ರಾಹು ಕೇತು ವಕ್ಕರಿಸಿದರೆ ಜೀವನವೆಲ್ಲಾ ನರಕವೇ, ಈ ವಕ್ರದೃಷ್ಟಿಯಿಂದ ಬಚಾವಾಗಲು ಇಲ್ಲಿದೆ ಉಪಾಯ
ಕೇತು ಜಯಂತಿ Rahu saaksha tv
ಮಾರ್ಗಶಿರ ಕೃಷ್ಣ ಅಮಾವಾಸ್ಯೆ, ಮೂಲ ನಕ್ಷತ್ರ ಕೇತು
ಜಯಂತಿ. ಅಂದರೆ,ಇಂದು ಜನವರಿ 2, ಆದಿತ್ಯವಾರ ಕೇತು
ಜಯಂತಿ. ಕೇತುಗಳು ನೂರು ಜನ. ಬ್ರಹ್ಮನ ಮಕ್ಕಳು.
ಎರಡು ಕೈ, ವಿಚಿತ್ರ ಆಯುಧಧಾರಿಗಳು, ಗೃಧ್ರಾಸನಸ್ಥಿತರು,
ಉಗ್ರವಾದ ಕೆಂಪು ಕಣ್ಣುಗಳು, ವಿಷಕಾರುವ ಮಾತು,
ದೀರ್ಘಶರೀರ, ಶಸ್ತ್ರಧಾರಿ ಕೈಗಳು, ಆಚಾರಹೀನ,
ಕಂದುಬಣ್ಣ, ಧೂಮಸೇವನೆ, ಕಜ್ಜಿ, ಬೇನೆಗಳುಳ್ಳ ಶರೀರ,
ಕ್ರೂರ ಸ್ವಭಾವ, ಇವು ಕೇತುವಿನ ಬಗ್ಗೆ ಶಾಸ್ತ್ರ ಕೊಡುವ
ಮಾಹಿತಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಯಾರು ಈ ರಾಹು! ಕೇತು!
ಪುರಾಣಗಳ ಪ್ರಕಾರ, ಕೇತು ಮತ್ತು ರಾಹು ಅಸುರ
ಸ್ವರಭಾನುವಿನ ಮುಂಡ ಮತ್ತು ರುಂಡವಾಗಿದ್ದು, ಸಮುದ್ರ
ಮಂಥನದಿಂದ ಹೊರಹೊಮ್ಮಿದ ಅಮೃತದ ವಿತರಣೆಯ
ಸಮಯದಲ್ಲಿ ಭಗವಾನ್ ವಿಷ್ಣುವಿನಿಂದ
ಶಿರಚ್ಛೇದನಗೊಂಡವರು. ಕೇತುವನ್ನು ಸಾಮಾನ್ಯವಾಗಿ ಕತ್ತಿ,
ಗುರಾಣಿ, ಗದೆ ಮತ್ತು ಧ್ವಜವನ್ನು ಹಿಡಿದಿರುವ ನಾಲ್ಕು
ಕೈಗಳೊಂದಿಗೆ ಸರ್ಪದ ಬಾಲವನ್ನು ಹೊಂದಿರುವ ಮಾನವ
ದೇಹದಂತೆ ಅಥವಾ ಮುಂಡವನ್ನು ಚಿತ್ರಿಸಲಾಗಿದೆ.
ಆದಾಗ್ಯೂ, ಕೆಲವು ಚಿತ್ರಗಳಲ್ಲಿ, ಎರಡು ಕೈಗಳನ್ನು
ಹೊಂದಿರುವ ಆಯುಧಗಳನ್ನು ಹಿಡಿದಿರುವ ಮತ್ತು
ರಣಹದ್ದು ಮೇಲೆ ಸವಾರಿ ಮಾಡುತ್ತಿರುವ ಸಂಪೂರ್ಣ
ಮನುಷ್ಯನಂತೆ ಚಿತ್ರಿಸಲಾಗಿದೆ.
