ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ DRI (Directorate of Revenue Intelligence) ಅಧಿಕಾರಿಗಳ ವಶದಲ್ಲಿದ್ದ ನಟಿ ರನ್ಯಾರಾವ್ ಅವರ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ, ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಧೀಶರು ರನ್ಯಾಗೆ, ನಿಮಗೆ ಅಧಿಕಾರಿಗಳು ಯಾವುದೇ ರೀತಿಯ ಬೆದರಿಕೆ ಅಥವಾ ಹಲ್ಲೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಕೇಳುತ್ತಿದ್ದಂತೆ, ನಟಿ ರನ್ಯಾ ಭಾವುಕರಾಗಿ, ನಾನು ಎಮೋಷನಲ್ ಆಗಿ ಸಂಪೂರ್ಣ ಕುಗ್ಗಿಹೋಗಿದ್ದೇನೆ. ಮಾನಸಿಕವಾಗಿ ತೀವ್ರ ಒತ್ತಡ ಅನುಭವಿಸುತ್ತಿದ್ದೇನೆ, ಎಂದು ಕಣ್ಣೀರು ಹಾಕಿದ್ದಾರೆ.
ಇದರಿಂದಾಗಿ ನ್ಯಾಯಾಲಯದ ವಾತಾವರಣ ಸಂವೇದನಶೀಲವಾಗಿದ್ದು, ನಟಿಯ ಭಾವುಕ ಪ್ರತಿಕ್ರಿಯೆ ಪ್ರಕರಣಕ್ಕೆ ಹೊಸ ತಿರುವು ಕೊಡಬಹುದೆಂದು ಊಹಿಸಲಾಗಿದೆ. DRI ಅಧಿಕಾರಿಗಳು ಈ ಪ್ರಕರಣದಲ್ಲಿ ತನಿಖೆ ಮುಂದುವರಿಸಿದ್ದು, ನಟಿಯ ವಿರುದ್ಧ ಗಂಭೀರ ಆರೋಪಗಳಿರುವುದಾಗಿ ತಿಳಿದುಬಂದಿದೆ.
ರನ್ಯಾ ರಾವ್ ಈ ಕೇಸಿನಲ್ಲಿ ಇನ್ನೂ ನ್ಯಾಯಾಂಗ ಬಂಧನದಲ್ಲಿರಬೇಕಾ ಅಥವಾ ಜಾಮೀನು ಸಿಗುತ್ತಾ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಈ ಪ್ರಕರಣ ಈಗ ಚಿತ್ರರಂಗದವರಲ್ಲದೆ, ಸಾರ್ವಜನಿಕ ವಲಯದಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿದೆ.








