Basanagouda patil yatnal | ಇನ್ಮುಂದೆ ಯಡಿಯೂರಪ್ಪ ಸೇರಿ ಪಕ್ಷದವರ ವಿರುದ್ಧ ಮಾತಾಡಲ್ಲ
ಬೆಂಗಳೂರು : ಹಿರಿಯರ ಸಲಹೆಯಂತೆ ಇನ್ಮುಂದೆ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಮಾತನಾಡಲ್ಲ, ನನ್ನ ಟಾರ್ಗೆಟ್ ಏನಿದ್ದರೂ ಕಾಂಗ್ರೆಸ್, ಜೆಡಿಎಸ್ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಹಿರಿಯರು ಸೂಚನೆ ನೀಡಿದ್ದಾರೆ.
ಇದಕ್ಕೆ ನಾನು ಒಪ್ಪಿಕೊಂಡಿದ್ದೇನೆ. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ನಾನು ಒಪ್ಪಿದ್ದೇನೆ. ನಾನು ಬಿಜೆಪಿ ನಾಯಕರ ವಿರುದ್ಧ ಮಾತನಾಡುವುದಿಲ್ಲ, ಕಾಂಗ್ರೆಸ್ – ಜೆಡಿಎಸ್ ವಿರುದ್ಧ ಮಾತನಾಡುತ್ತೇನೆ.
ಬಿ.ಎಸ್.ಯಡಿಯೂಪರಪ್ಪ ವಿರುದ್ಧವೂ ಮಾತನಾಡುವುದಿಲ್ಲ, ಅವರನ್ನ ಯಾಕೆ ಬೈಯ್ಯಲಿ. ಅವರು ರಾಜಕೀಯದಿಂದ ದೂರಾಗಿದ್ದಾರೆ. ಅವರೇನು ಮುಂದೆ ಸಿಎಂ ಆಗಲ್ವಲ್ಲ. ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದಾರೆ ಎಂದರು.
“ಯತ್ನಾಳ್ ನಾಯಕರಲ್ಲ” ಎಂಬ ಅರುಣ್ ಸಿಂಗ್ ಅವರ ಹೇಳಿಕೆ ಬಗ್ಗೆ ಮಾತನಾಡಿದ ಯತ್ನಾಳ್, ಅವರು ಆ ರೀತಿ ಹೇಳಿದ್ದು ನಿಜ, ರಾಜಕೀಯವಾಗಿ ತಪ್ಪು ಕಲ್ಪನೆ ಆಗಿರುತ್ತದೆ.
ಯಾರೋ ಏನೋ ಹೇಳಿರುತ್ತಾರೆ. ಯತ್ನಾಳ್ ಏನು ಇಲ್ಲ, ಹಾಗೇ ಹೀಗೆ ಎಂದು ಹೇಳಿರುತ್ತಾರೆ. ಆದ್ರೆ ಯತ್ನಾಳ್ ಏನು ಎಂದು ಈಗ ಅವರಿಗೆ ಗೊತ್ತಾಗಿದೆ.
ಈ ಸತ್ಯವನ್ನು ಒಪ್ಪಿಕೊಂಡು ನಮ್ಮನ್ನ ಪ್ರೀತಿಯಿಂದ ಆಲಿಂಗನ ಮಾಡಿ ಪ್ರೀತಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.