮಾಡುವುದರಿಂದ ವಿಶೇಷ ಪಲಗಳು ಸಿದ್ಧಿಸುತ್ತವೆ
ಎಂದು ಹೇಳಲಾಗುತ್ತದೆ. ರಾಹು ಈ ರಾಹು ಜಯಂತಿಯ ಆಚರಣೆ,
ವಿಧಿ, ವಿಧಾನಗಳು ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.
‌ ‌ ‌ ‌

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
Saakshatv astrology
ಪ್ರಾಚೀನ ಕಾಲದಲ್ಲಿ ದೇವತೆಗಳು ಮತ್ತು ದೈತ್ಯರು ಸಮುದ್ರ ಮಂಥನ
ನಡೆಸಿ ಅಮೃತ ಮತ್ತು ಅನ್ಯ ರತ್ನಗಳನ್ನು ತೆಗೆಯಲು ನಿಶ್ಚಯಿಸಿದರು.
ದೇವತೆಗಳು ಮತ್ತು ದೈತ್ಯರು ಸಮುದ್ರ ಮಂಥನವನ್ನು ಹೇಗೆ
ಮಾಡುವುದು ಎಂದು ವಿಚಾರ ವಿಮರ್ಶೆಯನ್ನೂ ಮಾಡಿದರು.
ಸಮುದ್ರ ಮಂಥನ ಮಾಡುವ ಸಲುವಾಗಿ ಒಂದು ವಿಶಾಲ
ಕಡಗೋಲು ಮತ್ತು ಹಗ್ಗದ ಅವಶ್ಯಕತೆ ಬೀಳುತ್ತದೆ ಎಂದು ಎಲ್ಲರೂ
ಸೇರಿ ನಿಶ್ಚಯ ಮಾಡಿದರು. ಕೊನೆಯಲ್ಲಿ ಮಂದರಾಚಲ ಎಂಬ
ಹೆಸರಿನ ಪರ್ವತವನ್ನು ಕಡಗೋಲಾಗಿ ಮಾಡುವುದು ಮತ್ತು ವಾಸುಕಿ
ಎಂಬ ಹೆಸರಿನ ಸರ್ಪವನ್ನು ಹಗ್ಗವಾಗಿ ಉಪಯೋಗಿಸಲು
ನಿಶ್ಚಯಿಸಿದರು. ದೇವತೆಗಳ ವಿನಂತಿಯಂತೆ ಭಗವಾನ ಶ್ರೀ ವಿಷ್ಣುವು
ಗರುಡನಿಗೆ ಮಂದರಾಚಲ ಪರ್ವತವನ್ನು ಸಮುದ್ರದಲ್ಲಿ
ತಂದಿಡಬೇಕು ಎಂದು ಆಜ್ಞೆ ಕೊಟ್ಟನು. ಗರುಡನು ಮಂದರಾಚಲ
ಪರ್ವತವನ್ನು ತಂದು ಸ್ಥಾಪಿಸಿದನು ಮತ್ತು ವಾಸುಕಿಯು ಪರ್ವತಕ್ಕೆ
ಹೋಗಿ ಸುತ್ತಿಕೊಂಡನು. ಈ ಪ್ರಕಾರವಾಗಿ ಸಮುದ್ರಮಂಥನದ
ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದರು. ದೇವಗಣವು ಸರ್ಪದ
ಬಾಲದ ಭಾಗವನ್ನು ಮತ್ತು ರಾಕ್ಷಸ ಗಣವು ಸರ್ಪದ ಬಾಯಿಯ
ಭಾಗವನ್ನು ಹಿಡಿದು ಎಳೆಯತೊಡಗಿದರು. ಮಂಥನವನ್ನು
ಮಾಡುತ್ತಾ ಮಾಡುತ್ತಾ ಮಂದರಾಚಲ ಪರ್ವತವು ನೀರಿನಲ್ಲಿ
ಮುಳುಗತೊಡಗಿತು. ಅದನ್ನು ನೋಡಿ ಎಲ್ಲಾ ದೇವತೆಗಳು ಮತ್ತು
ದೈತ್ಯರು ವಿಚಲಿತರಾದರು. ದೇವತೆಗಳು ಭಗವಾನ್ ಶ್ರೀ ವಿಷ್ಣುವಿನ
ಸ್ತುತಿ ಮಾಡತೊಡಗಿದರು. ಆಗ ವಿಷ್ಣುವು ಕೂರ್ಮ ಅವತಾರವನ್ನು
ತಾಳಿದನು ಅಂದರೆ ಆಮೆಯ ರೂಪ ಧರಿಸಿ ತನ್ನ ಬೆನ್ನಿನ ಮೇಲೆ
ಮಂದರಾಚಲ ಪರ್ವತವನ್ನು ಸ್ಥಿರಗೊಳಿಸಿದನು.