ವಿಷ್ಣುಚಕ್ರದಿಂದ ಕತ್ತರಿಸಲ್ಪಟ್ಟ ರಾಕ್ಷಸನ
ರುಂಡಮುಂಡಗಳೇ ರಾಹುಕೇತುಗಳು. ಈ
ರಾಹುಕೇತುಗಳೇ ಸೂರ್ಯ ಚಂದ್ರರನ್ನು ಹಿಡಿದು
ಕಬಳಿಸುತ್ತಾ ದ್ವೇಷಸಾಧನೆ ಮಾಡುತ್ತಾರೆ ಎಂಬುದು
ಸಾಮಾನ್ಯ ಭಾವನೆ. ರಾಕ್ಷಸರಾದ ಈ ರಾಹು ಕೇತುಗಳು
ಲೋಕಕ್ಕೆ ಉಪಕಾರ ಮಾಡುವ ದೇವತೆಗಳಲ್ಲ.
ಹಿಂಸಾಪ್ರಿಯ ರಾಕ್ಷಸರು.
ಸ್ವಭಾವತಃ ಕ್ರೂರಿಗಳು. ಬ್ರಹ್ಮದ್ವೇಷಿಗಳು. ಇವರನ್ನು
ಪೂಜಿಸಬಹುದೇ? ಒಂದು ವೇಳೆ ಪೂಜೆಯಿಂದ ಅಭೀಷ್ಟ
ದೊರೆತರೂ ಇದು ತಾಮಸ ಪೂಜೆಯಾಗಿಲ್ಲವೇ? ತತ್ಕಾಲಕ್ಕೆ
ಸತ್ಪಲ ದೊರೆತರೂ ಕೊನೆಯಲ್ಲಿ ಅನರ್ಥವಲ್ಲವೇ?
ಲೋಕವನ್ನು ಕಾಪಾಡುವ ಸೂರ್ಯಚಂದ್ರರನ್ನು
ಶಾಶ್ವತವಾಗಿ ದ್ವೇಷಿಸುವ ಇವರು ಆಗಾಗ ಗ್ರಹಣ ಮಾಡಿ
ಲೋಕಕ್ಕೆ ಅನಿಷ್ಟ ತರುವರು. ಇಂತಹ ರಾಹು ಕೇತುಗಳನ್ನು
ಚಂದ್ರ ಸೂರ್ಯರ ಜೊತೆಗೆ ಪ್ರತಿಷ್ಠಾಪಿಸಿ ಪೂಜಿಸುವುದು
ಎಷ್ಟೊಂದು ಅಬದ್ಧ!! ಬರಿಯ ರುಂಡವನ್ನೇ ರಾಹುವೆಂದು
ಕರೆಯುವುದಾದರೆ “ಖಡ್ಗಚರ್ಮಧರಂ ಭೀಮಂ..”
ಎಂಬುದಾಗಿ “ಕರಾಲವದನಃ ಖಡ್ಗಚರ್ಮಶೂಲೀ
ವರಪ್ರದಃ” ಎಂದೂ ಖಡ್ಗ ಚರ್ಮ, ಶೂಲ,
ವರಮುದ್ರೆಗಳನ್ನು ಧರಿಸಿದ ಚತುರ್ಭುಜನನ್ನಾಗಿ
ಸ್ತೋತ್ರಮಾಡುವುದು ಹೇಗೆ ಸರಿಯಾದೀತು? ಕತ್ತಿನಿಂದ
ತರಿಯಲ್ಪಟ್ಟ ತಲೆಗೆ ಕೈಯಿದೆಯೇ? ಒಂದು ವೇಳೆ
ಎದೆಯಿಂದಲೇ ಕತ್ತರಿಸಿರುವುದರಿಂದ ಕೈಯಿರುವುದು
ಸರಿಯೆಂದು ವಾದಿಸುವುದಾದರೆ ಕೇತುವಿಗೆ
ಕೈಯಿರಬಾರದು. “ಧೂಮ್ರಾಃ ದ್ವಿಬಾಹವಃ ಸರ್ವೇ” ಎಂದು
ಕೇತುಗಳನ್ನು ದ್ವಿಬಾಹುಗಳೆಂದು ಸ್ತುತಿಸುತ್ತೇವೆ. ಅಲ್ಲದೇ
ನಾಲ್ಕು ಕೈಗಳುಳ್ಳ ರಾಹು ರಾಕ್ಷಸನೆನಿಸುವುದು ಹೇಗೆ?
ಯಾವ ರಾಕ್ಷಸನಿಗೆ ನಾಲ್ಕು ಕೈಗಳಿವೆ? ನಾಲ್ಕು ಕೈಗಳು
ದೇವತಾಶಕ್ತಿಯ ದ್ಯೋತಕಗಳಲ್ಲವೇ?
