ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಯಕ್ಷಗಾನದ ಸವ್ಯಸಾಚಿ ತಾಳಮದ್ದಲೆಯ ಅರ್ಥದಾರಿ, ಗತ್ತು ಗಾಂಭೀರ್ಯದ ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು

Mahesh M Dhandu by Mahesh M Dhandu
November 14, 2021
in Newsbeat, Saaksha Special, ಎಸ್ ಸ್ಪೆಷಲ್
vasudeva samaga yakshagana saakshatv
Share on FacebookShare on TwitterShare on WhatsappShare on Telegram

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026

ಯಕ್ಷಗಾನದ ಸವ್ಯಸಾಚಿ ತಾಳಮದ್ದಲೆಯ ಅರ್ಥದಾರಿ, ಗತ್ತು ಗಾಂಭೀರ್ಯದ
ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು

vasudeva samaga yakshagana saakshatvಮಲ್ಪೆ ವಾಸುದೇವ ಸಾಮಗರೆಂಬ ಯಕ್ಷಲೋಕದ ತಾಳಮದ್ದಲೆಯ ಮಹಾನ್‌ ಪ್ರತಿಭೆ ಕಣ್ಮರೆಯಾಗಿ ವರ್ಷ ಕಳೆದಿದೆ. ಸಾಮಗರು ಇಲ್ಲವೆಂದಾಗ ಕಣ್ಮುಂದೆ ಬಂದಿದ್ದು ಎರಡೇ ದೃಶ್ಯಗಳು. ಒಂದು ಅವರ ಮಗುವಿನಂತ ನಗು, ಇನ್ನೊಂದು ಉತ್ತರಕುಮಾರನ ಅರ್ಥದಾರಕೆಯಲ್ಲಿ ಅವರು ಕೂತು ವ್ಯಾಖ್ಯಾನಿಸಿದ್ಧ ಬಂಗಿ. ನಿಮಗೆ ಎಲ್ಲಾದರೂ ಯೂ ಟ್ಯೂಬ್ ನಲ್ಲಿ "ಕಪಟ ನಾಟಕ ರಂಗ" ಯಕ್ಷ ಭಾಗವತಿಕೆಯ ಜುಗಲ್ ಬಂದಿ ಸಿಕ್ಕರೆ ಮರೆಯದೇ ನೋಡಿ. ಹಳೆಯ ತುಣಕದು; ಧರ್ಮಸ್ಥಳ ಮೇಳದ ಧ್ರುವತಾರೆ ಪುತ್ತಿಗೆ ರಘುರಾಮ ಹೊಳ್ಳರು ಮತ್ತು ಸವ್ಯಸಾಚಿ ವಾಸುದೇವ ಸಾಮಗರ ಮನ ತಣಿಯುವ
ಜುಗಲ್ ಬಂದಿ. ಯಾರಿಗೆ ಯಾರು ಸಾಟಿ? ಜೊತೆಗೆ ಸಾಧ್ಯವಾದರೇ, ಉತ್ತರ ಕುಮಾರ ಮತ್ತು ಅರ್ಜುನನ ಅರ್ಥಧಾರಿಕೆಯ ಪ್ರಸಂಗ ನೋಡಿ. ವಾಸುದೇವ ಸಾಮಗರ ಅಸಲು ಸಾಮರ್ಥ್ಯವೇನು ಅನ್ನುವ ಸಣ್ಣ ಝಲಕ್ ಅದರಲ್ಲಿದೆ. ಉತ್ತರ ಭೂಪನಾಗಿ ವಾಸುದೇವ ಸಾಮಗರ ಅಬ್ಬರ, ಹುಸಿ ಪರಾಕ್ರಮದ ಮಾತುಗಳು, ನಗು ಉಕ್ಕಿಸುವ ಪಂಚಿಂಗ್ ಡೈಲಾಗ್ ಗಳು ಮರೆಯಲು ಸಾಧ್ಯವೇ?

ಎಷ್ಟಾದರೂ ಅದು ಯಕ್ಷಗಾನವನ್ನು ರಕ್ತದಲ್ಲೇ ಬಸಿದುಕೊಂಡು ಬಂದ ವಂಶ. ಮಲ್ಪೆ ಹರಿದಾಸ ಸಾಮಗರನ್ನು ದೊಡ್ಡ ಸಾಮಗರೆಂದೇ ಈಗಲೂ ಯಕ್ಷರಂಗ ಗುರುತಿಸುತ್ತದೆ. ಚಿಕ್ಕ ಸಾಮಗರು ವಾಸುದೇವರು; ಆ ವಂಶದ ಮೂರನೇ ಜನರೇಶನ್ ಅಪ್ಪಟ ಪ್ರತಿಭಾವಂತ ವಾಸುದೇವ ಸಾಮಗರ ಪುತ್ರ ಪ್ರದೀಪ್ ಸಾಮಗ. ವಾಸುದೇವ ಸಾಮಗರಿಗೆ ಒಂದು ಕಾಲದಲ್ಲಿ ಅತ್ಯಂತ ಪ್ರಖ್ಯಾತಿ ತಂದು ಕೊಟ್ಟ ಪಾತ್ರ ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪನ ಪಾತ್ರ. ಪ್ರಾಯಶಃ ಹಾಗಾಗೇ ತಮ್ಮ ಪುತ್ರನಿಗೂ ಪ್ರದೀಪ ಅಂತ ಹೆಸರಿಟ್ಟರೇನೋ!

ವಾಸುದೇವ ಸಾಮಗರು ಇವತ್ತು ನಿನ್ನೆಯವರಲ್ಲ, ಯಕ್ಷಲೋಕದ ಶಂಕರ್ ನಾಗ್ ಕಾಳಿಂಗ ನಾವುಡರ ಕಾಲದವರು. ಕಾಳಿಂಗ ನಾವುಡರು ಬದುಕಿದ್ದಾಗಲೇ ಸಾಲಿಗ್ರಾಮ ಮೇಳದಲ್ಲಿದ್ದವರು. ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್, ಪೆರ್ಡೂರು ಮೇಳದಲ್ಲಿ ಯಕ್ಷ ಸೇವೆ ಸಲ್ಲಿಸಿದವರು. ಚೈತ್ರಪಲ್ಲವಿ, ನಾಗಶ್ರೀ, ಭಾನುತೇಜಸ್ವಿ ಪ್ರಸಂಗಗಳು ಪೂರ್ಣವಾಗಿದ್ದೇ ಸಾಮಗರ ಉಪಸ್ಥಿತಿಯಿಂದಾಗಿ. ರುಕ್ಮಾಂಗದ ಮೋಹಿನಿ, ಅಂಬೆ ಪರಶುರಾಮ, ಕಂಸ ಕೃಷ್ಣ, ಭೀಷ್ಮ, ದಶರಥ ಕೈಕೆ, ಶನೈಶ್ವರ ಮಹಾತ್ಮೆಯ  ವಿಕ್ರಮಾದಿತ್ಯ, ಶಕುನಿ ಹೀಗೆ ಸಾಮಗರು ನಿರ್ವಹಿಸಿದ ಪಾತ್ರಗಳು ಸದಾ ಯಕ್ಷ ಪ್ರೇಮಿಗಳ ಮನಸಿನಲ್ಲಿ ಚಿರಸ್ಥಾಯಿ. ಮಲ್ಪೆ ಹರಿದಾಸ ಸಾಮಗರ ಸ್ಮರಣೆಯ ಯಕ್ಷಮಾಲಿಕೆಯಲ್ಲಿ ಮೈರಾವಣ ಕಾಳಗ, ಶಾಪಗ್ರಸ್ತ ಕರ್ಣ, ಇತ್ಯಾದಿ ಪ್ರಸಂಗಗಳ ಮೂಲಕ ವಾಸುದೇವ ಸಾಮಗರು ಸದಾ ಬದುಕಿರುತ್ತಾರೆ. ತೆಂಕು
ಬಡಗು ತಿಟ್ಟಿನ ನಡುವೆ ಸೇತುವೆ ಬೆಸೆದ, ಯಕ್ಷ ಸಂಘಟಕ, ಭಾಗವತ, ಅರ್ಥದಾರಿ, ಪಾತ್ರದಾರಿ, ತಾಳಮದ್ದಲೆಯ ವ್ಯಾಖ್ಯಾನಕಾರ, ತಮ್ಮದೇ ಸಂಯಮಂ ಸಂಸ್ಥೆಯನ್ನು ಕಟ್ಟಿಕೊಂಡು ಯಕ್ಷಗಾನ ಕಲೆಯ ಅಸ್ಥಿತ್ವವನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದವರು ಮಲ್ಪೆ ವಾಸುದೇವ ಸಾಮಗರು.