*ಸಮುದ್ರ ಮಂಥನದಿಂದ ಹೊರಬಂದ ೧೪ ರತ್ನಗಳು*

ಈಗ ಪುನಃ ಮಂಥನ ಪ್ರಾರಂಭವಾಯಿತು. ಮೊದಲಿಗೆ
ಸಮುದ್ರದಿಂದ ಕಾಲಕೂಟ ಎಂಬ ಹೆಸರಿನ ಮಹಾಭಯಂಕರ
ವಿಷವು ಹೊರಗೆ ಬಂತು. ಆ ವಿಷದಿಂದ ಸಮಸ್ತ ಪೃಥ್ವಿಯು
ಉರಿಯತೊಡಗಿತು. ಎಲ್ಲಾ ದೇವತೆಗಳು, ದೈತ್ಯರು, ಮಾನವರು,
ಜೀವಜಂತುಗಳು ಅದರ ಪ್ರಭಾವದಿಂದ ಭಯಭೀತರಾದರು.
ಭಗವಾನ ವಿಷ್ಣು, ಬ್ರಹ್ಮದೇವರು ಮತ್ತು ಎಲ್ಲಾ ದೇವತೆಗಳು
ಶಿವಶಂಕರನಲ್ಲಿ ‘ಈ ಸಂಕಟದಿಂದ ಪಾರು ಮಾಡಿರಿ’ ಎಂದು
ಮೊರೆಯಿಟ್ಟರು. ಆಗ ಭಗವಾನ್ ಶಿವನು ಅಲ್ಲಿ ಪ್ರತ್ಯಕ್ಷನಾಗಿ ಈ
ಮಹಾಭಯಂಕರ ಕಾಲಕೂಟ ಎಂಬ ಹೆಸರಿನ ವಿಷವನ್ನು
ಸೇವಿಸಿದನು ಮತ್ತು ಪೃಥ್ವಿಯ ರಕ್ಷಣೆ ಮಾಡಿದನು. ವಿಷವನ್ನು
ಕುಡಿದುದರಿಂದ ಶಿವನ ಕಂಠವು ಅಂದರೆ ಕೊರಳು ನೀಲಿ ಬಣ್ಣಕ್ಕೆ
ತಿರುಗಿತ್ತು. ಇದರಿಂದ ಭಗವಾನ ಶಿವನಿಗೆ ನೀಲಕಂಠ ಎಂದು
ಕರೆಯುತ್ತಾರೆ. ಸಮುದ್ರ ಮಂಥನದಿಂದ ದೇವಿ ಲಕ್ಷ್ಮಿ, ಕೌಸ್ತುಭಮಣಿ,
ಪಾರಿಜಾತ ಮರ, ಸುರಾ (ಮದಿರೆ), ಚಂದ್ರ, ಧನ್ವಂತರಿ, ರಂಭೆ,
ಐರಾವತ ಎಂಬ ಹೆಸರಿನ ಬಿಳಿ ಆನೆ, ಅಮೃತ, ವಿಷ, ಉಚ್ಚೈಶ್ರವಸ್ಸು
ಎಂಬ ಕುದುರೆ, ಗೋಮಾತೆ ಕಾಮಧೇನು, ಶಂಖ ಮತ್ತು ಹರಿಧನು
ಎಂಬ ಹದಿನಾಲ್ಕು ರತ್ನಗಳು ಮೇಲೆ ಬಂದವು !

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

*ದೈತ್ಯಗುರು ಶುಕ್ರಾಚಾರ್ಯರ ಸಂಶಯ*

ಅತ್ತ ದೇವತೆಗಳು ದೈತ್ಯರಿಗೆ ಏನಾದರೂ ಮೋಸ ಮಾಡಿ
ಸಮುದ್ರಮಂಥನದಲ್ಲಿ ಸಿಕ್ಕಿರುವ ಎಲ್ಲಾ ರತ್ನಗಳನ್ನು ತಮ್ಮ
ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ದೈತ್ಯ ಗುರು
ಶುಕ್ರಾಚಾರ್ಯರಿಗೆ ಅನಿಸುತ್ತಿತ್ತು. ಅದಕ್ಕೆ ಅವರು ಒಬ್ಬ ದೈತ್ಯನನ್ನು
ಕರೆದು ಸಮುದ್ರ ಮಂಥನ ಮಾಡುವಲ್ಲಿ ಒಂದು ಕಣ್ಣಿಡಲು
ಹೇಳಿದ್ದರು. ವಿಶೇಷವಾಗಿ ಅವರ ದೃಷ್ಟಿ ಅಮೃತದ ಮೇಲೆ ಇತ್ತು.
ದೈತ್ಯ ಗುರುಗಳು ಎಲ್ಲಾ ದೈತ್ಯರಿಗೂ ಅಮೃತಪಾನವನ್ನು ಮಾಡಿಸಿ
ಅವರನ್ನು ಅಮರರನ್ನಾಗಿ ಮಾಡಲು ಇಚ್ಛಿಸುತ್ತಿದ್ದರು. ಹೀಗೆ ಮಾಡಿ
ದೇವತೆಗಳನ್ನು ಸೋಲಿಸಿ ಮೂರೂ ಲೋಕದಲ್ಲಿ ತಮ್ಮ
ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬಹುದು ಎಂಬ ವಿಚಾರ
ಅವರಲ್ಲಿತ್ತು.

