ಪವಿತ್ರ ತುಳಸಿಯ ಧ್ಯಾನ. ಭಗವಾನ್ ಮಹಾವಿಷ್ಣು ಭೂಲೋಕದಲ್ಲಿ ಜನಿಸಲು ಕಾರಣವೇನು..??
ಕಾರ್ತಿಕ ಮಾಸದ ಶುಕ್ಲಪಕ್ಷ ದ್ವಾದಶಿಯ ದಿನ ಆಚರಿಸುವುದೇ ತುಳಸಿ ಲಗ್ನ ಅಥವಾ ಉತ್ಥಾನ ದ್ವಾದಶಿ, ಉತ್ಥಾನ ಅಂದರೆ ಜಾಗ್ರತಿ ಎಂದರ್ಥ, ಶ್ರೀಮನ್ನಾರಾಯಣನು ನಿದ್ರೆಯಿಂದ ಹೊರಬಂದು ತನ್ನ ಭಕ್ತರಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಪಾಲ್ಗಡಲಲ್ಲಿ ಮಲಗಿದ್ದ ಭಗವಂತನನ್ನು ಸುಪ್ರಭಾತ ಸೇವೆಯಿಂದ ಎಬ್ಬಿಸುವುದರಿಂದ ಈ ಹಬ್ಬಕ್ಕೆ ‘ಕ್ಷೀರಾಭಿವ್ರತ’ವೆನ್ನುವರು. ಹಿಂದಿನ ದಿನ ಏಕಾದಶಿ ಉಪವಾಸ ಮಾಡಿ, “ನಮಃ ತುಳಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ ಶುಭೇ, ನಮೋ ಮೋಕ್ಷಪ್ರದಾಯಿಕೆ ದೇವಿ ನಮೋ ಸಂಪತ್ ಪ್ರದಾಯಿಕ” ಎಂಬ ಶ್ಲೋಕ ಹೇಳಿ ತುಳಸಿಯನ್ನು ಧ್ಯಾನಿಸಿ, ‘ಉತ್ತಿಷ್ಟ, ಉತ್ತಷ್ಟ ಗೋವಿಂದ ಉತ್ತಿಷ್ಟ ಗರುಡಧ್ವಜ, ಉತ್ತಿಷ್ಟ ಕಮಲಾಕಾಂತಾ ತ್ರೈಲೋಕ್ಯಂ ಮಂಗಳಂ ಕುರು,” ಎಂದು ಮಹಾವಿಷ್ಣುವನ್ನು ಎಬ್ಬಿಸುತ್ತಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಭಗವಂತನಿಗೆ ಪುರುಷಸೂಕ್ತದಿಂದಲೂ ತುಳಸಿಗೆ ಸ್ತ್ರೀಸೂಕ್ತದಿಂದಲೂ ಅರ್ಚಿಸಿ, ತುಳಸಿಕಟ್ಟೆಯಲ್ಲಿ ಕೃಷ್ಣನ ವಿಗ್ರಹವಿಟ್ಟು, ನೆಲ್ಲಿಕಾಯಿ ಗೊನೆಯನ್ನು ಸಿಕ್ಕಿಸಿ, ತಳಿರು ತೋರಣ ಕಟ್ಟಿ, ಸಾರಿಸಿ ರಂಗೋಲಿಯನಿಟ್ಟು ಅರಿಶಿನ ಕುಂಕುಮ ಹೂವು ದೀಪ ಧೂಪಗಳಿಂದಲಂಕರಿಸಿ, ಪೂಜೆ ಮಾಡಿ, ಕೋಸಂಬರಿ ಅವಲಕ್ಕಿ ಬೆಲ್ಲ ನೈವೇದ್ಯ ಮಾಡಿ ಆರತಿ ಬೆಳಗಿ, ಮುತ್ತೈದೆಯರಿಗೆ ಫಲತಾಂಬೂಲ ನೀಡಿ, ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ಈ ದಿನ ತುಪ್ಪದ ದೀಪ ಹಚ್ಚಿ ದೀಪದಾನ ಕೊಡುವುದು ತುಂಬಾ ಶ್ರೇಷ್ಠ. ಇದರಿಂದ ಮನೆಯಲ್ಲಿ ಶಾಂತಿ ಸಂತೋಷ ಆರೋಗ್ಯ ವೃದ್ಧಿಸುತ್ತದೆ. ತುಳಸಿ ಲಗ್ನವನ್ನು ಸಂಜೆ ಗೋಧೂಳಿ ಲಗ್ನದಲ್ಲಿ ಮಾಡುವುದು ಶ್ರೇಯಸ್ಕರ.
