ADVERTISEMENT
Thursday, July 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಎಸ್ ಸ್ಪೆಷಲ್

ತಿರುಪತಿಗೆ ಯಾವ ದಿನ ಹೋದರೆ ಉತ್ತಮ?

Which Day is Best to Visit Tirupati?

Shwetha by Shwetha
December 27, 2024
in ಎಸ್ ಸ್ಪೆಷಲ್, Newsbeat, Saaksha Special
Share on FacebookShare on TwitterShare on WhatsappShare on Telegram

ಇದು ಶ್ರೀ ವೆಂಕಟೇಶ್ವರನ ಭಕ್ತರು ತಿಳಿದುಕೊಳ್ಳಲೇಬೇಕಾದ ಒಂದು ಮಹತ್ವಪೂರ್ಣ ಸಂಗತಿ. ಗೋವಿಂದ ಗೋವಿಂದ ಅನ್ನುವ ಉದ್ಗೋಶದ ನಡುವೆ ಅದೆಷ್ಟು ಸಲ ಕೈಯೆತ್ತಿ ಮುಗಿದು ಬಂದಿದ್ರೂ, ತಿರುಪತಿ ತಿರುಮಲ ಕ್ಷೇತ್ರದ ಇದೊಂದು ಮಹತ್ವದ ವಿಶೇಷವಾದ ಅಂಶ ಬಹುತೇಕ ಮಂದಿಗೆ ಗೊತ್ತೇ ಇಲ್ಲ..

ನೀವೆಷ್ಟು ಬಾರಿ ತಿರುಪತಿಗೆ ಹೋಗಿ ಬಂದಿದ್ರೂ ಇದೊಂದು ಸಂಗತಿ ತಿಳಿಯದೆ ಹೋದ ಕೆಲಸ ಆಗಿರೋದೇ ಇಲ್ಲ. ಎಷ್ಟೇ ಸಲ ತಿರುಪತಿಗೆ ಹೋದ್ರೂ ನಮ್ಮ ಕೆಲಸ ಯಾಕೆ ಆಗ್ತಾ ಇಲ್ಲ ಅಂತ ಕೊರಗು ಇರೋರು ಓದಲೇ ಬೇಕಾದ ವಿಷಯವಿದು.

Related posts

Enemy Issue Remedy

Astro- ಶತ್ರು  ಸಮಸ್ಯೆ ಸರ್ವನಾಶವಾಗಲು ಕೇರಳಿಯ ತಾಂತ್ರಿಕ ಈ ಬೀಜ ಮಂತ್ರವನ್ನು ಪಠಣೆ ಮಾಡಿ…!

July 23, 2026
ನುಡಿದಂತೆ ನಡೆಯಿರಿ ಸಿಎಂ ಅವರೇ- ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತನ್ನಿ:ಸಂಕಷ್ಟದಲ್ಲಿ ನಿಮ್ಮ ಜೊತೆಗಿದ್ದೆವು ಈಗ ನಮ್ಮ ಕೈ ಹಿಡಿಯಿರಿ ಷಡಕ್ಷರಿ ಪತ್ರಕ್ಕೆ ಸಿಎಂ ಅಸ್ತು ಎನ್ನುತ್ತಾರಾ!?

ನುಡಿದಂತೆ ನಡೆಯಿರಿ ಸಿಎಂ ಅವರೇ- ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತನ್ನಿ:ಸಂಕಷ್ಟದಲ್ಲಿ ನಿಮ್ಮ ಜೊತೆಗಿದ್ದೆವು ಈಗ ನಮ್ಮ ಕೈ ಹಿಡಿಯಿರಿ ಷಡಕ್ಷರಿ ಪತ್ರಕ್ಕೆ ಸಿಎಂ ಅಸ್ತು ಎನ್ನುತ್ತಾರಾ!?

