ಇಡೀ ಪ್ರಪಂಚದಲ್ಲೇ ಸಂಚಲನ ಮೂಡಿಸಿದ್ದ, ದೇಸಿ ಕ್ರಿಕೇಟ್ ನಲ್ಲಿ ಕಳ್ಳಾಟ ಕಂಡು ಕಪ್ಪು ಮಚ್ವೆ ಮೂಡಿತ್ತು. ಇದೇ ಮೋಸದಾಟದಲ್ಲಿ ಭಾಗಿಯಾಗಿದ್ದ, ಮುಂಬೈ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ಅಂಕಿತ್ ಚವಾಣ್, ತನಗೆ ವಿಧಿಸಿರುವ ಆಜೀವ ನಿಷೇಧ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಅನ್ನು ವಿನಂತಿಸಿಕೊಂಡಿದ್ದಾರೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ತಂಡದಲ್ಲಿದ್ದ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಾಂಡಿಲ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಆದರೆ 2015ರಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ದೆಹಲಿ ನ್ಯಾಯಾಲಯ ಮೂವರೂ ಆಟಗಾರ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಟ್ಟಿತ್ತು.
ಈ ಮೂವರು ಆಟಗಾರರಲ್ಲಿ ಶ್ರೀಶಾಂತ್ ಆಜೀವ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ಬಳಿಕ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು 7 ವರ್ಷಗಳಿಗೆ ಕಡಿತಗೊಳಿಸಲಾಗಿತ್ತು. ಬೌಲರ್ ಶ್ರೀಶಾಂತ್ ನಿಷೇಧ ಇದೇ ಸೆಪ್ಟೆಂಬರ್ಗೆ ಕೊನೆಗೊಳ್ಳಲಿದೆ. ಹೀಗಾಗಿ ಅವರ ಹೆಸರನ್ನು ಕೇರಳ ರಣಜಿಯ ಸಂಭಾವ್ಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈಗ ಅಂಕಿತ್ ಕೂಡ ಆಜೀವ ನಿಷೇಧ ಕಡಿಮೆಗೊಳಿಸುವಂತೆ ಬಿಸಿಸಿಐ ಮತ್ತು ಮುಂಬೈ ಅಸೋಸಿಯೇಶನ್ಗೆ ಮನವಿ ಮಾಡಿದ್ದಾರೆ ಆಜೀವ ನಿಷೇಧ ಮರುಪರಿಶೀಲಿಸುವಂತೆ ಚವಾಣ್ ಎಂಸಿಎಗೆ ಮನವಿ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2015ರಲ್ಲೂ ಚವಾಣ್ ಆಜೀವ ನಿಷೇಧ ಕಡಿಮೆಗೊಳಿಸಲು ಮನವಿ ಸಲ್ಲಿಸಿದ್ದರು. ಒಟ್ಟಿನಲ್ಲಿ ಐಪಿಎಲ್ ಕಳ್ಳಾಟದಲ್ಲಿ ಭಾಗಿಯಾಗಿದ್ದ ಆಟಗಾರರು ಮತ್ತೆ ಕ್ರಿಕೆಟ್ ಆಡಲು ಮಾಟಿದ ತಪ್ಪನ್ನು ನೆನೆದು ಪರಿತಪಿಸುತ್ತಿದ್ದಾರೆ.