ಬಲೂನ್ ಗೆ ಅನಿಲ ತುಂಬುವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, 9 ಜನ ಮಕ್ಕಳು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಬಲೂನ್ ಮಾರಾಟಗಾರ ಸಾವನ್ನಪ್ಪಿದ್ದು, 9 ಮಕ್ಕಳು ಗಾಯಗೊಂಡಿದ್ದಾರೆ. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಾಮ ನಾಮದೇವ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಲ್ಲದೇ, ಶೇ. 70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ 9 ಜನ ಮಕ್ಕಳಲ್ಲಿ ಓರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. 5 ರಿಂದ 12 ವರ್ಷ ವಯಸ್ಸಿನೊಳಗಿನ ಮಕ್ಕಲಿಗೆ ಗಾಯಗಳಾಗಿವೆ ಎನ್ನಲಾಗಿದೆ.
ತವರ್ಜಾ ಕಾಲೋನಿಯಲ್ಲಿನ ಮಸೀದಿಯ ಹೊರಗೆ ಆತ ಬಲೂನ್ ಮಾರುತ್ತಿದ್ದ. ಹೀಗಾಗಿ ಮಕ್ಕಳು ಗಲಾಟೆ ಮಾಡುತ್ತಿದ್ದರು. ಹೀಗಾಗಿ ನಮಾಜ್ ಮಾಡುತ್ತಿದ್ದವರು ಆತನನ್ನು ಸ್ತಲಾಂತರಿಸುವಂತೆ ಕೇಳಿದ್ದರು. ಆಗ ಆ ವ್ಯಕ್ತಿ ಮಸೀದಿಯ ಹಿಂದಿನ ಲೇನ್ ಗೆ ಹೋಗಿದ್ದ. ಅಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.