ಈ ಲಗ್ನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಜಲಂಧರನೆಂಬ ರಾಕ್ಷಸ ವಿಷ್ಣುವಿನ ಮಹಾ ಭಕ್ತ. ತುಂಬ ಬಲಶಾಲಿ. ಅವನಿಗೆ ಶಿವ ಗಣಗಳೊಡನೆ ದ್ವೇಷ. ಅನೇಕ ವರ್ಷ ಶಿವನೊಡನೆ ಯುದ್ಧ ಮಾಡುತ್ತಾನೆ. ಜಲಂಧರನ ಹೆಂಡತಿ ವೃಂದಾದೇವಿಯು ವಿಷ್ಣುವಿನ ಪರಮ ಭಕ್ತಿ, ಅವನ ಅನುಗ್ರಹದಿಂದ ಪತಿವ್ರತಾ ಶಕ್ತಿಯನ್ನು ಪಡೆದಿರುತ್ತಾಳೆ. ಜಲಂಧರನ ಉಪಟಳ ದೇವಲೋಕದವರೆಗೂ ಹಬ್ಬುತ್ತದೆ. ದೇವತೆಗಳು ನಾರದರ ಜೊತೆ ವೈಕುಂಠಕ್ಕೆ ಬಂದು ಹೇಗಾದರೂ ಜಲಂಧರನ ಸಂಹಾರ ಮಾಡುವಂತೆ ಪ್ರಾರ್ಥಿಸುತ್ತಾರೆ. ವೃಂದಾದೇವಿಯ ಪಾತಿವ್ರತ್ಯ ಇರುವರೆಗೂ ಜಲಂಧರನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದಿರುವುದರಿಂದ, ವಿಷ್ಣುವು ಜಗನ್ಮಾತೆಯನ್ನು ಬೇಡುತ್ತಾನೆ. ಬೃಂದೆಯ ಪಾತಿವ್ರತ್ಯ ಭಂಗ ಮಾಡಿದರೆ ರಾಕ್ಷಸನ ಶಕ್ತಿ ಕುಂದುತ್ತದೆ ಎಂದು ದೇವಿ ಹೇಳುತ್ತಾಳೆ. ವಿಷ್ಣುವು ಜಲಂಧರನ ರೂಪದಲ್ಲಿ ಹೋಗಿ ಅವಳ ವ್ರತಭಂಗ ಮಾಡುತ್ತಾನೆ. ಶಿವನು ಅಘೋರಾಸದಿಂದ ಜಲಂಧರನನ್ನು ಕೊಲ್ಲುತ್ತಾನೆ. ವಿಷಯವನ್ನೆಲ್ಲ ತಿಳಿದ ಬೃಂದೆಯು ಕೋಪಾವೇಶದಿಂದ, ನೀನು ಭೂಲೋಕದಲ್ಲಿ ಜನಿಸು ಎಂದು ವಿಷ್ಣುವಿಗೆ ಶಪಿಸಿ ಅಗ್ನಿಪ್ರವೇಶ ಮಾಡುತ್ತಾಳೆ. ಜಗನ್ಮಾತೆಯು ವಿಷ್ಣುವಿಗೆ ಒಂದು ಬೀಜವನ್ನು ನೀಡಿ, ಆಕೆಯ ಚಿತಾಭಸ್ಮದಲ್ಲಿ ಹಾಕುವಂತೆ ಹೇಳುತ್ತಾಳೆ. ಅಲ್ಲಿ ಒಂದು ಗಿಡ ಹುಟ್ಟಿಕೊಳ್ಳುತ್ತದೆ. ಅದೇ ತುಳಸೀ ಗಿಡ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ತುಳಸಿ ಗಿಡದಲ್ಲಿ ಮಹಾವಿಷ್ಣುವಿನ ಸಾನ್ನಿಧ್ಯ ಇರುತ್ತದೆ ಎಂದು ನಂಬಲಾಗುತ್ತದೆ. ತುಳಸಿ ಗಿಡವು ಯಾರ ಮನೆಯ ಮುಂದೆ ಇರುತ್ತದೋ, ಅವರ ಮನೆಯಲ್ಲಿ ಮಹಾವಿಷ್ಣು, ಲಕ್ಷ್ಮಿದೇವಿಯರು ನೆಲೆಸಿರುತ್ತಾರೆ ಎಂದು ಭಾವುಕರು ನಂಬುತ್ತಾರೆ. ಗೃಹಿಣಿಯರಿಗೆ ತುಳಸಿಯನ್ನು ಪೂಜಿಸುವುದು ಒಂದು ಆನಂದದಾಯಕ ಅನುಭವ, ಆಚರಣೆ, ಮಹಾವಿಷ್ಣುವಿನ ಪ್ರತಿ ಪೂಜೆಯಲ್ಲೂ ತುಳಸಿಯನ್ನು ಬಳಸಲಾಗುತ್ತದೆ. ಅಷ್ಟೊಂದು ಪವಿತ್ರ ಸ್ಥಾನವನ್ನು ತುಳಸಿಗೆ ನೀಡಲಾಗಿದೆ.








