ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಆಶೀರ್ವಾದ ಮಾಡಿದ್ದಾರೆ. ಆದರೆ, ಕಾಂಗ್ರೆಸ್ 40 ಕ್ಷೇತ್ರಗಳನ್ನು ಗೆಲ್ಲಲಿ ಎಂಬುವುದು ನಮ್ಮ ಪ್ರಾರ್ಥನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ, ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ 40ರ ಗಡಿ ದಾಟುವುದಿಲ್ಲ. ಏಕೆಂದರೆ ಜನರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ನನ್ನ ಧ್ವನಿಯನ್ನು ಬಲಪಡಿಸಿದ್ದಾರೆ. ಹೀಗಾಗಿ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಗೊಂದಲದಲ್ಲಿಯೇ ಇದೆ. ಪ್ರಜಾಪ್ರಭುತ್ವದ ಕತ್ತನ್ನು ಕಾಂಗ್ರೆಸ್ ಹಿಸುಕಿದೆ. ಮಾಧ್ಯಮಕ್ಕೆ ಬೀಗ ಹಾಕಲು ಯತ್ನಿಸಿದೆ. ಅದರ ಕಾರ್ಯ, ಚಿಂತನೆ ಎಲ್ಲವೂ ಹಲೆಯದು. ಆ ಪಕ್ಷ ಶತ್ರುಗಳಿಗೆ ಭೂಮಿ ನೀಡಿದೆ. ಒಬಿಸಿಗೆ ಮೀಸಲಾತಿ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ಗೆ ನೀತಿಯೂ ಇಲ್ಲ, ನಾಯಕನೂ ಇಲ್ಲ. ಅದು ಗೌಣವಾಗಿ ಬಾರತೀಯ ಸಂಸ್ಕಿತಿ ನೋಡಿದೆ. ಮುಂದಿನ ದಿನಗಳಲ್ಲಿ ಈ ಪರಿಣಾಮವನ್ನು ಅದು ಅನುಭವಿಸಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.