ರಾಹುವಿನ ಕಬಂಧವೇ ಕೇತುವಾದರೆ ನೂರು ಜನ
ಕೇತುಗಳೆನ್ನುವುದು ಎಂತು? “ಯೇ ಬ್ರಹ್ಮಪುತ್ರಾಃ
ಬ್ರಹ್ಮಸಮಾನ ವಕ್ತ್ರಾಃ” ಎಂಬುದಾಗಿ ಕೇತುಗಳನ್ನು
ಬ್ರಹ್ಮಪುತ್ರರು, ಬ್ರಹ್ಮನಂತಹ ಮುಖದವರು ಎಂದು
ಸ್ತುತಿಸುವುದು ಹೇಗೆ ಸಾಧ್ಯ? ನವಗ್ರಹಪ್ರತಿಮೆಗಳ ಬಗ್ಗೆ
ಹೇಳುತ್ತಾ ನವಗ್ರಹಕಾರಿಕೆಯಲ್ಲಿ “ಸರ್ವೇ ಕಿರೀಟಿನಃ
ಕಾರ್ಯಾಃ” ಎಲ್ಲಾ ಗ್ರಹಗಳಿಗೂ ಕಿರೀಟವಿರುವಂತೆ
ಪ್ರತಿಮೆಯನ್ನು ಮಾಡಬೇಕೆಂದು ಹೇಳುತ್ತದೆ. ತಲೆಯಿಲ್ಲದೆ
ಕಿರೀಟವಿಡುವುದೆಂತು?
ಹೀಗೆ ಸಮಸ್ಯೆಗಳನ್ನು ಬಿಡಿಸುತ್ತಾ ಹೊರಟರೆ ಚಕ್ರವ್ಯೂಹಕ್ಕೆ
ಹೊಕ್ಕ ಅನುಭವವಾಗುತ್ತದೆ. ಪೂರ್ವೋತ್ತರ ವಿರೋಧ
ಬರದಂತೆ ಈ ಕಗ್ಗಂಟುಗಳನ್ನು ಬಿಡಿಸುವ ಬಗೆಯನ್ನು
ವಿದ್ವಾಂಸರಾದ ಶ್ರೀಯುತ ಹಯವದನ ಪುರಾಣಿಕರು
“ಅಭಿಷೇಕ” ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ
“ರಾಹು ಕೇತು” ಎಂಬ ತಮ್ಮ ಲೇಖನದಲ್ಲಿ
ವಿಮರ್ಶಾತ್ಮಕವಾಗಿ ತಿಳಿಸಿದ್ದಾರೆ. ತಿಳಿಯಲೇ ಬೇಕಾದ
ವಿಷಯ ಇಷ್ಟು “ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ
ಸಮಾವಿಷ್ಯಮಥೋ ಸಬಾಹುಃ”
(ಮ.ಭಾ.ತಾ.) ಎಂಬ ಮಧ್ವಾಚಾರ್ಯರ ಮಾತಿನಂತೆ
ದೇವತೆಗಳ ಸನ್ನಿಧಾನವುಳ್ಳ ರಾಹುವಿನ ತಲೆ ಗ್ರಹವೆನಿಸಿತು.
ಇಲ್ಲಿ ರಾಹುವಿನ ತಲೆ ಅಧಿಷ್ಠಾನ ಮಾತ್ರ. ಅದರಲ್ಲಿ
ದೇವತಾಸನ್ನಿಧಾನವಿದೆ. ಶಾಲಗ್ರಮದಲ್ಲಿ
ಹರಿಸಾನ್ನಿಧ್ಯವಿರುವಂತೆ. ದುಂಡಗಿನ ಶಾಲಗ್ರಾಮದಲ್ಲಿ
ಚತುರ್ಭುಜನಾದ ಹರಿಯಿರುವಂತೆ ದುಂಡಗಿನ ರಾಹು
ಶಿರದಲ್ಲಿ ಚತುರ್ಭುಜ ದೇವತೆಯನ್ನು ಧ್ಯಾನಿಸುವುದು
ಅಸಂಗತವಾಗದು. ಆ ದೇವತೆಯನ್ನು ಉದ್ದೇಶಿಸಿಯೇ
ಪೂಜೆ, ಹೋಮಗಳನ್ನು ಮಾಡಬೇಕು.
