Pradhan mantri garib kalyan anna yojana | 3 ತಿಂಗಳು ಉಚಿತ ರೇಷನ್!
ನವದೆಹಲಿ : ಕೇಂದ್ರ ಸಚಿವ ಸಂಪುಟ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸಲು ನಿರ್ಧಾರ ಮಾಡಿದೆ.
ಇದರೊಂದಿಗೆ ಮುಂದಿನ ಮೂರು ತಿಂಗಳುಗಳ ಕಾಲ ದೇಶದಲ್ಲಿ 80 ಕೋಟಿ ಬಡವರಿಗೆ ಮತ್ತೆ ಮೂರು ತಿಂಗಳ ಕಾಲ ಉಚಿತ ರೇಷನ್ ಸಿಗಲಿದೆ.
ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಯನ್ನು ತೆಗೆದುಕೊಳ್ಳಲಾಗಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಆರಂಭಿಸಲಾಗಿತ್ತು.
ಅಂದಿನಿಂದ ಇಂದಿನವರೆಗೂ ಸಾಕಷ್ಟು ಬಾರಿ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಅದರಂತೆ ಈ ತಿಂಗಳ 30 ರವರೆಗೆ ಈ ಹಿಂದೆ ಈ ಯೋಜನೆಯನ್ನು ವಿಸ್ತರಿಸಲಾಗಿತ್ತು.

ಆದ್ರೆ ಇದೀಗ ಈ ಯೋಜನೆಯನ್ನು ಇನ್ನೂ ಮೂರು ತಿಂಗಳುಗಳ ವಿಸ್ತರಿಸಲಾಗಿದೆ.
ಆರಂಭದಲ್ಲಿ ಈ ಯೋಜನೆಯನ್ನು ಮೂರು ತಿಂಗಳ ಅವಧಿಗೆ ಮಾತ್ರ ಘೋಷಣೆ ಮಾಡಲಾಗಿತ್ತು.
ನಂತರ ಜುಲೈ ನಿಂದ ನವೆಂಬರ್ 2020ರವರೆಗೆ ವಿಸ್ತರಿಸಲಾಗಿತ್ತು.
ಇದಾದ ಬಳಿಕ 2021ರಲ್ಲೂ ಕೊರೊನಾ ಕಾಟವಿದ್ದ ಕಾರಣ ಎರಡನೇ ಅವಧಿಗೆ ಮೇ ಮತ್ತು ಜೂನ್ 2021 ರವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗಿತ್ತು.
ಹೀಗೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಹಲವು ಬಾರಿ ವಿಸ್ತರಣೆ ಮಾಡಿದೆ. pradhan-mantri-garib-kalyan-anna-yojana-union-government-extended








