ಮಂಡ್ಯ: ಅವಳಿ ಮಕ್ಕಳು ಐಸ್ ಕ್ರೀಮ್ ತಿಂದ ನಂತರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಐಸ್ ಕ್ರೀಮ್ ತಿಂದ ನಂತರ ಸಾವನ್ನಪ್ಪಿರುವ ದುರ್ದೈವಿ ಮಕ್ಕಳು ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ತಾಯಿಯು ಮಕ್ಕಳಿಗೆ ಐಸ್ ಕ್ರೀಂ ತಿನ್ನಿಸಿದ್ದರು. ಐಸ್ ಕ್ರೀಮ್ ನ್ನು ತಳ್ಳುವ ಗಾಡಿಯಲ್ಲಿ ಬರುವ ವ್ಯಕ್ತಿಯಿಂದ ಕೊಡಿಸಿದ್ದರು. ಆದರೆ, ಐಸ್ ಕ್ರೀಮ್ ತಿನ್ನುತ್ತಿದ್ದಂತೆ ಮಕ್ಕಳು ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್ ಕ್ರೀಂ ತಿಂದಿದ್ದರು. ಆದರೆ, ಐಸ್ ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿರಲಿಲ್ಲ. ಆದರೆ, ಈ ಮಕ್ಕಳು ಮಾತ್ರ ಸಾವನ್ನಪ್ಪಿದ್ದಕ್ಕೆ ಸಂಶಯ ವ್ಯಕ್ತವಾಗುತ್ತಿದೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.