“ರಾಹುಜ್ಯೇಷ್ಠಂ ಕೇತುಕಮ್” ಎಂಬ ವಚನಾನುಸಾರ
ರಾಹುವಿನ ಶಿರದಲ್ಲೆ ಸನ್ನಿಹಿತರಾದ ಕೇತುಗಳೆಂಬ ನೂರು
ದೇವತೆಗಳು ಕೇತುಗ್ರಹಕ್ಕೆ ಅರ್ಪಿಸಿದ ಪೂಜೆ ಆಹುತಿಗಳನ್ನು
ಸ್ವೀಕರಿಸುತ್ತಾರೆ. ಈ ದೇವತೆಗಳು ಬ್ರಹ್ಮಪುತ್ರರು,
ಬ್ರಹ್ಮಸಮಾನವಕ್ತ್ರರು, ಬ್ರಹ್ಮಜ್ಞಾನಿಗಳು. ಇವರೇ
ಕೇತುಗಳು. ರಾಹುವಿನ ಕಬಂಧವೇ ಕೇತುಗ್ರಹವೆನ್ನುವುದಕ್ಕೆ
ಪ್ರಮಾಣವಿಲ್ಲ. ರಾಹು ಪುಚ್ಛವೆನಿಸಿದ ಅದೂ ಒಂದು
ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು
ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು.
ಅದರೆ ಗ್ರಹವಲ್ಲ.
ಈ ರಾಹುಕೇತುಗಳ ಜೊತೆ ಸೂರ್ಯ, ಚಂದ್ರರನ್ನು
ದ್ವೇಷಿಸುವ ರಾಹುವೆಂಬ ರಾಕ್ಷಸನೂ ಹರಿಯ
ಅನುಗ್ರಹದಿಂದ ಇದ್ದಾನೆ. ತತ್ವವನ್ನು ತಿಳಿಯದೆ
ಪೂಜಿಸಿದಲ್ಲಿ
ಆ ಪೂಜೆ ರಾಕ್ಷಸನ ಪಾಲಾದೀತು. ತಿಳಿದು ಪೂಜಿಸಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ರಾಹು-
ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ
ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ ವಿರುದ್ಧ
ದಿಕ್ಕಿನಲ್ಲಿರುವ ಎರಡು ಕಪ್ಪು ಬಿಂದುಗಳು. ಭೂಮಿಗೆ
ಉತ್ತರ ಧ್ರುವ ದಕ್ಷಿಣದ್ರುವಗಳಿರುವಂತೆ. ಆದ್ದರಿಂದಲೇ
ರಾಶಿಚಕ್ರದಲ್ಲಿ ರಾಹು, ಕೇತುಗಳ ಮಧ್ಯೆ ಸರಿಯಾಗಿ ಆರು
ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ
ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಳನೇ
ಕೋಣೆಯಲ್ಲಿ ಕೇತುವಿರುತ್ತಾನೆ. ಉದಾಹರಣೆಗೆ ರಾಹು
ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ಮೀನಕ್ಕೆ
ಚಲಿಸಿದ ಕ್ಷಣದಲ್ಲಿಯೇ ಕೇತು ಕನ್ಯಾಕ್ಕೆ ವಾಲಿರುತ್ತಾನೆ.
ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ
ಹಿಂತುದಿ ಅಲ್ಲಿರಲೇಬೇಕು. ಮುಂಬದಿ ಮುಂದಕ್ಕೆ ಸಾಗಿದ
ಕ್ಷಣದಲ್ಲಿಯೇ ಹಿಂತುದಿ ಪಕ್ಕಕ್ಕೆ ವಾಲುತ್ತದೆ. ಹಾಗೆಯೇ
ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು
ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು
ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ
ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು,
ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗಿದೆಯೆಂದು
ತಿಳಿಯಬೇಕು. ರಾಹುವನ್ನು ಕಪ್ಪುಬಣ್ಣದ ನೆರಳು, ಕತ್ತಲೆ
ಎಂಬ ಭಾವದಿಂದಲೇ ಛಾಯಾಗ್ರಹ, ತಮಃ ಎಂದು
ಕರೆಯಲಾಗುತ್ತದೆ.
ಜನವರಿ 2ರಂದು ಕೇತು ಜಯಂತಿ. ರಾಹುವಿನಂತೆ ಕೇತು
ಒಲಿದಾಗಲೂ ಸುಖ ಹಾಗೂ ಸಮೃದ್ಧಿ ದೊರೆಯುತ್ತದೆ.
ಕೇತುವಿನ ಅಧಿದೇವತೆ ಗಣೇಶ. ಕೇತುವು ನೆರಳಿನ
ಗ್ರಹವಾಗಿದೆ ಮತ್ತು ಯಾವುದೇ ಭೌತಿಕ ಅಸ್ತಿತ್ವವನ್ನು
ಹೊಂದಿಲ್ಲ. ಕೇತು ಯಾವಾಗಲೂ ಹಿಮ್ಮುಖ ಚಲನೆಯಲ್ಲಿ
ಚಲಿಸುತ್ತದೆ.
ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೇತುವು ಉತ್ತಮ
ಸ್ಥಾನದಲ್ಲಿದ್ದರೆ, ಅದು ಬುದ್ಧಿವಂತಿಕೆ, ಆಧ್ಯಾತ್ಮಿಕ
ಪ್ರವೃತ್ತಿಗಳು, ವೈರಾಗ್ಯ, ಲೌಕಿಕ ಆಸೆಗಳು ಮತ್ತು
ಮಹತ್ವಾಕಾಂಕ್ಷೆಗಳಿಂದ ವಿಮುಕ್ತಿ ಪಡೆಯಲು ಮಾನಸಿಕ
ಸಾಮರ್ಥ್ಯಗಳನ್ನು ನೀಡುತ್ತದೆ. ಆದಾಗ್ಯೂ, ಕೇತುವು
ದುರ್ಬಲವಾಗಿದ್ದರೆ ಅದು ಮಿತಿಯಿಲ್ಲದ ಚಿಂತೆ, ದುರ್ಬಲ
ದೃಷ್ಟಿ ಮತ್ತು ಕಳಪೆ ಏಕಾಗ್ರತೆಯ ಶಕ್ತಿಗೆ ಕಾರಣವಾಗುತ್ತದೆ.
ಪವಿತ್ರವಾದ ಕೇತು ಕವಚಂ ಸ್ತೋತ್ರದಲ್ಲಿ ಕೇತುವನ್ನು ಎಲ್ಲಾ
ರೋಗಗಳಿಂದ ರಕ್ಷಿಸುವ ರಕ್ಷಕ ಎಂದು ಶ್ಲಾಘಿಸಲಾಗಿದೆ.
ಸ್ತೋತ್ರದ ಕಠಿಣ ಪಠಣವು ಎಲ್ಲಾ ಪ್ರಯತ್ನಗಳಲ್ಲೂ
ಯಶಸ್ಸನ್ನು ನೀಡುತ್ತದೆ ಎಂದು ನಂಬಲಾಗಿದೆ.
ಕೇತುವಿಗೆ ಮೀಸಲಾದ ವಿವಿಧ ದೇವಾಲಯಗಳಿವೆ.
ತಮಿಳುನಾಡಿನ ಕೀಜಪೆರುಂಪಲ್ಲಂನಲ್ಲಿರುವ ಶ್ರೀ
ನಾಗನಂತಸ್ವಾಮಿ ದೇವಾಲಯವು ಪ್ರಮುಖ
ದೇವಾಲಯಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ
ಶ್ರೀಕಾಳಹಸ್ತೀಶ್ವರ ದೇವಸ್ಥಾನ ಮತ್ತು ಕರ್ನಾಟಕದ ಕುಕ್ಕೆ
ಸುಬ್ರಹ್ಮಣ್ಯ ದೇವಸ್ಥಾನಗಳು ಸರ್ಪ ದೋಷಗಳಿಗೆ
ಪ್ರಮುಖ ಪರಿಹಾರ ಕೇಂದ್ರಗಳಾಗಿವೆ.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು
ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ
ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ಯೇಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ
ಬ್ರಹ್ಮೋದೃವಾಃ ಬ್ರಹ್ಮವಿಧಃ ಕುಮಾರಾಃ |
ಬ್ರಹ್ಮೋತ್ತಮಾ ವರದಾ ಜಾಮದಗ್ನ್ಯಾಃ
ಕೇತೂನ್ ಸದಾ ಶರಣಮಹಂ ಪ್ರಪದ್ಯೇ ||
ಇವರು ಬ್ರಹ್ಮಪುತ್ರರು ಚತುರ್ಮುಖಬ್ರಹ್ಮನ ಮುಖದಂತೆ
ಮುಖವುಳ್ಳವರು. ಬ್ರಾಹ್ಮಣವಂಶ ಸಂಜಾತರು.
