IND vs Sri : ಇಂದು ಭಾರತ, ಲಂಕಾ ಮೊದಲ ಟಿ20 ಮ್ಯಾಚ್
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್ನಲ್ಲಿ ಪೂರ್ಣ ಪ್ರಮಣದ ನಾಯಕನಾಗಿ ಆಡುವ ಅವಕಾಶ ಸಿಕ್ಕಿದ್ದು ಇಂದು ಭಾರತ ತಂಡ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. ರನ್ ಯಂತ್ರ ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಆಡಲಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ತವರಿನಲ್ಲಿ ಹೊಸ ಸವಾಲು ಎದುರಿಸಲಿದೆ.
ನಾಯಕ ಹಾರ್ದಿಕ್ ಪಾಂಡ್ಯ ಅವರ ದೂರದೃಷ್ಟಿ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವು ಕಂಡಿತು. ಈ ಟಿ20 ಸರಣಿ 2024ರ ಟಿ20 ವಿಶ್ವಕಪ್ ತಯಾರಿಗೆ ಸಹಾಯ ಮಾಡಲಿದೆ.
ತಂಡದ ಉದ್ದೇಶ ಮತ್ತು ನಿರ್ಭಿತಿ ಕ್ರಿಕೆಟ್ ಈಗಿನ ಟಿ20 ತಂಡದಲ್ಲಿ ಕಾಣದಿರುವುದು ತಂಡದ ಸಮಸ್ಯೆಯಾಗಿದೆ.
ತಂಡದ ಆಟಗಾರರು ವೈಯಕ್ತಿಕ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಟಿ20 ವಿಶ್ವಕಪ್ ಸೋಲಿಗೂ ಕಾರಣವಾಯಿತು.
ತಾರಾ ವಿಕೆಟ್ ಕೀಪರ್ ರಿಷಭ್ ಪಂತ್ ಅಪಘಾತಕಕ್ಕೀಡಾಗಿರುವುದರಿಂದ
ಪಂತ್ ಲಂಕಾ ಸರಣಿಗೆ ಆಯ್ಕೆಯಾಗಿರಲಿಲ್ಲ. ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಆರಂಭಿಕ ಬ್ಯಾಟರ್ಗಳಾಗಿ ಕಣಕ್ಕಿಳಿಯಲಿದ್ದು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.
ಮುಂದಿನ ಟಿ20 ವಿಶವಕಪ್ಗೆ 18 ತಿಂಗಳು ಬಾಕಿ ಇದ್ದು ಈ ಜೋಡಿ ರನ್ ಮಳೆ ಸುರಿಸಬೇಕಿದೆ. ಮತ್ತೋರ್ವ ಯುವ ಬ್ಯಾಟರ್ ಶುಭಮನ್ ಗಿಲ್ ಆರಂಭಿಕನ ಸ್ಥಾನಕ್ಕೆ ಮತ್ತೊಂದು ಆಯ್ಕೆಯಾಗಿದೆ.
ಮೂರನೆ ಕ್ರಮಾಂಕದಲ್ಲಿ ಹೊಡಿಬಡಿ ಆಟಗಾರ ಸೂರ್ಯ ಕುಮಾರ್ ಯಾದವ್ ಆಡಲಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ 6 ಬೌಲರ್ಗಳನ್ನು ಬಳಸಿದರೆ ಆಲ್ರೌಂಡರ್ ದೀಪಕ್ ಹೂಡಾಗೆ ಅವಕಾಶ ಕೊಡಬಹುದಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಮತ್ತು ರಾಹುಲ್ ತ್ರಿಪಾಠಿ ನಡುವೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ.
ತ್ರಿವಳಿ ವೇಗಿಗಳಾದ ಆರ್ಷದೀಪ್, ಹರ್ಷಲ್ ಪಟೇಲ್ ಮತ್ತು ಉಮ್ರಾನ್ ಮಲ್ಲಿಕ್ ಕಣಕ್ಕಿಳಿಯಲಿದ್ದು ಶಿವಂ ಮಾವಿ ಮತ್ತು ಮುಕೇಶ್ ಕುಮಾರ್ ಹೆಚ್ಚುವರಿ ಆಯ್ಕೆಗಳಾಗಿವೆ.
ವಾಚಿಂಗ್ಟನ್ ಸುಂದರ್ ಮತ್ತು ಅಕ್ಸರ್ ಪಟೇಲ್ ಜೊತೆ ಇನ್ನಷ್ಟು ಆಲ್ರೌಂಡರ್ಗಳನ್ನು ಬಳಸಿಕೊಳ್ಳಬಹುದು. ಸ್ಪಿನ್ನರ್ ಯಜ್ವಿದಂರ್ ಚಾಹಲ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ವಿರುದ್ಧ ತವರಿನಲ್ಲಿ ಆಡುತ್ತಿದ್ದರೂ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡವನ್ನು ಕಡೆಗಣಿಸುವಂತಿಲ್ಲ. ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿದ ಆಟಗಾರರು ತಂಡದಲ್ಲಿದ್ದಾರೆ.
ಆವಿಷ್ಕಾ ಫೆರ್ನಾಡೊ, ಚಾಮಿಕಾ ಕರುಣರತ್ನೆ ಮತ್ತು ಸಮರವಿಕ್ರಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಫೆರ್ನಾಂಡೊ ಮತ್ತು ಕರುಣರತ್ನೆ ಇತ್ತಿಚೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.ಮಧ್ಯಮ ಕ್ರಮಾಂಕದಲ್ಲಿ ರಾಜಪಕ್ಸೆ ಪ್ರಮುಖ ಬ್ಯಾಟರ್ ಆಗಿದ್ದಾರೆ.