ನಟಿ ಶ್ರೀಲೀಲಾ ಅವರು ಅನಾಥ ಮಕ್ಕಳನ್ನು ದತ್ತು ಪಡೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶ್ರೀಲೀಲಾ ಅವರು ಸಿನಿಮಾ ಗೆಲ್ಲಲಿ, ಸೋಲಲಿ ಯಾವುದಕ್ಕೂ ಹಿಗ್ಗುತ್ತಿರಲಿಲ್ಲ ಹಾಗೂ ಕುಗ್ಗುತ್ತಿರಲಿಲ್ಲ. ಆದರೆ, ಅವರ ಕಾರ್ಯ ಇಡೀ ರಾಜ್ಯದ ಜನರೇ ಮೆಚ್ಚುಗೆ ವ್ಯಕ್ತಪಡಿಸುವಂತಿದೆ. ಶ್ರೀಲೀಲಾ ಅವರು ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ನೆರವಾಗಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕನ್ನಡದ ಈ ಹುಡುಗಿ ಏಕಾಏಕಿ ಟಾಲಿವುಡ್ ನಲ್ಲಿ ಭರ್ಜರಿ ಹೆಸರು ಮಾಡಿದ್ದಾರೆ. . ಹತ್ತತ್ತು ಸಿನಿಮಾ ಒಪ್ಪಿಕೊಂಡು, ಟಾಪ್ ಸ್ಟಾರ್ಸ್ ಜೊತೆ ಹೆಜ್ಜೆ ಹಾಕಿ ಸೆನ್ಸೇಶನಲ್ ಹೀರೋಯಿನ್ ಪಟ್ಟ ಏರಿದ್ದಾರೆ. ರಶ್ಮಿಕಾ ಬಾಲಿವುಡ್ಗೆ ಹೋಗಿದ್ದು ಶ್ರೀಲೀಲಾ ಹಾದಿಗೆ ಹೂವು ಹಾಸಿದಂತಾಗಿದ್ದು, ಸದ್ಯ ಈ ಹುಡುಗಿ ಇಬ್ಬರು ಅನಾಥ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದಾರೆ. ಹೀಗಾಗಿ ನಿಜವಾದ ನಾಯಕಿ ನಟಿ ನೀನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.