*ಮೋಹಿನಿ ಅವತಾರ ತಾಳಿದ ವಿಷ್ಣು*

ಅದರ ನಂತರ ಹದಿನಾಲ್ಕು ರತ್ನಗಳ ಹಂಚುವಿಕೆಯಾಯಿತು. ದೈತ್ಯರು
ಸುರಾ ಅಂದರೆ ಮದಿರೆಯನ್ನು ಸ್ವೀಕಾರ ಮಾಡಿದರು. ಅದರ ನಂತರ
ಮಂಥನದಿಂದ ಅಮೃತವು ಉತ್ಪನ್ನವಾಯಿತು ಅದನ್ನು
ಪಡೆದುಕೊಳ್ಳಲು ದೈತ್ಯರು ಮತ್ತು ದೇವರಲ್ಲಿ ಯುದ್ಧ
ಆರಂಭವಾಯಿತು. ಕೊನೆಗೆ ಭಗವಾನ್ ವಿಷ್ಣು ಒಂದು ಅತಿ ಸುಂದರ
ಸ್ತ್ರೀಯ ರೂಪ ಧರಿಸಿ ಬಂದರು. ದೈತ್ಯರು ಭಗವಾನ್ ವಿಷ್ಣುವನ್ನು ಆ
ಮೋಹಿನೀ ರೂಪದಲ್ಲಿ ಗುರುತಿಸಲಿಲ್ಲ. ಅಲ್ಲದೇ ಅವರು ಆ ಸುಂದರ
ಸ್ತ್ರೀಯ ಕಡೆಗೆ ಆಕರ್ಷಿತರಾದರು. ಮೋಹಿನಿಯಾಗಿ ಬಂದ ಶ್ರೀವಿಷ್ಣು
ದೈತ್ಯರ ಮತ್ತು ದೇವತೆಗಳ ಮಧ್ಯದಲ್ಲಿ ಒಪ್ಪಂದ ಮಾಡಿ ಎಲ್ಲರಿಗೂ
‘ನೀವೆಲ್ಲರೂ ನಿಶ್ಚಿಂತರಾಗಿರಿ, ನಾನು ನಿಮ್ಮೆಲ್ಲರಿಗೂ ಒಬ್ಬೊಬ್ಬರಂತೆ
ಅಮೃತಪಾನವನ್ನು ಮಾಡಿಸುತ್ತೇನೆ’ ಎಂದು ಹೇಳಿದರು. ದೇವತೆ
ಮತ್ತು ದೈತ್ಯರನ್ನು ಬೇರೆ ಬೇರೆ ಪಂಕ್ತಿಯಲ್ಲಿ ಕುಳಿತುಕೊಳ್ಳಲು ತಿಳಿಸಿ
ಮೋಹಿನಿಯು ದೈತ್ಯರಿಗೆ ಸುರಾಪಾನ ಮತ್ತು ದೇವತೆಗಳಿಗೆ ಅಮೃತ
ಪಾನವನ್ನು ಮಾಡಿಸಿದಳು. ಯಾವುದೋ ಪ್ರಕಾರದಲ್ಲಿ ದೈತ್ಯರನ್ನು
ಮೋಸಗೊಳಿಸಲಾಗುತ್ತಿದೆ, ಎಂದು ಸ್ವರಭಾನು ಎಂಬ ಹೆಸರಿನ ಒಬ್ಬ
ದೈತ್ಯನಿಗೆ ಸಂಶಯ ಬಂತು.

*ಸ್ವರಭಾನು ಅಮೃತ ಕುಡಿಯುವುದು*

ಗುರು ಶುಕ್ರಾಚಾರ್ಯರು ದೇವತೆಗಳ ಮೇಲೆ ಒಂದು ಕಣ್ಣಿಡಬೇಕು
ಎಂದು ತಿಳಿಸಿದ್ದ ದೈತ್ಯನೇ ರಾಹು. ಇದರ ಮಧ್ಯೆ ಸ್ವರಭಾನುವು ತನ್ನ
ಸಿದ್ಧಿಯ ಬಲದಿಂದ ದೇವತೆಗಳ ಹಾಗೆಯೇ ಮಾರುವೇಷವನ್ನು ಧರಿಸಿ
ದೇವತೆಗಳ ಪಂಕ್ತಿಯಲ್ಲಿ ಕುಳಿತು ಅಮೃತ ಕುಡಿದನು. ಯಾವಾಗ
ಸ್ವರಭಾನುವು ಅಮೃತವನ್ನು ಕುಡಿಯಲು ದೇವತೆಗಳೆಲ್ಲ ಪಂಕ್ತಿಯ
ಮಧ್ಯೆ ಬಂದನೋ ಆ ಸಮಯದಲ್ಲಿ ಚಂದ್ರ ದೇವರು ಮತ್ತು
ಸೂರ್ಯ ದೇವರು ಅವನು ಕಪಟ ಗುರುತಿಸಿ ಮೋಹಿನಿ
ರೂಪದಲ್ಲಿದ್ದ ಭಗವಾನ್ ವಿಷ್ಣುವಿಗೆ ಸನ್ನೆಯಿಂದ ಸೂಚನೆ ಕೊಟ್ಟರು.
ಮೋಹಿನಿಯು ಸುದರ್ಶನ ಚಕ್ರದಿಂದ ಅವನ ಶಿರಚ್ಛೇದವನ್ನು
ಮಾಡಿದಳು.

