ಪಾಲಕ್ಕಾಡ್ : ಭೀಕರ ಅಪಘಾತದಲ್ಲಿ ವ್ಯಕ್ತಿಯೊಬ್ಬರ ತಲೆ ಕಟ್ ಆಗಿರುವ ಘಟನೆಯೊಂದು ನಡೆದಿದೆ.
ನಿಯಂತ್ರಣ ತಪ್ಪಿದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನ ರುಂಡ ಬೇರ್ಪಟ್ಟು ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಬೈಕ್ ಸವಾರನ ರುಂಡ ಕತ್ತರಿಸಿದೆ. ಅಲ್ಲದೇ, ದೇಹ ಕೂಡ ಪೀಸ್ ಪೀಸ್ ಆಗಿದೆ. ಆದರೆ, ಈ ರುಂಡ ಬರೋಬ್ಬರಿ ಮೂರು ಗಂಟೆಗಳ ನಂತರ ಪತ್ತೆಯಾಗಿದೆ.
ನಲ್ಲೆಪ್ಪಿಳ್ಳಿ ಮಾಟ್ಟುಮಂದ ಮರುದಂಪಳ್ಳಿ ನಿವಾಸಿ ಮಣಿಕಂಠನ್ (43) ಸಾವನ್ನಪ್ಪಿದ ದುರ್ದೈವಿ. ಅಂಬಾಟ್ಟುಪಾಳಯಂ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ಹತ್ತಿರ ಈ ಘಟನೆ ನಡೆದಿದೆ. ಸಾವನ್ನಪ್ಪಿದ ದುರ್ದೈವಿ ಮೀನು ವ್ಯಾಪಾರ ಮಾಡುತ್ತಿದ್ದರು. ಹೀಗಾಗಿ ಅವರು ಮೀನು ತೆಗೆದುಕೊಂಡು ಚಿಟ್ಟೂರಿಗೆ ಹೊರಟಿದ್ದರು.
ಈ ವೇಳೆ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ದ್ವಿಚಕ್ರ ವಾಹನ ದೂರಕ್ಕೆ ಹೋಗಿ ಬಿದ್ದಿದೆ. ಅಲ್ಲದೇ, ಬೈಕ್ ಸುಟ್ಟು ಭಸ್ಮವಾಗಿದೆ. ಕಾಲೇಜು ವಿದ್ಯಾರ್ಥಿಗಳು ಕಾರಿನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.