July 23, 2026

ಅಂದರೆ, ತಿರುಪತಿ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಚಂದ್ರ ಕ್ಷೇತ್ರವಿದೆ, ಮತ್ತು ಈ ಚಂದ್ರ ಕ್ಷೇತ್ರದ ವಿಶೇಷ ಶಕ್ತಿ ಕೆಲವರಿಗೇ ಗೊತ್ತಿಲ್ಲ. ಹಾಗಾದರೆ, ತಿರುಪತಿ ಕ್ಷೇತ್ರದಲ್ಲಿ ಬಯಸಿದ ಸಾಧನೆ ಮತ್ತು ಶ್ರೀ ವೆಂಕಟೇಶ್ವರನ ದರ್ಶನದಲ್ಲಿ ಬಯಸಿದ ಫಲಗಳನ್ನು ಪಡೆಯಲು ಯಾವ ದಿನ ಹೊರಡುವುದು ಉತ್ತಮ ಅನ್ನೋದನ್ನ ತಿಳಿಯೋಣ.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ಗೋವಿಂದಾ ಗೋವಿಂದ ಅಂತ ಹೇಳುತ್ತಾ ಸಪ್ತಗಿರಿ ಏರಿ ಶ್ರೀನಿವಾಸನ ದರ್ಶನ ಪಡೆದರೆ ಅದೇನು ಸಮಾಧಾನ ಸಂತಸ. ಅದಿಷ್ಟೇ ರಶ್ ಇದ್ರು ಕಾಯುವಿಕೆ ಇದ್ದರೂ ವೆಂಕಟೇಶ್ವರನ ದರ್ಶನದ ಕ್ಷಣಗಳು ಅಮೋಘ. ಮತ್ತೆ ಮತ್ತೆ ಬರಬೇಕು ಅನ್ನೋ ಆಧ್ಯಾತ್ಮಿಕ ವ್ಯಾಮೋಹ ಹುಟ್ಟಿಸುವ ಸನ್ನಿಧಿ ಇದು. ಸಂಕಟ ಬಂದಾಗ ವೆಂಕಟರಮಣ ಅನ್ನೊ ಮಾತು ಸಾಮಾನ್ಯವಾಗಿ ನಾವೆಲ್ಲ ಹೇಳಿರುತ್ತೇವೆ. ಇಂಥದೊಂದು ಮಾತು ಯಾಕ್ ಬಂತು ಅಂತ ಕೇಳಿದ್ರೆ ಕಷ್ಟ ಬಂದಾಗ ಅಲ್ವೇ ಸಂಕಟ ಬರುವುದು. ಆಗಲೇ ವೆಂಕಟಗಿರಿನಾಥನ ಮೊರೆ ಹೋಗೋದು. ಆದರೆ ಈ ಮಾತು ಇಷ್ಟೊಂದು ಜನಜನಿತವಾಗಲಿಕ್ಕೆ ಬಹು ಮುಖ್ಯ ಕಾರಣವಿದೆ. ಅದುವೇ ಈ ಕ್ಷೇತ್ರದ ಕುರಿತಾದ ಒಂದು ವಿಶೇಷ ಶಕ್ತಿ.

ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಅಂದರೆ ತಿರುಮಲ ಭೂಮಿಯಲ್ಲಿರುವ ವಿಶೇಷ ಚಂದ್ರಕ್ಷೇತ್ರ. ಚಂದ್ರದೇವನ ಅತಿ ವಿಶೇಷ ಕ್ಷೇತ್ರವಿದು. ಚಂದ್ರ ಮನೋಕಾರಕ. ಕಷ್ಟ ಬಂದಾಗ ಮೊದಲು ಕುಗ್ಗೋದೆ ಮನಸ್ಸು. ಮನಸ್ಸು ಗೊಂದಲದಲ್ಲಿದ್ದಾಗ ಸೀದಾ ಹೋಗ್ಬೇಕಾಗಿರೋದೇ ಚಂದ್ರ ಕ್ಷೇತ್ರಕ್ಕೆ. ಚಂದ್ರ ಕ್ಷೇತ್ರದಲ್ಲಿ ಮಾತ್ರ ನಮ್ಮ ಮನುಕ್ಲೇಶಗಳಿಗೆ ಪರಿಹಾರ ಸಿಗಲು ಸಾಧ್ಯ. ತಿರುಪತಿ ಅಂತಹ ಚಂದ್ರ ಕ್ಷೇತ್ರವಾಗಿದೆ ಅನ್ನೋದು ನಂಬಿಕೆ. ಈ ಚಂದ್ರ ಕ್ಷೇತ್ರದ ವಿಶೇಷತೆ ಅಂದ್ರೆ ತಿರುಮಲಕ್ಕೆ ನೀವು ಸೋಮವಾರವೇ ಹೋಗೋದು ಉತ್ತಮ. ಅದರಲ್ಲೂ ಸೋಮವಾರ ತಿರುಮಲದಲ್ಲಿ ತಂಗಿದ್ದು ಮಂಗಳವಾರ ತಿಮ್ಮಪ್ಪನ ದರ್ಶನ ಪಡೆಯುವುದು ಅತ್ಯುತ್ತಮ ಕೆಲಸ. ಇದರಿಂದ ನಿಮ್ಮ ಮನಸ್ಸಿನ ಭಾರ ನಿಜಕ್ಕೂ ಕಡಿಮೆಯಾಗುತ್ತೆ. ಚಂದ್ರ ಕ್ಷೇತ್ರದ ಅಘೋಷಿತ ನಿಯಮವೇ ಇದು.