ಸ್ವರಭಾನುವಿನ ತಲೆಯು ಆಕಾಶದೆತ್ತರಕ್ಕೆ ಹಾರಿತು ಮತ್ತು ಶರೀರವು
ಪಶ್ಚಿಮ ಸಮುದ್ರದ ಕಡೆಗೆ ಓಡತೊಡಗಿತು. ಇದನ್ನು ನೋಡಿ
ದೇವತೆಗಳು ಮತ್ತು ದೈತ್ಯರು ಆ ಶರೀರವನ್ನು ನಷ್ಟ ಮಾಡಲು
ಪ್ರಯತ್ನ ಮಾಡತೊಡಗಿದರು. ಶಿವನು ಕೂಡ ತನ್ನ ತ್ರಿಶೂಲದಿಂದ
ಅವನ ಹೊಟ್ಟೆಯ ಮೇಲೆ ಆಕ್ರಮಣ ಮಾಡಿ ಅದನ್ನು ನಾಶ
ಮಾಡುವ ಪ್ರಯತ್ನವನ್ನೂ ಮಾಡಿದನು. ಆದರೆ ರಾಹುವಿನ
ಹೊಟ್ಟೆಯಲ್ಲಿ ಅಮೃತವಿದ್ದ ಕಾರಣ ಅವನ ಶರೀರವು
ನಷ್ಟವಾಗುತ್ತಿರಲಿಲ್ಲ. ಮೋಹಿನಿಯು ರಾಹುವಿನ ಶರೀರವನ್ನು ಪ್ರವರ
ಎಂಬ ನದಿಯ ಹತ್ತಿರ ಹಿಡಿದು, ಅದನ್ನು ಹಿಂಡಿ ಆ ಅಮೃತವನ್ನು
ಹೊರ ತೆಗೆದಳು. ಈ ಅಮೃತ ಹೊರಗೆ ಬಂದು ಸಮುದ್ರದಲ್ಲಿ
ವಿಲೀನವಾಯಿತು. ಈ ಪ್ರವರ ನದಿ ಮುಂದೆ ಗೋದಾವರಿ
ನದಿಯನ್ನು ಸೇರಿ ಮುಂದೆ ಸಾಗರದಲ್ಲಿ ವಿಲೀನವಾಗುತ್ತದೆ. ಪ್ರವರ
ಮತ್ತು ಗೋದಾವರಿಯ ಸಂಗಮದಲ್ಲಿ ರಾಹುವಿನ ಶರೀರದ ಮೇಲೆ
ಮೋಹಿನಿಯು ಕುಳಿತುಕೊಂಡಳು. ಇವಳನ್ನು ಮಹಾಲಸಾ ಎಂದು
ಕರೆಯುತ್ತಾರೆ. ‌ ‌ ‌
‌ ‌
ನವಗ್ರಹಗಳಲ್ಲಿ ಎಂಟನೆಯ ಗ್ರಹವಾದ ರಾಹು
ಗ್ರಹದ ಉತ್ಪತ್ತಿಯ ಪುರಾಣೋಕ್ತ ಹಿನ್ನೆಲೆ ಎಲ್ಲರಿಗೂ ತಿಳಿದಿದ್ದೆ
ಆದರೂ ಆ ಗ್ರಹದ ಪ್ರಭಾವ ಮನುಷ್ಯನ ಮೇಲೆ ಹೇಗೆ ಇರುತ್ತದೆ
ಎಂದು ತಿಳಿಯಲು ಜ್ಯೋತಿಷ್ಯ ಶಾಸ್ತ್ರ ಬಹಳ ಸಹಕಾರಿ.
ರಾಹು ಗ್ರಹದ ಅಸ್ತಿತ್ವ ಹಾಗೂ ಅದರ ಬಗ್ಗೆ ಪುರಾತನ ಗ್ರಂಥಗಳಲ್ಲಿನ
ಉಲ್ಲೇಖ ಈ ಎರಡನ್ನೂ ಸಹ ಕೇವಲ ತಾರ್ಕಿಕ ಮನೋಭಾವದಿಂದ
ಅಧ್ಯಯನ ಮಾಡದೇ ಫಲ ಜ್ಯೋತಿಷ್ಯ ಪ್ರಕಾರವಾಗಿ ಪ್ರಸ್ತುತ ಜನರು
ಅನುಭವಿಸುತ್ತಿರುವ ನಾನಾ ಕಷ್ಟಗಳಲ್ಲಿ ರಾಹುವಿನ ಪ್ರಭಾವ
ಗಮನಿಸಿದಾಗ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ.