ಸಾಮಗರು ಖಂಡಿತವಾದಿ; ನೇರಾ ನೇರ ಬಿಡುಬೀಸು ಮಾತಿಗೆ ಹೆಸರುವಾಸಿಯಾದವರು. ಪೆರ್ಡೂರು ಸಾಲಿಗ್ರಾಮ ಮೇಳಗಳಲ್ಲಿ ವಿಶಿಷ್ಟ ಹೆಸರು ಮಾಡಿದ್ದ ಸಾಮಗರು ರಂಗಸ್ಥಳಕ್ಕೆ ಬಂದರೆ ಮಾತಿನ ಮಂಟಪದಲ್ಲಿ ಪಾತ್ರಕಟ್ಟುತ್ತಿದ್ದ ಅಸೀಮ ಪ್ರತಿಭೆಯ ಯಕ್ಷಾವಧೂತ. ಕಾಳಿಂಗ ನಾವಡರು ನಿರ್ವಹಿಸಬೇಕಿದ್ದ ಸಾಲ್ವ ಶೃಂಗಾರ ಕ್ಯಾಸೆಟ್ ಅನ್ನು ರಮೇಶ್‌ ಬೇಗಾರ್‌ ಮರು ಸೃಷ್ಟಿಸಿದಾಗ ಅದರಲ್ಲಿ ಸಾಲ್ವನ ದೂತನ ಪಾತ್ರ ಮಾಡಿದ್ದವರು ವಾಸುದೇವ ಸಾಮಗರು. ಹಾಗೆಯೇ ವಿಗಡ ವಿಚಿತ್ರರಾಯ ಎಂಬ ಹಾಸ್ಯ ಕ್ಯಾಸೆಟ್ ನಲ್ಲಿ ಹಾಸ್ಯ ರಾಜನ ಪಾತ್ರವನ್ನು ಸಹ ಮಾಡಿದ್ದರಂತೆ. ಒಂದು ಕಾಲದಲ್ಲಿ ರಾಮದಾಸ ಸಾಮಗರ ವಿಶ್ವಾಮಿತ್ರ ವಾಸುದೇವ ಸಾಮಗರ ಮೇನಕೆ ಯಕ್ಷಲೋಕದ ಖ್ಯಾತ ಜೋಡಿಯಾಗಿತ್ತಂತೆ. ಅದನ್ನೆ ಈ ತಲೆಮಾರಿಗೆ ಅನ್ವಯಿಸಿ ವಾಸುದೇವ ಸಾಮಗರ ಮತ್ತು ಅವರ ಪುತ್ರ ಪ್ರದೀಪ ಸಾಮಗರು ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ್ದನ್ನು ರಮೇಶ್‌ ಬೇಗಾರ್‌ ಈಗಲೂ ನೆನಪಿಸಿಕೊಳ್ಳುತ್ತಾರೆ. ಯಕ್ಷ ಭಾಗವತಿಗೆಯ ಧ್ರುವತಾರೆ ಕಾಳಿಂಗ ನಾವಡರೊಂದಿಗೆ ವಾಸುದೇವ ಸಾಮಗರದ್ದು ಅತ್ಯಂತ ಅಪೂರ್ವ ಸ್ನೇಹ. ಸುಪ್ರಸಿದ್ಧ ಪ್ರಸಂಗ ನಾಗಶ್ರೀಯ ಶುಭ್ರಾಂಗನ ಪಾತ್ರಕ್ಕೆ
ಜೀವತುಂಬಿ ಅಭಿನಯಿಸಿದ್ದವರು ಸಾಮಗರು.

ಕೃಪೆ – ಹಿಂದವೀ ಸ್ವರಾಜ್ಯ

-ರೂಪಾ ಮಾಲತೇಶ್‌,

Tags: dharmastalakadrikalinga navadaKaravalikarnatakamangalurusaligramaUdupiVasudeva SamagaYakshagana
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram