ಭೀಕರ ಅಗ್ನಿ ಅವಗಢ | 6 ಸಾವು Saaksha Tv
ಮುಂಬೈ: ಇಂದು ಬೆಳಿಗ್ಗೆ ನಗರದ 20 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಆರು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ತಾರ್ಡಿಯೋ ಪ್ರದೇಶದ ಗೋವಾಲಿಯಾ ಟ್ಯಾಂಕ್ ನಲ್ಲಿರುವ ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಬೆಳಿಗ್ಗೆ ಸುಮಾರು 7 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ 15 ಮಂದಿ ಗಾಯಕೊಂಡಿದ್ದಾರೆ. ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 13 ಅಗ್ನಿ ಶಾಮಕ ದಳ ವಾಹನಗಳು ಮತ್ತು ಏಳು ವಾಟರ್ ಜೆಟ್ವೀಸ್ ಗಳು ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಈ ದುರ್ಘಟನೆ ಕುರಿತು ಮಾತನಾಡಿರುವ ಮೆಯರ ಕಿಶೋರ ಪಡ್ನೇಕರ್ ಅವಘಡದಲ್ಲಿ ಗಾಯಗೊಂಡಿರುವರಲ್ಲಿ 6 ಮಂದಿ ವೃದ್ಧರಿಗೆ ಕೃತಕ ಆಮ್ಲಜನಕ ಅವಶ್ಯಕತೆ ಇದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಶೀಘ್ರದಲ್ಲೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.