ಅಷ್ಟಮ ವ್ಯಯೇ ರಾಹುಪಾಪಯುಕ್ತೆ ತಿಥಿ ವಿಕ್ಷೀತೆ |
ಚರಾದಿವ್ರಣ ಪೀಡಾಚ ಸರ್ವತ್ರ್ಯೆವಪುಜಾಯತೆ ||
ರಾಜದ್ವಾರ ಜನದ್ವೇಷ ಇಷ್ಟ ಬಂಧು ವಿನಾಶನಮ್ |
ದಾರಪುತ್ರಾದಿ ಜಾಪೀಡಾ ಜಾಯತೆ ನಾತ್ರ ಸಂಶಯಃ ||
ಎಂದು ಪರಾಶರ ಮಹರ್ಷಿಗಳು ತಮ್ಮ ಹೋರಾ ಗ್ರಂಥದಲ್ಲಿ
ಹೇಳಿದಂತೆ ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ರಾಹು
ಪಾಪಗ್ರಹ ದೃಷ್ಟನಾದರೆ ತನ್ನ ಮಹಾದಶೆ ಅಥವಾ ಅಂತರ ದೆಶೆಯಲ್ಲಿ
ಕಳ್ಳತನ ಆಗಿ ನಷ್ಟ, ವೃಣಾದಿ ಆರೋಗ್ಯ ಹಾನಿ ಹಾಗೂ ಸರಕಾರಿ
ಕಾರ್ಯಾಲಯಗಳಲ್ಲಿ ಅಧಿಕಾರಿಗಳಿಂದ ವೈರತ್ವ, ನೆಂಟರಿಷ್ಟರು
ಹಾಗೂ ಬಂಧುಗಳಿಂದ ಜಗಳ, ಹೆಂಡತಿಯೊಂದಿಗೆ ವಿರಸ
ಮಕ್ಕಳೊಂದಿಗೆ ಮನಸ್ತಾಪ ಇತ್ಯಾದಿ ತೊಂದರೆಗಳನ್ನು ನೀಡುತ್ತಾನೆ.

*ನ್ಯಾಯಾಲಯಕ್ಕೆ ಅಲೆದಾಟ*
ಇಲ್ಲಿ ಅನುಭವೊಕ್ತಿಯಂತೆ ಗಮನಿಸಲೇಬೇಕಾದ ಅಂಶ ಎಂದರೆ
ರಾಹು ಜಾತಕದಲ್ಲಿ ದೋಷಪ್ರದನಾಗಿದ್ದರೆ ರಾಹು ದಶೆಯಲ್ಲಿ
ನ್ಯಾಯಲಯಗಳಿಗೆ ಅಲೆದಾಟವನ್ನೂ ಉಂಟುಮಾಡುತ್ತಾನೆ. ಇದೇ
ರಾಹು ಪ್ರಯಾಣ ಕಾರಕನೂ ಆಗಿರುವುದರಿಂದ ಜಾತಕದಲ್ಲಿ ಹತ್ತನೆ
ಮನೆಯಲ್ಲಿ ಇದ್ದರೆ ಉದ್ಯೋಗ ನಿಮಿತ್ತ ಹತ್ತಾರು ಸ್ಥಳಗಳಿಗೆ
ಪ್ರಯಾಣವನ್ನು ನೀಡುತ್ತಾನೆ. ವಿದೇಶ ಪ್ರಯಾಣ ಯೋಗದಲ್ಲಿ ರಾಹು
ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾನೆ.

*ವಿದೇಶದಲ್ಲಿ ಉದ್ಯೋಗ*
ಆದ್ದರಿಂದಲೇ ವಿದೇಶದಲ್ಲಿ ಉದ್ಯೋಗ ಮಾಡುವ ಉತ್ತಮ ವಿದ್ಯಾ
ಅರ್ಹತೆ ಅನುಭವ ಎರಡೂ ಇದ್ದರೂ ಜಾತಕದಲ್ಲಿ ರಾಹುವಿನ ಬಲದ
ಕೊರತೆಯಿಂದಾಗಿ ಎಷ್ಟೋ ಜನ ವಿದೇಶಕ್ಕೆ ಹೊಗಲಾಗದೇ ಇಲ್ಲೇ ಸಿಕ್ಕ
ಚಿಕ್ಕ ಕೆಲಸ ಹಾಗೂ ಕಡಿಮೆ ಸಂಬಳಕ್ಕೆ ತೃಪ್ತಿ ಪಡ ಬೇಕಾಗಿದೆ.
‌
*ಭೂಮಿಯಲ್ಲಿ ರಾಹು ನಡೆ*
ಇನ್ನು ಭೂ ವ್ಯವಹಾರ ಮಾಡುವ ಜನ ಗಮನಿಸಲೇಬೇಕಾದ ಅಂಶ
ಎಂದರೆ ಭೂಮಿಯಲ್ಲಿ ರಾಹುನಡೆ! ಯಾವ ಜಾಗದಲ್ಲಿ ರಾಹು ನಡೆ
ಇರುತ್ತದೆಯೋ ಅಂಥ ಸ್ಥಳ ವಾಸಕ್ಕೆ ಯೋಗ್ಯ ಇರುವುದಿಲ್ಲ. ಅಷ್ಟೇ
ಅಲ್ಲ ಅದನ್ನು ಖರೀದಿಸಿದವರಿಗೆ ಆ ಜಾಗದಲ್ಲಿ ಮನೆ ಕಟ್ಟಲೂ
ಆಗುವುದಿಲ್ಲ ಅಥವಾ ಅದನ್ನು ಮಾರುವುದಕ್ಕೂ ಆಗುವುದಿಲ್ಲ.