ಬ್ರಹ್ಮಜ್ಞಾನಿಗಳು. ಹದಿಹರಯದ ಕುಮಾರರು. ಬ್ರಾಹ್ಮಣ
ಶ್ರೇಷ್ಠರು. ವರಪ್ರದರು. ಜಮದಗ್ನಿಗೋತ್ರೋತ್ಪನ್ನರು.
ಇಂತಹ ಕೇತುಗಳನ್ನು ನಾನು ಸದಾ ಶರಣು ಹೋಗುತ್ತೇನೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಹಿಂದೂ ಪುರಾಣಗಳ ಪ್ರಕಾರ, ರಾಹು ಎಂಬುದು ಸೂರ್ಯ ಅಥವಾ ಚಂದ್ರನನ್ನು ನುಂಗಿ ಗ್ರಹಣಗಳನ್ನು ಉಂಟುಮಾಡುವ ಒಂದು ಹಾವು. ವೇದ, ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ನವಗ್ರಹಗಳಲ್ಲಿ(ಒಂಬತ್ತು ಗ್ರಹಗಳು) ಒಂದಾಗಿವೆ. ಈ ರಾಹು ಕೇತು ಗ್ರಹದೋಷ ಯಾರ ಮೇಲಾದರೂ ಇದೆಯೆಂದರೆ ಅವರ ಜೀವನ ಅಷ್ಟೇ.. ನರಕ ನರಕ. ಅವರು ಏನೇ ಮಾಡಿದರೂ ಅದಕ್ಕೆ ಅಡ್ಡಿಗಳು ಎಡತಾಕಿ ಅವು ಕೈಗೂಡುವುದೇ ಇಲ್ಲ. ಈ ರಾಹು ಕೇತು ಗ್ರಹಗಳ ಅಶುಭ ಪ್ರಭಾವವನ್ನು(Rahu, Ketu Effect) ಕಡಿಮೆ ಮಾಡಲು ಇಲ್ಲಿ ಅನೇಕ ಮಾರ್ಗೋಪಾಯಗಳನ್ನು ನೀಡಲಾಗಿದೆ. ಹಿಂದೂ ಧರ್ಮದ ಅನುಸಾರ ಮನುಷ್ಯರ ಜೀವನದಲ್ಲಿ ಗ್ರಹ, ನಕ್ಷತ್ರಗಳ ಸ್ಥಿತಿಗಳು ವಿಶೇಷ ಮಹತ್ವವನ್ನು ಬೀರುತ್ತವೆ. ಸಮಯ ಕಳೆದಂತೆ ಗ್ರಹ, ನಕ್ಷತ್ರಗಳ ಸ್ಥಿತಿಗತಿಗಳೂಬದಲಾಗುತ್ತಾ ಮನುಷ್ಯನ ಜೀವನದ ಮೇಲೆ ಅವು ಬೀರುವ ಪ್ರಭಾವಗಳೂ ಸಹ ಬದಲಾಗುತ್ತಾ ಇರುತ್ತವೆ. ಈ ರಾಹು ಕೇತು ಗ್ರಹಗಳ ಪ್ರಭಾವ ಮನುಷ್ಯ ಜಾತಕದಲ್ಲಿ ಯಾರ ಮೇಲಾದರೂ ಪ್ರಭಾವ ಬೀರಬಹುದು. ಅದರಿಂದ ಕಾಳ ಸರ್ಪ ದೋಷ ಕಾಣಿಸಿಕೊಳ್ಳಬಹುದು.
ರಾಹುವಿನ ಅಶುಭ ಸ್ಥಿತಿಗತಿಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ:
1. ನಿಮ್ಮ ಜೀವನದಲ್ಲಿ ರಾಹುವಿನ ವಕ್ರ ದೃಷ್ಟಿ ಬಿದ್ದಿದೆಯೆಂದರೆ ನಿಯಮಿತವಾಗಿ ನೀವು ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಆ ವೇಳೆ ಓಂ ನಮಃಶಿವಾಯ ಮಂತ್ರವನ್ನು ಜಪಿಸಬೇಕು. ದಿನಾ ಶಿವಲಿಂಗದ ಬಳಿ ಕುಳಿತು ಶಿವ ಚಾಲೀಸವನ್ನು ಪಠಿಸಬೇಕು. ಶಿವವನ್ನು ಧೇನಿಸುವುದರಿಂದ ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ.
