ಬ್ಯಾಂಕ್ ವಂಚನೆ ಪ್ರಕರಣ- ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ, ಜೂನ್ 18: ಭಾರತೀಯ ಜನತಾ ಪಕ್ಷದ ಮುಖಂಡ ಮೋಹಿತ್ ಕಾಂಬೋಜ್, ಅಲಿಯಾಸ್ ಮೋಹಿತ್ ಭಾರತೀಯ ಮತ್ತು ಇತರ ನಾಲ್ವರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿದೆ. ಶ್ರೀ ಕಾಂಬೋಜ್ ಈ ಪ್ರಕರಣದಲ್ಲಿ ತನ್ನ ಸಾಲವನ್ನು ಒಂದೇ ಬಾರಿ ಇತ್ಯರ್ಥಪಡಿಸುವ ಸಲುವಾಗಿ 30 ಕೋಟಿ ರೂ ಗೆ ಸಲ್ಲಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಬ್ಯಾಂಕ್ ಹೇಳಿದೆ. ಕೆಲವು ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ. ಇದೀಗ ಸಿಜೆಐ ಬಿಜೆಪಿ ನಾಯಕ, ಇತರ ನಾಲ್ವರ ವಿರುದ್ಧ 67 ಕೋಟಿ ರೂ ವಂಚನೆ ಪ್ರಕರಣ ಧಾಖಲಿಸಲು ಸಿ ಬಿ ಐ ನಿರ್ಧಾರ ಮಾಡಿದೆ. ಮೋಹಿತ್ ಕಾಂಬೋಜ್ ಬಿಜೆಪಿ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಏನಿದು ಪ್ರಕರಣ:
ತಮ್ಮ ಕೊನೆಯ ಹೆಸರನ್ನು ಭಾರ್ತಿಯಾ ಎಂದು ಬದಲಾಯಿಸಿರುವ ಶ್ರೀ ಕಾಂಬೋಜ್, ಮೆವ್ಯಾಸ್ ಅವ್ಯಾನ್ ಓವರ್ಸೀಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಖಾತರಿಗಾರರಾಗಿದ್ದಾರೆ. ಇವರು 2013 ರಲ್ಲಿ ಬ್ಯಾಂಕ್ ಆಫ್ ಇಂಡಿಯಾದಿಂದ 60 ಕೋಟಿ ರೂ ಸಾಲ ಪಡೆದು, 2018 ರಲ್ಲಿ ಬಾಕಿ ಮೊತ್ತದ ವಿರುದ್ಧ 30 ಕೋಟಿ ರೂ.ಗಳನ್ನು ನೀಡಿ , ಬ್ಯಾಂಕ್ ನ ನಷ್ಟಕ್ಕೆ ಕಾರಣವಾಗಿದ್ದರು. ಅಲ್ಲದೇ ಬ್ಯಾಂಕ್ ಸಲ್ಲಿಸಿದ ಹಣದ ಮೂಲದಲ್ಲಿ ವ್ಯತ್ಯಾಸಗಳನ್ನು ತೋರಿಸಿದ್ದು, ಈ ವಿಷಯದಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳ ಪಾತ್ರವೂ ಇದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಮಾರ್ಚ್ 2015 ರಲ್ಲಿ, ಕಂಪನಿಯ ಖಾತೆಯನ್ನು ನಿರ್ವಹಿಸದ ಆಸ್ತಿ (ಏನ್.ಪಿ.ಏ ) ಎಂದು ಘೋಷಿಸಲಾಯಿತು. ಆದರೆ ನಿರ್ದೇಶಕರೊಬ್ಬರ ಹೆಸರಿನಲ್ಲಿ ಫ್ಲಾಟ್ ಖರೀದಿಸಲು ಕಂಪನಿಯು ಹಣವನ್ನು ಬೇರೆಡೆಗೆ ತಿರುಗಿಸಿದೆ ಎಂದು ಬ್ಯಾಂಕಿನ ಆಂತರಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಬ್ಯಾಂಕ್ ಸಿಬಿಐಗೆ ನೀಡಿದ ತನ್ನ ದೂರಿನಲ್ಲಿ ತಿಳಿಸಿದೆ. ಕಂಪನಿಯು 2014 ರಿಂದ ತನ್ನ ಹಣಕಾಸು ಹೇಳಿಕೆಗಳನ್ನು ಸಲ್ಲಿಸಿಲ್ಲ ಎಂದು ಬ್ಯಾಂಕ್ ಆರೋಪಿಸಿದೆ.