*ಸಂಧಿ ದೋಷದ ಶಾಂತಿ*
ಅದೇ ರಾಹು ನಡೆ ದೋಷ ಹೆಚ್ಚು ಇದ್ದರೆ ಆ ಜಾಗ ವ್ಯಾಜ್ಯದಲ್ಲಿ ಸಿಕ್ಕಿ
ಅದನ್ನು ಪಡೆಯಲು ನ್ಯಾಯಾಲಯದ ಕದ ತಟ್ಟುವಂತೆ ಮಾಡುತ್ತದೆ,
ಇನ್ನು ರಾಹು ದಶೆ ಮನುಷ್ಯನಿಗೆ ಬರಬೇಕಾದರೆ ಕುಜದೆಶೆ ಮುಗಿದ
ನಂತರವೇ ಆದ್ದರಿಂದ ಅಲ್ಲಿ ಕುಜ-ರಾಹು ಸಂಧಿ ದೋಷ
ಉಂಟಾಗುತ್ತದೆ. ಮೊದಲೇ ತಿಳಿದು ಶಾಂತಿ ಹವನ ಕರ್ಮಗಳನ್ನು
ಮಾಡಿಸದೇ ಇದ್ದ ಪಕ್ಷದಲ್ಲಿ ರಾಹು ದಶೆಯ ಪ್ರಾರಂಭದಲ್ಲಿಯೇ ರಸ್ತೆ
ಅಪಘಾತ ಅಥವಾ ಅಗ್ನಿ ಅನಾಹುತ ಆಗುವ ಸಂಭವ ಇರುತ್ತದೆ.

*ವೃಥಾ ಪ್ರಯಾಣ, ಅನಗತ್ಯ ಖರ್ಚು*
ತನ್ನ ದಶಾಕಾಲ ಪ್ರಾರಂಭವಾದ ನಂತರ ಹದಿನೆಂಟು ವರ್ಷ ಇರುವ
ರಾಹು ತನ್ನ ದಶಾಕಾಲದ ಆರಂಭದಲ್ಲಿ ನೋಡಲು ತೆಳ್ಳಗೆ ಸಣ್ಣಗೆ
ಇರುವವರನ್ನು ಕೇವಲ ಎರಡು ಮೂರು ವರುಷಗಳಲ್ಲಿ ದಪ್ಪಗಾಗಿಸಿ
ಬಿಡುತ್ತಾನೆ. ನಂತರ ತನ್ನ ದಶಾ ಕಾಲದಲ್ಲಿ ಅತ್ಯಂತ ಹೆಚ್ಚು ಹಣ
ಖರ್ಚನ್ನು ಮಾಡಿಸುವ ರಾಹು ವೃಥಾ ಪ್ರಯಾಣವನ್ನು ಹೆಚ್ಚುಸುತ್ತಾನೆ.
ಇದರಿಂದಾಗಿ ಒಂದೇ ಓಡಾಟದಲ್ಲಿ ಸ್ವಲ್ಪವೇ ಖರ್ಚಿನಲ್ಲಿ ಮುಗಿಯ
ಬೇಕಾದ ಕೆಲಸಗಳು ರಾಹು ದಶೆಯಲ್ಲಿ ಇರುವವರು ಮಾಡಲು ಕೈ
ಹಾಕಿದರೆ ಹತ್ತಾರು ಓಡಾಟಗಳು ಸಾವಿರಾರು ಅಥವಾ ಲಕ್ಷಾಂತರ
ರೂಪಾಯಿಗಳು ಖರ್ಚಾದ ನಂತರವು ಕೆಲಸ ಆಗದೇ
ಚಿಂತಾಕ್ರಾಂತರಾಗಿರುತ್ತಾರೆ.

