T20 WC 2022 : ಇಶಾನ್ ಬೇಡ.. ಪಂತ್, ಡಿಕೆ ಇರಲಿ
ಟಿ 20 ವಿಶ್ವಕಪ್ 2022ಕ್ಕೆ ಸಮಯ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ರಿಕ್ಕಿ ಪಾಂಟಿಂಗ್ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಮುಖ್ಯವಾಗಿ ಐಸಿಸಿ ಟೂರ್ನಿಯಲ್ಲಿ ಹಿರಿಯ ಬ್ಯಾಟರ್ ದಿನೇಶ್ ಕಾರ್ಇಕ್, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಫಿನಿಶರ್ ಗಳಾಗಿ ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಇವರಿಗೆ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಜೊತೆಯಾದ್ರೆ ಟೀಂ ಇಂಡಿಯಾವನ್ನು ಎದುರಿಸೋದು ತುಂಬಾ ಕಷ್ಟವಾಗುತ್ತದೆ ಎಂದು ರಿಕ್ಕಿ ಹೇಳಿದ್ದಾರೆ.
ಈ ವರ್ಷದ ಅಕ್ಟೋಬರ್ ನಲ್ಲಿ ಟಿ 20 ವಿಶ್ವಕಪ್ ಟೂರ್ನಿ ನಡೆಯಲಿದೆ. ಹೀಗಾಗಿ ಎಲ್ಲಾ ದೇಶಗಳು ತಮ್ಮ ಅಂತಿಮ ತಂಡಗಳನ್ನು ಕಟ್ಟುತ್ತಿವೆ.ಜೊತೆಗೆ ಬೆಂಜ್ ಸ್ಟ್ರೆಂಥ್ ಅನ್ನೂ ಹೆಚ್ಚಿಸಿಕೊಳ್ಳುತ್ತಿವೆ.
ಅದರಂತೆ ಟೀಂ ಇಂಡಿಯಾ ಕೂಡ ಸಾಕಷ್ಟು ಪರೀಕ್ಷೆಗಳನ್ನು ನಡೆಸುತ್ತಿದೆ.
ಒಂದು ಕಡೆ ದಿನೇಶ್ ಕಾರ್ತಿಕ್ ರಂತಹ ಹಿರಿಯ ಆಟಗಾರರು ಮಿಂಚುತ್ತಿರೋದು.. ಮತ್ತೊಂದು ಕಡೆ ಯುವ ಆಟಗಾರರ ಶೈನಿಂಗ್ ಪ್ರದರ್ಶನ ಟೀಂ ಇಂಡಿಯಾ ಆಯ್ಕೆಗಾರರಿಗೆ ತಲೆನೋವು ತಂದೊಡ್ಡಿದೆ.
ಜೊತೆಗೆ ತಂಡದಲ್ಲಿ ಸ್ಥಾನಕ್ಕಾಗಿ ಭಾರಿ ಪೈಪೋಟಿ ಕೂಡ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ರಿಕ್ಕಿ ಪಾಂಟಿಂಗ್ ಮಾತನಾಡುತ್ತಾ, ರಿಷಬ್ ಪಂತ್ ಏಕದಿನ ಮಾದರಿಯಲ್ಲಿ ಹೇಗೆ ಆಡಬಹುದೋ ಅದನ್ನ ತೋರಿಸಿಕೊಟ್ಟಿದ್ದಾರೆ.
ಅದೇ ರೀತಿ ಟಿ 20 ಕ್ರಿಕೆಟ್ ನಲ್ಲೂ ತನ್ನ ಸಾಮರ್ಥ್ಯವನ್ನು ಸಾಭೀತುಪಡಿಸುತ್ತಾನೆ.
ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ತನ್ನ ಸಾಮರ್ಥ್ಯವೇನು ಎಂಬೋದನ್ನ ಇಡೀ ವಿಶ್ವಕ್ಕೆ ಸಾರಿ ಹೇಳಿದ್ದಾರೆ.
ನನ್ನ ವಿಶ್ವಕಪ್ ತಂಡದಲ್ಲಿ ಅವರಿಬ್ಬರಿಗೆ ತಪ್ಪದೇ ಸ್ಥಾನ ನೀಡುತ್ತೇನೆ.
ರಿಷಬ್ ನಾಲ್ಕು ಅಥವಾ ಐದನೇ ಸ್ಥಾನದಲ್ಲಿ ಬಂದರೂ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಫಿನಿಷರ್ ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಮೂವರು ಅಬ್ಬರಿಸಿದ್ರೆ ಟೀಂ ಇಂಡಿಯಾ ಮತ್ತಷ್ಟ ಪ್ರಮಾದಕರವಾಗಲಿದೆ ಎಂದು ವಾದ ಮಂಡಿಸಿದ್ದಾರೆ.
ಆದ್ರೆ ಇಶಾನ್ ಕಿಶನ್ ಗೆ ತಂಡದಲ್ಲಿ ಸ್ಥಾನ ಸಿಗೋದು ಕಷ್ಟ ಎಂದು ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.
ಅಲ್ಲದೇ ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.