ಸೋಮವಾರ ತಂಗಿದ್ದರೆ ನಿಜಕ್ಕೂ ನಿಮ್ಮ ತೀರ್ಥ ಯಾತ್ರೆಯ ಉದ್ದೇಶ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಖಂಡಿತ ಸಿಗುತ್ತೆ. ಯಾಕಂದ್ರೆ ಸೋಮವಾರ ರಾತ್ರಿ ಚಂದ್ರಸಹ ಇಲ್ಲಿ ತಂಗುತ್ತಾನೆ. ಈ ರೀತಿ ಇಲ್ಲಿ ಚಂದ್ರ ತಂಗೋದ್ರಿಂದಲೇ ಇದನ್ನು ಚಂದ್ರ ಕ್ಷೇತ್ರ ಅಂತಲೇ ಕರೆಯಲಾಗುತ್ತೆ. ಗ್ರಹಗತಿ ಅಂತ ಏನು ಕರೆಯಲಾಗುತ್ತೆ, ಇಂತಹ ಗತಿಯನ್ನು ಪ್ರತಿ ಗ್ರಹವು ಕಾಯ್ದುಕೊಳ್ಳುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರಿಗೂ ಅವರವರ ಜನ್ಮ ನಕ್ಷತ್ರ, ಮತ್ತು ಜಾತಕ ಕುಂಡಲಿಗಳು ಅನುಗುಣವಾಗಿ ವೈಪರಿತ್ಯಗಳು ಏರಿಳಿತಗಳು ಆಗುತ್ತದೆ. ಇದರಲ್ಲಿ ಚಂದ್ರ ಗ್ರಹ ಯಾಕೆ ಮುಖ್ಯ ಅಂದ್ರೆ, ಮನುಷ್ಯನಿಗೆ ಏನೇ ವ್ಯತ್ಯಾಸಗಳಾಗಲಿ.. ಸವಾಲುಗಳಾಗಲಿ.. ಎದುರು ಇರುವ ಸಮಸ್ಯೆಗಳನ್ನು ಎದುರಿಸಬೇಕು ಅಂದ್ರೆ ಮೊದಲು ಮನಸ್ಸು ಗಟ್ಟಿಯಾಗಿ ಇರಬೇಕು. ಮನಸನ್ನ ಗಟ್ಟಿ ಅಥವಾ ದುರ್ಬಲ ಮಾಡುವ ಶಕ್ತಿ ಇರುವ ಗ್ರಹ ಅಂದ್ರೆ ಅದು ಚಂದ್ರ ಗ್ರಹ. ಈ ಚಂದ್ರ ಪ್ರತಿ ಗ್ರಹದ ಮನೆಯಲ್ಲೂ ಹೋಗ್ತಾನೆ. ಅದೇ ರೀತಿ ಪ್ರತಿ ಗ್ರಹದ ಕ್ಷೇತ್ರದಲ್ಲೂ ಸಂಚಾರ ಮಾಡುತ್ತಾನೆ. ಆ ರೀತಿ ಸಂಚಾರ ಮಾಡಿ ಅಂತಿಮವಾಗಿ ಎಲ್ಲಾದ್ರೂ ಬಂದು ತಂಗುತ್ತಾನೆ ಅಂದರೆ ಅದು ಸ್ವಗೃಹ ಚಂದ್ರ ಕ್ಷೇತ್ರದಲ್ಲಿ ಮಾತ್ರ.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ತಿರುಮಲ ಅಂತಹ ಕ್ಷೇತ್ರ ಅನ್ನೋದು ನಂಬಿಕೆ. ಹೀಗಾಗಿ ತಿರುಮಲದಲ್ಲಿ ತಂಗೋದು ಅತ್ಯುತ್ತಮ ಕೆಲಸ. ಒಂದು ರಾತ್ರಿ ಕಳೆದು ಮರುದಿನ ದರ್ಶನ ಪಡೆಯುವುದು ಅತ್ಯಂತ ಫಲಪ್ರದ ಆಗುತ್ತೆ ಅನ್ನೋ ನಂಬಿಕೆ ಇದೆ. ತಂಗೋದು ಅಂದ್ರೆ ವಾರದಲ್ಲಿ ಯಾವುದಾದರೂ ದಿನವಾದರೂ ತಂಗೋದಲ್ಲ. ತಂಗುವ ದಿನದ ಬಗ್ಗೆಯೂ ಒಂದು ನಿರ್ದಿಷ್ಟತೆ ಇದೆ. ಸೋಮವಾರ ತಂಗುವುದು ಉತ್ತಮ ಎನ್ನಲಾಗುತ್ತೆ. ಇಲ್ಲ ಹುಣ್ಣಿಮೆಯ ದಿನಗಳಲ್ಲಿ ತಿರುಪತಿಗೆ ಹೋಗೋದು ಇನ್ನೂ ಉತ್ತಮ. ಗುರುವಾರ ಪಂಚಮಿ ಚತುರ್ದಶಿ ಇದ್ದಾಗ ಉತ್ತಮ ಫಲ ಸಿಗುತ್ತೆ ಅನ್ನುವ ನಂಬಿಕೆಯೂ ಇದೆ. ಜನ್ಮ ನಕ್ಷತ್ರದಲ್ಲಿ ಚಂದ್ರ ಬರೋ ದಿನ ನೋಡ್ಕೊಂಡು ತಿರುಮಲಕ್ಕೆ ಹೋಗೋದು ಕೂಡ ಅತ್ಯುತ್ತಮ.

ShareTweetSendShare
Join us on:

Related Posts

Enemy Issue Remedy

Astro- ಶತ್ರು  ಸಮಸ್ಯೆ ಸರ್ವನಾಶವಾಗಲು ಕೇರಳಿಯ ತಾಂತ್ರಿಕ ಈ ಬೀಜ ಮಂತ್ರವನ್ನು ಪಠಣೆ ಮಾಡಿ…!

by admin
July 23, 2026
0

ಕೆಲವರ ಮನೆಯಲ್ಲಿ ಮತ್ತು ಕೇಲಸದಲ್ಲಿ ಅಂದ್ರೆ ಕೆಲವರಿಗೆ ಶತ್ರುಗಳು ಹೆಚ್ಚಾಗಿ ಇರುತ್ತಾರೆ ಹಾಗೆಯೆ ಅವರು ಏನೇ ಮಾಡಿದರೂ ಕೂಡ ಅವರನ್ನು ನೋಡಿ ಕೆಲವೊಬ್ಬರು ಸಹಿಸಿಕೊಳ್ಳುವುದಿಲ್ಲ ಹಾಗಾಗಿ ಅವರ...