*ರಾಹು ದೋಷಕ್ಕೆ ಪರಿಹಾರಗಳು*
ಇಂಥ ಯಾವುದೇ ರಾಹು ಗ್ರಹದ ದೋಷದಿಂದಾಗಿ ಕಷ್ಟ ಪಡುವವರು
ಪರಿಹಾರಕ್ಕೆ ರಾಹು ಮಂತ್ರ ಜಪ ತರ್ಪಣ ಹಾಗೂ ಶಾಂತಿ ಹವನ
ಮಾಡಿಸಬಹುದು. ಜಾತಕದಲ್ಲಿ ರಾಹು ಉತ್ತಮ ಸ್ಥಿತಿಯಲ್ಲಿ ಇದ್ದು,
ರಾಹು ದಶೆ ನಡೆಯುತ್ತಾ ಇದ್ದರೆ ಉತ್ತಮ ಗುಣಮಟ್ಟದ
ಗೋಮೇಧಕ ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ, ಕ್ರಮವಾಗಿ
ಅದನ್ನು ಬುಧವಾರ ಜಲ, ಗುರುವಾರ ಹಾಲು ಹಾಗೂ ಶುಕ್ರವಾರ
ಉದ್ದಿನ ಬೇಳೆಯಲ್ಲಿ ಇರಿಸಿ ಸಂಸ್ಕಾರ ಅದ ನಂತರ ಶನಿವಾರದಂದು
ಸೂರ್ಯೋದಯಕ್ಕೆ ಸರಿಯಾಗಿ ಅದನ್ನು ಪೂಜಿಸಿ ಧರಿಸುವುದು
ಅಥವಾ ಸಂಪುಟಿ ದುರ್ಗಾ ಸಪ್ತಶತೀ ಪಾರಾಯಣ, ಉದ್ದಿನ ಬೇಳೆ
ದಾನ, ರಾಹು ಕಾಲದಲ್ಲಿ ದುರ್ಗಾದೇವಿಗೆ ನಿಂಬೆ ದೀಪ ಹಚ್ಚುವುದು
ಮಾಡಬಹುದು, ಇನ್ನು ಮಠಗಳಲ್ಲಿ ವೇದ ವ್ಯಾಸಂಗ ಮಾಡುತ್ತಿರುವ
ಬ್ರಹ್ಮಚಾರಿಗಳ ಆರಾಧನೆ, ಅರಿಶಿನದಿಂದ ನಾಗನಿಗೆ ಅರ್ಚನೆ,
ನಾಗಪ್ರತಿಷ್ಠೆ ಇತ್ಯಾದಿಗಳಿಂದಲ್ಲೂ ನಾವು ತಕ್ಕ ಮಟ್ಟಿಗೆ ರಾಹು
ದೋಷದಿಂದ ಮುಕ್ತವಾಗಬಹುದು. ಆದರೆ ಒದಗಿ ಬಂದಿರುವ
ಸಮಸ್ಯೆಗೆ ಸರಿಯಾದ ಪರಿಹಾರ ತಿಳಿಯಲು ಜಾತಕದ ಪರಿಶೀಲನೆ
ಅಥವಾ ಸ್ಥಳದಲ್ಲಿ ರಾಹು ನಡೆ ಇದ್ದಾಗ ಸ್ಥಳ ಪರೀಕ್ಷೆ ಅತ್ಯಗತ್ಯ.
‌ ‌
ಇಂದು ಭಾದ್ರಪದ ಪೌರ್ಣಮಿ,
ಇಂದು ರಾಹು ಜಯಂತಿಯನ್ನು, ಈ ದಿನ ರಾಹು ಜಯಂತಿಯನ್ನು
ಆಚರಣೆ ಮಾಡಲಾಗುತ್ತದೆ. ಈ ರಾಹು ಜಯಂತಿಯನ್ನು ಪ್ರತಿಯೊಬ್ಬ
ಮನುಷ್ಯನು ಕೂಡ ಆಚರಣೆ ಮಾಡಲೇಬೇಕು. ಒಬ್ಬ ಮನುಷ್ಯ
ಚೆನ್ನಾಗಿರಬೇಕು ಎಂದರೆ ಅದಕ್ಕೆ ಗ್ರಹಚಾರ ಎಂದು ಹೇಳುತ್ತೇವೆ.
ಅಂದರೆ ಜೋತಿಷ್ಯದಲ್ಲಿ ಗ್ರಹಗಳ ಬಲ ಇರಬೇಕು ಎಂದು
ಹೇಳುತ್ತಾರೆ. ಗ್ರಹಗಳಲ್ಲಿ ಅಧಿಕವಾಗಿ ತೊಂದರೆಗಳನ್ನು
ತಂದೊಡ್ಡುವುದು ರಾಹು ಮತ್ತು ಕೇತುಗಳು. ಯಾರಿಗೆ ಜಾತಕದಲ್ಲಿ
ಲಗ್ನದಲ್ಲಿಯೇ ರಾಹು ಇರುತ್ತಾನೋ, ಸಪ್ತಮದಲ್ಲಿ ರಾಹು ಕೇತುಗಳು
ಇದ್ದರೆ ಅಥವಾ ನಷ್ಟದಲ್ಲಿದ್ದರೆ, ದಶಮ ಸ್ಥಾನದಲ್ಲಿದ್ದರೆ, ಸರ್ಪ ಶಾಪ,  ನಾಗದೋಷ ಎಂದು ಜ್ಯೋತಿಷ್ಯದವರು ಹೇಳಿದ್ದರೆ.