2. ರಾಹುಗೆ ಸಂಬಂಧಿಸಿ ನಿಮ್ಮ ಜೀವನದಲ್ಲಿ ಅಶುಭ ಪ್ರಭಾವ ಬೀರಿದೆಯೆಂದರೆ ಜ್ಯೋತಿಷಿಗಳ ಸಲಹೆ ಪಡೆದು ಗೋಮೇಧಿಕ ಹರಳನ್ನು (ರತ್ನ) ಧಾರಣೆ ಮಾಡಬೇಕು. ಇದರಿಂದ ರಾಹುವಿನ ಪ್ರಭಾವ ಕ್ಷೀಣಿಸುತ್ತದೆ.
3. ರಾಹುವಿನ ಉಂಡಾಗುವ ತೊಂದರೆ, ತಾಪತ್ರಯಗಳಿಂದ ಬಚಾವಾಗಲು ಉದ್ದಿನ ಬೇಳೆ, ಬೆಚ್ಚಗಿನ ಉಡುಪು, ಸಾಸಿವೆ, ಕಪ್ಪು ಬಣ್ಣದ ಗಾಢ ಹೂವುಗಳನ್ನು ತೆಗೆದುಕೊಂಡು ಶನಿವಾರಗಳಂದು ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಸಾರ ದಾನ ಮಾಡಬೇಕು. ಜೊತೆಗೆ ದಿನಾ ಬೆಳಗ್ಗೆ ತುಳಸಿ ಎಲೆಗಳಲ್ಲಿ ನೆನೆಸಿರುವ ನೀರನ್ನು ಸೇವಿಸಬೇಕು.
4. ರಾಹು ಶಾಂತಿಗೊಳಿಸಲು ಓಂ ಭ್ರಾಂ ಭ್ರೀಂ ಭ್ರೌ ಸಂ ರಾಹವೇ ನಮಃ ಬೀಜ ಮಂತ್ರವನ್ನು ಜಪ ಮಾಲೆಯೊಂದಿಗೆ ಪ್ರತಿ ದಿನ ಜಪಿಸಬೇಕು. ಇದರಿಂದ ಬಹಳಷ್ಟು ಸಮಾಧಾನ ದೊರಕುತ್ತದೆ.
ಕೇತುವಿನ ವಕ್ರ ದೃಷ್ಟಿಯಿಂದ ಬಚಾವಾಗಲು ಹೀಗೆ ಮಾಡಿ:
1. ಕೇತುವಿನಿಂದ ಒದಗುವ ಅಶುಭ ಪ್ರಭಾವವನ್ನು ದೂರ ಮಾಡಲು ಕೇತುವಿನ ಬೀಜ ಮಂತ್ರ ಓಂ ಸ್ರಾಂ ಸ್ರೀಂ ಸ್ರೌ ಸಃ ಕೇತವೇ ನಮಃ ಮಂತ್ರವನ್ನು ಜಪಿಸಬೇಕು.
2. ಕೇತು ದೆಸೆಯಿಂದ ಬಹುವರ್ಣದ ನಾಯಿ ಅಥವಾ ಬಹುವರ್ಣದ ಹಸುವನ್ನು ಸಾಕಿಕೊಂಡಿದ್ದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ. ಅದು ನಿಮ್ಮಮನೆಯಲ್ಲಿ ಇಲ್ಲದಿದ್ದರೆ ಅಕ್ಕಪಕ್ಕದಲ್ಲಿ ಅಂತಹ ನಾಯಿ ಅಥವಾ ಹಸು ಗಳಿದ್ದರೆ ಅವುಗಳ ಲಾಲನೆ ಪಾಲನೆ ಮಾಡಿ.
3. ಕೇತು ವಕ್ರ ದೆಸೆಯಿಂದ ಬಚಾವಾಗಲು ಏಳ್ಳು, ಬಾವುಟ, ಕಣ್ಣು ಕಪ್ಪು, ಬೆಚ್ಚಗಿನ ಬಟ್ಟೆ, ನವ ಧಾನ್ಯಗಳು, ಮೂಲಂಗಿ ಇವೇ ಮುಂತಾದುವನ್ನು ದಾನ ಮಾಡಿದರೆ ಶುಭಪ್ರದವಾಗುತ್ತದೆ. ಭಾನುವಾರದಂದು ನಿಮ್ಮ ಸಾಮರ್ಥ್ಯದಂತೆ ದಾನ ಮಾಡುವುದು ಕ್ಷೇಮಕರ.