ಬೆಂಗಳೂರಿನ ಮಹಿಳೆ ಮನೆ ಬಾಗಿಲಿಗೆ ಬಂದ ಪೋಸ್ಟ್ ಓದಿ 9 ಲಕ್ಷ ರೂ. ಕಳೆದುಕೊಂಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಎಸ್.ಆಸ್. ಕಾರ್ಡನ್ ನಿವಾಸಿ ಮಹಿಳೆಯೊಬ್ಬರ ಮನೆಗೆ ಬೆಂಗಳೂರು ಜೂ. 16ರಂದು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಒಂದು ಪತ್ರ ಬಂದಿದೆ. ಈ ಸಂದರ್ಭದಲ್ಲಿ ಪತ್ರದಲ್ಲಿ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗಿ ವಿಜಯ್ ಎಂಬಾತ ತನ್ನ ಪರಿಚಯ ಮಾಡಿಕೊಂಡು ಲಕ್ಕಿ ಡ್ರಾಮದಲ್ಲಿ ಬಂದಿರುವ ಹಣ ವರ್ಗಾಯಿಸಲು ಶುಲ್ಕವಾಗಿ ಶ್ರುತಿ ಅವರಿಂದ ಹಂತ ಹಂತವಾಗಿ 9 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಹಾಕಿಸೊಂಡು ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಶ್ರುತಿ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.