ಇವೆಲ್ಲವನ್ನು ನೋಡಿಕೊಂಡು ವ್ಯವಸ್ಥಿತವಾಗಿ ಮಾಷ ಧ್ಯಾನ ಅಂದರೆ ಉದ್ದಿನಬೇಳೆ ಅಥವಾ ಉದ್ದಿನ ಕಾಳನ್ನು ಜೊತೆಗೆ ಕಪ್ಪು ಬಟ್ಟೆ, ಸ್ವಲ್ಪ ಸೀಸವನ್ನು, ಲೋಹವನ್ನು ವ್ಯವಸ್ಥಿತವಾಗಿ ನಿಮ್ಮ ಮನೆಯಲ್ಲಿ ದೇವರ ಮುಂದೆ ಇಟ್ಟು ವ್ಯವಸ್ಥಿತವಾಗಿ ಸಂಕಲ್ಪವನ್ನು ಮಾಡಿ. ಜಾತಕ ದೋಷ ನಿವಾರಣಾ ಪ್ರಯುಕ್ತ ರಾಹು ಜಯಂತಿಯ ಪ್ರಯುಕ್ತ ಲೋಹದ ದಾನ, ಧೂಮ್ರ ವಸ್ತ್ರದಾನ ಮತ್ತು ಮಾಷ ದಾನವನ್ನು ಮಾಡುತ್ತೇನೆ ಎಂದು ಕೃಷ್ಣಾರ್ಪಣವನ್ನು ಮಾಡಿ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
Saakshatv astrology kalasha
ನಿಮ್ಮ ಹತ್ತಿರದಲ್ಲಿ ಯಾರಾದರೂ ಉಪನಯನವಾಗಿರುವ
ಬ್ರಹ್ಮಚಾರಿ ಬ್ರಾಹ್ಮಣರು ಯಾರು ಇರುತ್ತಾರೋ ಅವರಿಗೆ ಕೊಟ್ಟು
ನಮಸ್ಕಾರವನ್ನು ಮಾಡಿ ಜೊತೆಗೆ ಬ್ರಹ್ಮಚಾರಿ ಬ್ರಾಹ್ಮಣರಿಗೆ ಈ ದಿನ
ಪಾದಪೂಜೆಯನ್ನು ಮಾಡಿ. ವಸ್ತ್ರವನ್ನು ಕೊಟ್ಟು ಅಥವಾ
ಅನ್ನದಾನವನ್ನು ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ
ಜಾತಕದಲ್ಲಿ ಇರುವ ರಾಹು ದೋಷ ಕಡಿಮೆಯಾಗುತ್ತದೆ .
ಯಾವಾಗ ರಾಹು ದೋಷ ಕಡಿಮೆಯಾಗುತ್ತದೆ. ಆಗ ಬಹಳಷ್ಟು ಜನ ಎಲ್ಲರೂ ಕೂಡ ನೋಡುತ್ತಿದ್ದೀರ, ಪ್ರತಿಯೊಬ್ಬರ ಮನೆಯಲ್ಲೂ ಎರಡು ಮೂರು ವಾಹನಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಈ ಕಾಲದಲ್ಲಿ, ಯಾವ ಸಮಯದಲ್ಲಿ ಏನು ಆಗುತ್ತದೆ ? ಎಂದು ಗೊತ್ತಿರುವುದಿಲ್ಲ. ಅಪಘಾತಗಳು ಸಂಭವಿಸಬಹುದು, ಅದಕ್ಕೆ ಜಾತಕದಲ್ಲಿ ಚಂದ್ರ ಮತ್ತು ರಾಹು ಒಟ್ಟಿಗೆ ಇರಬಾರದು ಎಂದು ಹೇಳಲಾಗುತ್ತದೆ .ಹೀಗಿದ್ದರೆ ಬುದ್ಧಿಭ್ರಮಣೆ ಆಗುತ್ತದೆ. ವ್ಯವಸ್ಥಿತವಾಗಿ ಈ ರೀತಿ ಪೂಜೆ ಮಾಡಿ, ಸಂಕಲ್ಪ ಮಾಡಿ, ದಾನಗಳನ್ನು ಮಾಡಿ, ರಾಹು ಜಯಂತಿಯನ್ನು ವಿಧಿ ವಿಧಾನವಾಗಿ ಆಚರಿಸಿ. ಎಲ್ಲರಿಗೂ ಕೂಡ ರಾಹು ದೋಷ ನಿವಾರಣೆಯಾಗಲಿ ಸುಖ ಮತ್ತು ನೆಮ್ಮದಿಯ ಜೀವನ ಪ್ರಾಪ್ತಿಯಾಗಲಿ.

ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram