Devadasi : ಅನಾರೋಗ್ಯ ಕಳೆಯಲೆಂದು ಯುವತಿಗೆ ದೇವದಾಸಿ ಪಟ್ಟ : ಯುವತಿ ರಕ್ಷಣೆ…
ಯುವತಿಗೆ ಅನಾರೋಗ್ಯ ಕಳೆಯಲೆಂದು ದೇವದಾಸಿ ಪಟ್ಟ ಕಟ್ಟಿದ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ 21 ವರ್ಷದ ಯುವತಿಯ ಅನಾರೋಗಕ್ಕೆ ದೇವರ ಶಾಪವೇ ಕಾರಣ ಎಂಬ ಮೂಡನಂಬಿಕೆಗೆ ಒಳಗಾದ ಗ್ರಾಮಸ್ಥರು ಯುವತಿಗೆ ದೇವದಾಸಿ ಪಟ್ಟ ಕಟ್ಟಿದ್ದಾರೆ.
ದೇವದಾಸಿ ಮಾಡಿದರೆ ಗುಣಮುಕ್ತಳಾಗ್ತಾಳೆ ಎಂದು ತಿಳಿದ ಗ್ರಾಮಸ್ಥರು 7 ತಿಂಗಳ ಹಿಂದೆ ಜಿಲ್ಲೆಯ ಪ್ರಮುಖ ದೇವಸ್ಥಾನಕ್ಕೆ ಯುವತಿಯನ್ನ ಕರೆದ್ಯೊಯ್ದು ದೇವದಾಸಿ ಮಾಡಿದ್ದಾರೆ. ಯುವತಿ ನಡುವಳಿಕೆ, ಅಸ್ವಾಭಾವಿಕ ಚಟುವಟಿಕೆ ಕಂಡು ದಲಿತ ಮುಖಂಡರೊಬ್ಬರು ಮಹಿಳೆ, ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.
ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ 7 ತಿಂಗಳು ಹಿಂದೆ ಯುವತಿಯನ್ನ ದೇವದಾಸಿಗೆ ಬಿಟ್ಟಿರುವ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ಯವತಿಯನ್ನು ರಕ್ಷಿಸಿ ಒನ್ ಸ್ಟಾಪ್ ಸೆಂಟರ್ ಗೆ ಕರೆತರಲಾಗಿದೆ.
Devadasi: Devadasi patta for a young woman to spend her illness