ಉಕ್ರೇನ್ ನಿಂದ ಕರ್ನಾಟಕಕ್ಕೆ ಮರಳಿದ 572 ವಿದ್ಯಾರ್ಥಿಗಳು – Saaksha Tv
ಬೆಂಗಳೂರು : ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಮುಂದುವರೆದಿದ್ದು, ಉಕ್ರೇನ್ ನಲ್ಲಿ ಸಿಲುಕಿದ್ದ ಎಲ್ಲ ಭಾರತೀಯರನ್ನು ಯಶಸ್ವಿಯಾಗಿ ಆಪರೇಷನ್ ಗಂಗಾ ಅಡಿಯಲ್ಲಿ ತಾಯ್ನಾಡಿಗೆ ಕರೆ ತರಲಾಗಿದೆ.
ನಿನ್ನೆ ರಾತ್ರಿ ಅಂತಿಮವಾಗಿ ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಇದುವರೆಗೂ ಆಪರೇಷನ್ ಗಂಗಾ ಅಡಿಯಲ್ಲಿ ಒಟ್ಟು 63 ಬ್ಯಾಚ್ಗಳಲ್ಲಿ 572 ವಿದ್ಯಾರ್ಥಿಗಳನ್ನು ಕರೆ ತರಲಾಗಿದೆ.
ಫೆಬ್ರವರಿ 27ರಂದು ಆಪರೇಷನ್ ಗಂಗಾ ಆರಂಭವಾಗಿದ್ದು, ನಿನ್ನೆ ಅಂದ್ರೆ ಶುಕ್ರವಾರ ಕೊನೆಯ ವಿಮಾನ ಬಂದಿಳಿದಿದೆ. ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಪ್ರಕ್ರಿಯೆಗೆ ಆಪರೇಷನ್ ಗಂಗಾ ಎಂದು ಹೆಸರನ್ನಿಡಲಾಗಿತ್ತು. ಒಟ್ಟು 13 ದಿನ ನಡೆದ ಆಪರೇಷನ್ ನಲ್ಲಿ ಕರ್ನಾಟಕದ 572 ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ಸೇರಿದ್ದಾರೆ. ಆಪರೇಷನ್ ಆರಂಭಕ್ಕೂ ಮೊದಲೇ ಬಂದಿದ್ದ 61 ವಿದ್ಯಾರ್ಥಿಗಳು ಕರ್ನಾಟಕ ತಲುಪಿದ್ದರು.
ವಿದ್ಯಾರ್ಥಿಗಳು ಆಗಮನ :
ಫೆಬ್ರವರಿ 27 – 30 ವಿದ್ಯಾರ್ಥಿಗಳು – 3 ವಿಮಾನಗಳಲ್ಲಿ ಆಗಮನ
ಫೆಬ್ರವರಿ 28 – 7 ವಿದ್ಯಾರ್ಥಿಗಳು – 2 ವಿಮಾನಗಳಲ್ಲಿ ಆಗಮನ
ಮಾರ್ಚ್ 1 – 18 ವಿದ್ಯಾರ್ಥಿಗಳು – 3 ವಿಮಾನಗಳಲ್ಲಿ ಆಗಮನ
ಮಾರ್ಚ್ 2 – 31 ವಿದ್ಯಾರ್ಥಿಗಳು – 6 ವಿಮಾನಗಳಲ್ಲಿ ಆಗಮನ
ಮಾರ್ಚ್ 3 – 104 ವಿದ್ಯಾರ್ಥಿಗಳು – 12 ವಿಮಾನಗಳಲ್ಲಿ ಆಗಮನ
ಮಾರ್ಚ್ 4 – 92 ವಿದ್ಯಾರ್ಥಿಗಳು – 9 ವಿಮಾನಗಳಲ್ಲಿ ಆಗಮನ
ಮಾರ್ಚ್ 5 – 90 ವಿದ್ಯಾರ್ಥಿಗಳು – 6 ವಿಮಾನಗಳಲ್ಲಿ ಆಗಮನ
ಮಾರ್ಚ್ 6 – 88 ವಿದ್ಯಾರ್ಥಿಗಳು – 8 ವಿಮಾನಗಳಲ್ಲಿ ಆಗಮನ
ಮಾರ್ಚ್ 7 – 43 ವಿದ್ಯಾರ್ಥಿಗಳು – 6 ವಿಮಾನಗಳಲ್ಲಿ ಆಗಮನ
ಮಾರ್ಚ್ 8 – 57 ವಿದ್ಯಾರ್ಥಿಗಳು – 5 ವಿಮಾನಗಳಲ್ಲಿ ಆಗಮನ
ಮಾರ್ಚ್ 11 – 12 ವಿದ್ಯಾರ್ಥಿಗಳು – 1 ವಿಮಾನಗಳಲ್ಲಿ ಆಗಮನ