ಕಂಪನಿಯ ಖಾತೆಯನ್ನು ಎನ್ಪಿಎ ಎಂದು ಟ್ಯಾಗ್ ಮಾಡಿದ ನಂತರ ಅದರ ಅನೇಕ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದು ಬ್ಯಾಂಕ್ ತಿಳಿಸಿದ್ದು, ರಾಜೀನಾಮೆ ನೀಡಿದವರಲ್ಲಿ 2015 ರ ಮೇ 27 ರಂದು ನಿರ್ಗಮಿಸಿದ ಶ್ರೀ ಕಾಂಬೋಜ್, 2013 ರಲ್ಲಿ ಅಭಿಷೇಕ್ ಕಪೂರ್, 2014 ರಲ್ಲಿ ನರೇಶ್ ಕಪೂರ್ ಮತ್ತು 2016 ರಲ್ಲಿ ಜಿತೇಂದ್ರ ಕಪೂರ್ ಸೇರಿದ್ದಾರೆ. ಕಂಪನಿ, ಅದರ ಪ್ರವರ್ತಕರು ಮತ್ತು ನಿರ್ದೇಶಕರು ಬ್ಯಾಂಕನ್ನು ವಂಚಿಸುವ ಅಪ್ರಾಮಾಣಿಕ ಉದ್ದೇಶದಿಂದ ಕ್ರಿಮಿನಲ್ ಅಪರಾಧ ಮಾಡಿದ್ದಾರೆ ಮತ್ತು ಬ್ಯಾಂಕನ್ನು ನಷ್ಟಕ್ಕೆ ತಳ್ಳಲು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆರೋಪಿಗಳು ಮಾಡಿದ ತಪ್ಪಾದ ಕೃತ್ಯವು ಬ್ಯಾಂಕಿಗೆ 67.22 ಕೋಟಿ ರೂ.ಗಳಿಗಿಂತ ಹೆಚ್ಚು ನಷ್ಟವನ್ನುಂಟು ಮಾಡಿದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಆರೋಪಿಸಿದೆ.
ಬ್ಯಾಂಕಿನ ದೂರಿನ ಆಧಾರದ ಮೇಲೆ ಸಿಬಿಐ ಮೋಹಿತ್ ಕಾಂಬೋಜ್, ಅಭಿಷೇಕ್ ಕಪೂರ್, ನರೇಶ್ ಕಪೂರ್, ಸಿದ್ಧಾಂತ್ ಬಾಗ್ಲಾ, ಇರ್ತೇಶ್ ಮಿಶ್ರಾ, ಮೆ / ಅವ್ಯಾನ್ ಓವರ್ಸೀಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಕೆಬಿಜೆ ಹೊಟೇಲ್ ವಿರುದ್ಧ ಮೋಸ, ಖೋಟಾ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಕಾಂಬೋಜ್ ಮಾತನಾಡಿ ನಾನು ಸಿಬಿಐ ತನಿಖೆಗೆ ಸಹಕರಿಸುತ್ತೇನೆ. ನಾನು ಅವರನ್ನು ಸಂಪೂರ್ಣವಾಗಿ ನಂಬುತ್ತೇನೆ. ಎಂದು ಹೇಳಿದ್ದಾರೆ.