Parthiv Patel | ಅಶ್ವಿನ್ ಗೆ ವಿಶ್ವಕಪ್ ನಲ್ಲಿ ಸ್ಥಾನ ಸಿಗೋದಿಲ್ಲ
ಬರೋಬ್ಬರಿ ಎಂಟು ತಿಂಗಳ ಬಳಿಕ ಭಾರತ ಟಿ 20 ತಂಡಕ್ಕೆ ವಾಪಸ್ ಆಗಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ನೀಡಿದರು.
ಪಂದ್ಯದಲ್ಲಿ ಎರಡು ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದರು.
ಆಶ್ವಿನ್ ನವೆಂಬರ್ 2021ರಂದು ಕೊನೆಯ ಟಿ 20 ಪಂದ್ಯವನ್ನಾಡಿದ್ದರು.
ಅಲ್ಲದೇ ವಿಂಡೀಸ್ ವಿರುದ್ದದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಮೂವರು ಸ್ಪಿನ್ನರ್ ಗಳೊಂದಿಗೆ ಅಖಾಡಕ್ಕೆ ಇಳಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.
ಅನೂಹ್ಯವಾಗಿ ಅಶ್ವಿನ್ ಗೆ ತಂಡದಲ್ಲಿ ಸ್ಥಾನ ದೊರೆಯಿತು. ಇನ್ನುಳಿದ ಸ್ಪಿನ್ನರ್ ಗಳೆಂದರೇ ರವೀಂದ್ರ ಜಡೇಜಾ, ರವಿ ಬಿಷ್ನೋಯಿ.
ಆದ್ರೆ ಸೋಮವಾರ ನಡೆಯಲಿರುವ ಎರಡನೇ ಟಿ 20 ಪಂದ್ಯದಲ್ಲಿ ಮೂವರು ಸ್ಪಿನ್ನರ್ ಗಳು ತಂಡದಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನುವ ಪ್ರಶ್ನೆ ಇದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಪಾರ್ಥಿವ್ ಪಟೇಲ್, ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.

ಎರಡನೇ ಟಿ 20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದ್ರೆ ಅಶ್ವಿನ್ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಆಸ್ಟ್ರೇಲಿಯಾ ವೇದಿಕೆಯಾಗಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲೂ ಕೂಡ ಅಶ್ವಿನ್ ಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ಟೀಂ ಇಂಡಿಯಾದಲ್ಲಿ ಕುಲ್ ದೀಪ್ ಯಾದವ್, ರವಿ ಬಿಷ್ಣೋಯಿ, ಯಜುವೇಂದ್ರ ಚಹಾಲ್ ರಂತಹ ಸ್ಪಿನ್ನರ್ ಗಳು ಇರಬೇಕು ಅನ್ನೋದು ನನ್ನ ಅಭಿಪ್ರಾಯವಾಗಿದೆ.
ಈ ಮಣಿಕಟ್ಟು ಸ್ಪಿನ್ನರ್ ಗಳಿಗೆ ಮಿಡಲ್ ಆಫ್ ದಿ ಮ್ಯಾಚ್ ನಲ್ಲಿ ವಿಕೆಟ್ ತೆಗೆಯುವ ಸಾಮರ್ಥ್ಯವಿದೆ. ಅಶ್ವಿನ್ ಮಾತ್ರ ಟಿ 20 ಕ್ರಿಕೆಟ್ ನಲ್ಲಿ ಅಷ್ಟಾಗಿ ಮಿಂಚಿಲ್ಲ ಎಂದಿದ್ದಾರೆ.
ಇನ್ನು ಮೊದಲ ಟಿ 20 ಪಂದ್ಯದಲ್ಲಿ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನ ಪಾರ್ಥಿವ್ ಪಟೇಲ್ ಪ್ರಶಂಸಿದ್ದಾರೆ.
ಸ್ವದೇಶದಲ್ಲೂ ಕೂಡ ಮೂವರು ಸ್ಪಿನ್ನರ್ ಗಳೊಂದಿಗೆ ಟಿ 20 ಪಂದ್ಯವನ್ನಾಡಿದ್ದು ನಾನು ನೋಡೇ ಇಲ್ಲ.
ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡ ಅದ್ಬುತವಾಗಿ ಆಡುತ್ತಿದೆ.
ಸ್ಪಿನ್ನರ್ ಗಳನ್ನು ರೋಹಿತ್ ಶರ್ಮಾ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








