Shoaib Akhtar | ಭಾರತದ ಸೋಲು ಅತ್ಯಂತ ಮುಜುಗರ
ಭಾರತದ ಸೋಲು ಅತ್ಯಂತ ಮುಜುಗರ ತರಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಟಿ 20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯವಾಗಿ ಸೋಲು ಅನುಭವಿಸಿದೆ.
ಈ ಬಗ್ಗೆ ಮಾತನಾಡಿದ ಅಖ್ತರ್, ಫೈನಲ್ ನಲ್ಲಿ ಭಾರತವನ್ನು ಎದುರಿಸಲು ಪಾಕಿಸ್ತಾನ ಎದುರು ನೋಡುತ್ತಿತ್ತು.
ಆದರೆ ಅದು ಸಾಧ್ಯವಾಗುವುದಿಲ್ಲ. ಭಾರತದ ಸೋಲು ಅತ್ಯಂತ ಮುಜುಗರ ತರಿಸಿದೆ.

ಟೀಂ ಇಂಡಿಯಾ ಅತ್ಯಂತ ಭಯಂಕರವಾಗಿ ಆಡಿದರೂ sಸೋಲುವುದಕ್ಕೆ ಅರ್ಹವಾಗಿತ್ತು.
ಭಾರತ ತಂಡದಲ್ಲಿ ಎಕ್ಸ್ ಪ್ರೆಸ್ ವೇಗಿ ಇರಲಿಲ್ಲ. ಒಂದು ಪಂದ್ಯದಲ್ಲೂ ಚಾಹಲ್ ಆಡಲಿಲ್ಲ.
ಭಾರತದ ಬೌಲಿಂಗ್ ತುಂಬಾ ಕೆಟ್ಟದಾಗಿತ್ತು. ಆಕ್ರಮಣ ಶೀಲತೆಯ ಕೊರತೆಯೂ ಇತ್ತು ಎಂದು ಭಾರತದ ಸೋಲಿಗೆ ಕಾರಣಗಳನ್ನು ಉಲ್ಲೇಖಿಸಿದರು.
ಅಂದಹಾಗೆ ಈ ಹಿಂದೆ ಶೋಯೆಬ್ ಅಖ್ತರ್ “ ಸೆಮೀಸ್ ಹಂತದಲ್ಲಿ ಭಾರತ ತಂಡ ಮನೆಗೆ ತೆರಳಿದೆ ಎಂದು ಭವಿಷ್ಯ ನುಡಿದಿದ್ದರು.








