ಬೆಂಗಳೂರು: ತನ್ನ ಪ್ರಿಯತಮೆ ಕೈ ಕೊಟ್ಟಿದ್ದಾಳೆಂಬ ಕಾರಣಕ್ಕೆ ಪ್ರಿಯಕರನೊಬ್ಬ ಆಯುಧದಿಂದ ಚುಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಇಲ್ಲಿಯ ನಂದಿನ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಮೂಲದ ಚೇತನ್ (21) ಸಾವನ್ನಪ್ಪಿದ ದುರ್ದೈವಿ. ಯುವತಿ ಹಾಗೂ ಚೇತನ್ ಮಧ್ಯೆ ಕಳೆದ ಲವ್ ಆಗಿತ್ತು. ಆದರೆ, ಈ ವಿಷಯ ಯುವತಿಯ ಕಡೆಯವರಿಗೆ ಗೊತ್ತಾಗಿತ್ತು. ಆದರೆ, ಯುವತಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ.
ಹೀಗಾಗಿ ಯುವತಿ, ಮನೆಯಲ್ಲಿ ಒಪ್ಪುತ್ತಿಲ್ಲ. ನೀನು ಬೇರೆ ಮದುವೆಯಾಗು ಎಂದು ಹೇಳಿದ್ದಾರೆ. ಇದರಿಂದಾಗಿ ಮನನೊಂದು ಭಗ್ನ ಪ್ರೇಮಿ, ಮನನೊಂದು ಮನೆ ಬಿಟ್ಟಿದ್ದಾನೆ. ನಂತರ ಹುಡುಗಿ ಮನೆ ಬಲಿ ಹೋಗಿ ಹುಡುಗಿ ಸಿಗದಿದ್ದರೆ ಸಾಯುವುದಾಗಿ ಹೇಳಿದ್ದಾನೆ. ಯುವತಿ ಕಡೆಯವರು ಇದನ್ನು ಆತನ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದು ಪೋಷಕರು ನೋಡುವಷ್ಟರಲ್ಲಿ ಆತ ಆಟೋದಲ್ಲಿ ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.