ಕೃಷಿ ಕಾಯ್ದೆಗಳು ವಾಪಸ್ : ರೈತರರ ವಾದ ಏನಿತ್ತು..? ಯಾಕಿಷ್ಟು ವಿರೋಧ..?
ನವದೆಹಲಿ : 355 ದಿನಗಳ ರೈತರ ಹೋರಾಟಕ್ಕೆ ಫಲ ಸಿಕ್ಕಿದೆ. ರೈತರ ನಿರಂತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ವಿವಾಧಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದೆ. ಇಂದು ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಂಬಂಧಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ಹಾಗಾದ್ರೆ ಕೇಂದ್ರದ ಕೃಷಿ ಮಸೂದೆಗಳಿಗೆ ವಿರೋಧ ಯಾಕೆ..?
“ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಪ್ರಚಾರ ಹಾಗೂ ಸೌಲಭ್ಯ ಮಸೂದೆ 2020” : ಈ ಮಸೂದೆ ಪ್ರಕಾರ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು.
ಇದರಲ್ಲಿ ತಪ್ಪೇನಿದೆ.. ಇದು ಈಗಾಗಲೇ ನಡೀತಿದೆ ಅಲ್ವಾ.. ಆದರೂ ವಿರೋಧ ಯಾಕೆ ಅಂತಾ ಯೋಚ್ನೆ ಮಾಡಿದ್ರೆ..
ಈ ಮಸೂದೆ ಎಪಿಎಂಸಿ ವ್ಯವಸ್ಥೆಯನ್ನು ಹಾಳು ಮಾಡುತ್ತೆ. ಇದರಲ್ಲಿ ಎಪಿಎಂಸಿಯಲ್ಲಿ ಕೆಲಸ ಮಾಡೋರು ನಿರುದ್ಯೋಗಿಗಳಾಗುತ್ತಾರೆ ಅನ್ನೋದು ಮಸೂದೆಯನ್ನ ವಿರೋಧಿಸುತ್ತಿರುವವರ ವಾದ.
“ರೈತರ ಸಬಲೀಕರಣ ಮತ್ತು ಸಂರಕ್ಷಣೆ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಮಸೂದೆ 2020” : ಈ ಮಸೂದೆ ರೈತರಿಗೆ ಸಿಗುತ್ತಿರುವ ಬೆಂಬಲ ಬೆಲೆಯನ್ನು ಕಸಿದುಕೊಳ್ಳುತ್ತೆ ಎಂಬೋದು ರೈತರ ವಾದ.
ಅಗತ್ಯ ಸರಕುಗಳು ತಿದ್ದುಪಡಿ ಮಸೂದೆ 2020 : ಇಲ್ಲಿ ಈರುಳ್ಳಿ, ಆಲುಗಡ್ಡೆ,ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳನ್ನು ಅಗತ್ಯ ಸರಕುಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಇದರಿಂದ ವ್ಯಾಪಾರಿಗಳು ಕಾಳಸಂತೆಯನ್ನು ಸೃಷ್ಠಿ ಮಾಡ್ತಾರೆ. ಕೃತಕ ಅಭಾವವನ್ನು ನಿರ್ಮಿಸಿ ಬೆಲೆ ಏರಿಕೆ ಮಾಡ್ತಾರೆ. ಮತ್ತು ರೈತರ ಬಳಿ ಖರೀದಿ ಮಾಡುವಾಗ ಕಡಿಮೆ ಬೆಲೆಗೆ ಮಾರುವಂತೆ ಒತ್ತಾಯ ಮಾಡುತ್ತಾರೆ ಎಂಬೋದು ರೈತರ ವಾದ.