ನುಡಿದಂತೆ ನಡೆಯಿರಿ ಸಿಎಂ ಅವರೇ- ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತನ್ನಿ:ಸಂಕಷ್ಟದಲ್ಲಿ ನಿಮ್ಮ ಜೊತೆಗಿದ್ದೆವು ಈಗ ನಮ್ಮ ಕೈ ಹಿಡಿಯಿರಿ ಷಡಕ್ಷರಿ ಪತ್ರಕ್ಕೆ ಸಿಎಂ ಅಸ್ತು ಎನ್ನುತ್ತಾರಾ!?

ನುಡಿದಂತೆ ನಡೆಯಿರಿ ಸಿಎಂ ಅವರೇ- ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತನ್ನಿ:ಸಂಕಷ್ಟದಲ್ಲಿ ನಿಮ್ಮ ಜೊತೆಗಿದ್ದೆವು ಈಗ ನಮ್ಮ ಕೈ ಹಿಡಿಯಿರಿ ಷಡಕ್ಷರಿ ಪತ್ರಕ್ಕೆ ಸಿಎಂ ಅಸ್ತು ಎನ್ನುತ್ತಾರಾ!?

by Shwetha
July 23, 2026
0

ಬೆಂಗಳೂರು: ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ಅಲಿಯಾಸ್ ಎನ್ ಪಿ ಎಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಅಥವಾ ಒಪಿಎಸ್ ಅನ್ನು ಮರು ಜಾರಿಗೊಳಿಸುವಂತೆ...

ಪಿಎಸ್ ಐ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್

KPSC ನೇಮಕಾತಿ ಅಕ್ರಮ: ರಾಜ್ಯ ಸರ್ಕಾರ, CBIಗೆ ಹೈಕೋರ್ಟ್ ನೋಟಿಸ್

by Shwetha
July 23, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ CBI ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

ಮೊಟ್ಟೆ ನೋಡಿ ಬಾಂಬ್ ಎನ್ನುವವರ ಜ್ಞಾನಕ್ಕೆ ಹ್ಯಾಟ್ಸ್ ಅಪ್- ಕಾಂಗ್ರೆಸ್ ಕಚೇರಿ ನಮ್ಮ ದೇವಾಲಯ, ದಾಳಿ ಮಾಡಿದರೆ ಸುಮ್ಮನಿರಲ್ಲ: ಆರ್ ಅಶೋಕ್ ಗೆ ಬಿ ಕೆ ಹರಿಪ್ರಸಾದ್ ತಿರುಗೇಟು

ಮೊಟ್ಟೆ ನೋಡಿ ಬಾಂಬ್ ಎನ್ನುವವರ ಜ್ಞಾನಕ್ಕೆ ಹ್ಯಾಟ್ಸ್ ಅಪ್- ಕಾಂಗ್ರೆಸ್ ಕಚೇರಿ ನಮ್ಮ ದೇವಾಲಯ, ದಾಳಿ ಮಾಡಿದರೆ ಸುಮ್ಮನಿರಲ್ಲ: ಆರ್ ಅಶೋಕ್ ಗೆ ಬಿ ಕೆ ಹರಿಪ್ರಸಾದ್ ತಿರುಗೇಟು

by Shwetha
July 23, 2026
0

ಬೆಂಗಳೂರು: ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರ ನಡೆ ಮತ್ತು ಈ ವೇಳೆ ನಡೆದ ಗಲಾಟೆ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ...

ಮೊದಲು ರಾಜೀನಾಮೆ ಕೊಡಿ, ಬಳಿಕ ಚರ್ಚೆ ನಡೆಸಿ’: ಕೇಂದ್ರದ ವಿರುದ್ಧ ವಿಪಕ್ಷ ವಾಗ್ದಾಳಿ

ಮೊದಲು ರಾಜೀನಾಮೆ ಕೊಡಿ, ಬಳಿಕ ಚರ್ಚೆ ನಡೆಸಿ’: ಕೇಂದ್ರದ ವಿರುದ್ಧ ವಿಪಕ್ಷ ವಾಗ್ದಾಳಿ

by Shwetha
July 23, 2026
0

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram